![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 30, 2023, 9:38 PM IST
ನವದೆಹಲಿ: ಇತ್ತೀಚೆಗಷ್ಟೇ ದೇಶದಲ್ಲಿ ಟೊಮಾಟೊ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದರು, ಇದೀಗ ಈರುಳ್ಳಿ ಕೂಡ ಟೊಮಾಟೊ ಹಾದಿಯನ್ನೇ ತುಳಿಯುತ್ತಿದ್ದು, ಕಳೆದ 15 ದಿನಗಳಲ್ಲಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ! ಈರುಳ್ಳಿ ಕತ್ತರಿಸುವಾಗ ಮಾತ್ರವಲ್ಲ, ಕೊಳ್ಳುವಾಗಲೂ ಗ್ರಾಹಕರು ಕಣ್ಣೀರು ಹಾಕುವ ಸನ್ನಿವೇಶ ಸೃಷ್ಟಿಯಾಗುತ್ತಿದೆ.
ಮಹಾರಾಷ್ಟ್ರದ ಈರುಳ್ಳಿ ಸಗಟು ವ್ಯಾಪಾರಿಗಳ ಪ್ರಕಾರ, ಕಳೆದ 15 ದಿನಗಳ ಹಿಂದೆ ಕೆಜಿಗೆ 20 -25 ರೂ.ಗಳಿದ್ದ ಈರುಳ್ಳಿ ಬೆಲೆ, ಇದೀಗ 40-45 ರೂ.ಗಳಿಗೆ ಏರಿಕೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ಬೆಲೆ ಕೆಜಿಗೆ 60ರಿಂದ 70 ರೂ.ಗಳ ವರೆಗೂ ತಲುಪುವ ನಿರೀಕ್ಷೆಯೂ ಇದೆ. ಇನ್ನು ಮಹಾರಾಷ್ಟ್ರದಲ್ಲಿರುವ ತಾಪಮಾನ ವ್ಯತ್ಯಯ ಅಲ್ಲಿನ ಪ್ರಮುಖ ರಬಿ ಬೆಳೆ ಆಗಿರುವ ಈರುಳ್ಳಿ ಇಳುವರಿಯ ಮೇಲೂ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಪೂರೈಕೆಯಲ್ಲಿಯೂ ವ್ಯತ್ಯಯ ಉಂಟಾಗಬಹುದು ಎಂದಿದ್ದಾರೆ.
ಈಗಾಗಲೇ ಈರುಳ್ಳಿ ಮೇಲಿನ ರಫ್ತು ತೆರಿಗೆ ವಿಚಾರ ಸಂಬಂಧಿಸಿದಂತೆ ಮುಷ್ಕರಗಳು, ಹರಾಜು ನಿಷೇಧದಿಂದ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. 20 ದಿನದ ಹಿಂದೆ ದಿನಕ್ಕೆ 45 ಟ್ರಕ್ಗಳು ಈರುಳ್ಳಿ ಪೂರೈಕೆ ಮಾಡುತ್ತಿದ್ದವು. ಅದೀಗ ದಿನಕ್ಕೆ 30-35 ಟ್ರಕ್ಗಳಿಗೆ ಬಂದಿದೆ. ಇದೆಲ್ಲದರಿಂದ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಿ ದಿನಬಳಕೆ ಹಾಗೂ ಹೋಟೆಲ್ಗಳು ಬೆಲೆ ಏರಿಕೆ ತಾಪ ಎದುರಿಸಬೇಕಾಗುತ್ತದೆ ಎಂದೂ ವ್ಯಾಪಾರಿಗಳು ಹೇಳಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.