![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 15, 2023, 7:53 AM IST
ವಿಧಾನಸಭೆ ಬಿಜೆಪಿ ಸರಕಾರದ ವಿರುದ್ಧ ವ್ಯಕ್ತವಾಗಿರುವ 40% ಕಮಿಷನ್ ಆರೋಪವೂ ಸೇರಿ 2008ರಿಂದ ಇಲ್ಲಿಯವರೆಗಿನ ಎಲ್ಲ ಪ್ರಕರಣಗಳನ್ನೂ ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ವಂದನ ನಿರ್ಣಯದ ಭಾಷಣ ಸಂದರ್ಭ ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಅವರು, 40% ಕಮಿಷನ್ ಆರೋಪದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರಿದರು. ಇದಕ್ಕೆ ಸಚಿವರಾದ ಆರ್. ಅಶೋಕ, ಮಾಧುಸ್ವಾಮಿ, ಅಶ್ವತ್ಥ ನಾರಾಯಣ ಸೇರಿ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದ ಸಿದ್ದರಾಮಯ್ಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದಾಗ “ಪ್ರಕರಣ ಇತ್ಯರ್ಥವಾಯ್ತಲ್ಲ’ ಎಂದು ಮಾಧುಸ್ವಾಮಿ ವಿವಾದವನ್ನು ತೇಲಿಸಲು ಯತ್ನಿಸಿದರು.
ಸಿದ್ದರಾಮಯ್ಯ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿ ನೀವು ಹೀಗೆ ನಡೆದುಕೊಂಡಿದ್ದೀರಾ? ನಾನು ಆ ಪ್ರಕರಣವನ್ನು ಸಿಬಿಐಗೆ ಕೊಟ್ಟಿರಲಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಕೆ.ಜೆ.ಜಾರ್ಜ್, ಗಣಪತಿ ಪ್ರಕರಣದಲ್ಲಿ ನನ್ನನ್ನು ವಿನಾ ಕಾರಣ ತೇಜೋವಧೆ ಮಾಡಿದ್ದೀರಿ. ಈಗ ಈ ರೀತಿ ಮಾತನಾಡುವುದಕ್ಕೆ ಆತ್ಮಸಾಕ್ಷಿ ಕಾಡುವುದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಕೆರಳಿದ ಮಾಧುಸ್ವಾಮಿ ಇತ್ಯರ್ಥವಾದ ಪ್ರಕರಣ ವನ್ನು ಮುಂದಿಟ್ಟುಕೊಂಡು ಚರ್ಚಿಸುವು ದಾದರೆ ನಾವು ಗಣಪತಿ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಬಹುದು. ಹಾಗೆ ಮಾಡಿದರೆ ನ್ಯಾಯಾಲಯ, ತನಿಖೆ ಸಂಸ್ಥೆಗಳನ್ನು ಪ್ರಶ್ನಿಸದಂತೆ ಆಗುತ್ತದೆ. ಈ ರೀತಿ ಪಾಳೆಗಾರಿಕೆ, ಮದಕರಿ ನಾಯಕ ಇತ್ಯಾದಿ ಹೇಳಿಕೆಗಳ ಚರ್ಚೆ ಬೇಡ. ಆತ್ಮಸಾಕ್ಷಿಯ ಬಗ್ಗೆ ನೀವು ಮಾತನಾಡುವುದು ಎಂದರೆ “ಪರಪ್ಪನ ಅಗ್ರಹಾರದಲ್ಲಿ ಹರಿಶ್ಚಂದ್ರ ನಾಟಕ ಮಾಡಿದಂತಾಗುತ್ತದೆ’ ಎಂದು ವ್ಯಂಗ್ಯವಾಡಿದರು.
ಸದನದಲ್ಲಿ ಸಿದ್ದು ಹಿಂದುತ್ವದ ಜಪ
ನಾನು ಹಿಂದು, ನಾನು ಕೂಡಾ ಒಬ್ಬ ಹಿಂದು. ನಾನು ದೇವರ ವಿರೋಧಿಯೂ ಅಲ್ಲ. ಡಿಸೆಂಬರ್ ತಿಂಗಳಿನಿಂದ ನಾನು ಮಾಂಸಾಹಾರ ಸೇವನೆಯನ್ನೂ ಬಿಟ್ಟಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ವಿನಾ ಕಾರಣ ಸಿದ್ದರಾಮಯ್ಯ ಹಿಂದು ವಿರೋಧಿ ಎಂದು ಬಿಂಬಿಸಲು ಹೋಗುತ್ತಾರೆ. ನಾನು ದೇವರ ವಿರೋಧಿಯಲ್ಲ. ನಾನು ಕೂಡಾ ಹಿಂದು. ನಾನು ಹಿಂದು ಅಲ್ಲವಾದರೆ ನನ್ನ ತಂದೆ-ತಾಯಿ ಸಿದ್ದರಾಮಯ್ಯ ಎಂದು ಏಕೆ ಹೆಸರಿಡುತ್ತಿದ್ದರು? ಮನುವಾದ, ಪುರೋಹಿತ ಶಾಹಿತ್ವ ಈ ದೇಶಕ್ಕೆ ಶಾಪ ಎಂದು ವಿವೇಕಾನಂದರು ಹೇಳಿದ್ದರು. ನಾನು ಗಾಂಧಿ, ವಿವೇಕಾನಂದರು ಪ್ರತಿಪಾದಿಸಿದ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದರು. ನೀವು ಮನುವಾದ, ಪುರೋಹಿತಶಾಹಿತ್ವ ಎನ್ನುವಾಗ ದೇಶಪಾಂಡೆ ಹಾಗೂ ದಿನೇಶ್ ಗುಂಡೂರಾವ್ ಮುಖ ಏಕೆ ನೋಡುತ್ತೀರಿ? ಎಂದು ಕಂದಾಯ ಸಚಿವ ಆರ್.ಅಶೋಕ ವ್ಯಂಗ್ಯವಾಡಿದರು.
ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲು ವಿಚಾರವನ್ನೂ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಕಾಲದಲ್ಲಿ ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಲಾಗಿತ್ತು. ನಿಮ್ಮ ಸರ್ಕಾರ ಬಂದ ಬಳಿಕ ಎರಡು ವರ್ಷ ಏನು ಮಾಡಲಿಲ್ಲ. ಈಗ ಚುನಾವಣಾ ಹೊಸ್ತಿಲಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಕಳಹಿಸಿದ್ದೀರಿ. ಅದು ಅಂಗೀಕಾರವಾಗಿಲ್ಲ. ಹೀಗಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯೋಣ ಎಂದು ಒತ್ತಾಯಿಸಿದರು.
ನನ್ನ ವಿರುದ್ಧ ಪಿಎಫ್ಐ ಪೋಷಕ ಎಂದು ವಿನಾ ಕಾರಣ ಆರೋಪ ಮಾಡಲಾಗುತ್ತಿದೆ. ಆದರೆ ನಿಮ್ಮ ಸರ್ಕಾರ ಏಕೆ ಎಸ್ಡಿಪಿಐ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ? ಎಂದು ಪ್ರಶ್ನಿಸಿದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.