ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ಥಾನ !
Team Udayavani, Feb 5, 2023, 7:15 AM IST
ಇಸ್ಲಾಮಾಬಾದ್: ಆನ್ಲೈನ್ ಮಾಹಿತಿ ಪೂರೈಕೆ ಜಾಲತಾಣ ವಿಕಿಪೀಡಿಯಾದಿಂದ ಧರ್ಮನಿಂದನೆ ಹಾಗೂ ಆಕ್ಷೇಪಾರ್ಹ ಮಾಹಿತಿಗಳನ್ನು ತೆಗೆದು ಹಾಕುವಲ್ಲಿ ವಿಫಲವಾಗಿರುವ ಹಿನ್ನೆಲೆ ಪಾಕಿಸ್ಥಾನ ಸರಕಾರ ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದೆ.
ಇತ್ತೀಚೆಗಷ್ಟೇ ವಿಕಿಪೀಡಿಯಾದಲ್ಲಿ ಇಸ್ಲಾಂ ಕುರಿತಂತೆ ಕೆಲವು ಆಕ್ಷೇಪಾರ್ಹ ಸಂಗತಿಗಳು ಹಾಗೂ ಧರ್ಮನಿಂದನೆ ಸಹಿತ ವಿವಿಧ ಮಾಹಿತಿಗಳು ಹಂಚಿಕೆಯಾಗಿರುವುದನ್ನು ಪಾಕಿಸ್ಥಾನ ದೂರ ಸಂಪರ್ಕ ಪ್ರಾಧಿಕಾರ (ಪಿಟಿಎ) ಗಮನಿಸಿತ್ತು. ಅಲ್ಲದೇ ಆ ವಿಚಾರಗಳನ್ನು ತೆಗೆದು ಹಾಕುವಂತೆಯೂ ತಾಕೀತು ಮಾಡಿತ್ತು.
ದೇಶಾದ್ಯಂತ ವಿಕಿಪೀಡಿಯಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸುವುದಲ್ಲದೇ 48 ಗಂಟೆಗಳ ಗಡುವು ನೀಡಿ, ಮಾಹಿತಿಗಳನ್ನು ಸರಿಪಡಿಸುವಂತೆ ಕೇಳಿತ್ತು. ಆದರೆ ಪಾಕ್ ಸರಕಾರದ ಆದೇಶಕ್ಕೆ ವಿಕಿಪೀಡಿಯಾ ಕಿಮ್ಮತ್ತು ನೀಡದೇ ಇದ್ದ ಕಾರಣ ಸರಕಾರ ದೇಶದಲ್ಲಿ ವಿಕಿಪೀಡಿಯಾ ಸೇವೆಯನ್ನೇ ಸ್ಥಗಿತಗೊಳಿಸಿದೆ. ವಿಕಿಪೀಡಿಯಾದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಬದಲಿಸುವ ಅವಕಾಶವಿರುವುದರಿಂದ ಪಾಕ್ ವಿರುದ್ಧದ ಮಾಹಿತಿಗಳನ್ನೇ ಬಿತ್ತರಿಸಲು ಅದು ಸಹಕಾರಿಯಾಗುತ್ತಿದೆ ಎನ್ನುವ ಮಾತುಗಳೂ ಕೇಳಿ ಬಂದಿವೆ.
ಸಾಲ ಕೊಡದಿದ್ದರೆ ಬಾಂಬ್ ಬೆದರಿಕೆ!: “ಬಲದ ಕೈಯ್ಯಲ್ಲಿ ಕುರಾನ್ ಹಿಡಿದುಕೊಳ್ಳಿ ಮತ್ತು ಎಡ ಕೈಯಲ್ಲಿ ಪರಮಾಣು ಬಾಂಬ್ ಇರುವ ಸೂಟ್ಕೇಸ್ ಹಿಡಿದುಕೊಂಡು ಪಾಕಿಸ್ಥಾನದ ಪ್ರಧಾನಿ ಮತ್ತು ಸಂಪುಟ ಸ್ವೀಡನ್ಗೆ ತೆರಳಬೇಕು. ಅಲ್ಲಿ ನಾವು ಕುರಾನ್ ರಕ್ಷಣೆಗೆ ಬಂದಿದ್ದೇವೆ ಎಂದು ಹೇಳಿ. ಜಗತ್ತಿನ ರಾಷ್ಟ್ರಗಳು ನಿಮ್ಮ ಕಾಲಿಗೆ ಬೀಳದಿದ್ದರೆ ನನ್ನ ಹೆಸರು ಬದಲಾವಣೆ ಮಾಡಿಕೊಳ್ಳುತ್ತೇನೆ’!ಹೀಗೆಂದು ಹೇಳಿದ್ದು ಪಾಕಿಸ್ಥಾನದಲ್ಲಿ ಮೂಲಭೂತ ನಿಲುವು ಹೊಂದಿರುವ ತೆಹ್ರೀಕ್-ಇ-ಲಬೈಕ್ ಪಾಕಿಸ್ಥಾನ್ ಪಕ್ಷದ ನಾಯಕ ಸಾದ್ ರಿಜ್ವಿ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್ ವಿಶ್ವರಾಷ್ಟ್ರಗಳ ಮುಂದೆ ಸಾಲ ಕೇಳುತ್ತಿರುವುದನ್ನು ಖಂಡಿಸಿದ ರಿಜ್ವಿ ಬೇಡುವುದರ ಬದಲು ಕುರಾನ್ ಮತ್ತು ಪರಮಾಣು ಬಾಂಬ್ ಹಿಡಿದುಕೊಂಡು ರಾಷ್ಟ್ರಗಳನ್ನು ಬೆದರಿಸಿಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.