ಲಾಕ್‌ಡೌನ್‌: ಬ್ಯಾಂಕ್‌ಗೆ ಹೋಗಿ ಹಣ ತಂದುಕೊಡುವಿರಾ!?


Team Udayavani, Apr 16, 2020, 10:33 AM IST

ಲಾಕ್‌ಡೌನ್‌: ಬ್ಯಾಂಕ್‌ಗೆ ಹೋಗಿ ಹಣ ತಂದುಕೊಡುವಿರಾ!?

ಮಂಗಳೂರು: ಕೋವಿಡ್ ಲಾಕ್‌ಡೌನ್‌ ದಿನಗಳಲ್ಲಿ ಜನಸಾಮಾನ್ಯರಿಗೆ ಆವಶ್ಯಕ ಸೇವೆಗಳನ್ನು ಒದಗಿಸುವುದಕ್ಕೆ ಕೋವಿಡ್ ವಾರಿಯರ್, ವಾರ್‌ರೂಮ್‌ ಆದಿಯಾಗಿ ಅನೇಕ ಸಹಾಯ ಹಸ್ತಗಳಿವೆ. ಸಹಾಯ ಕೋರಿ ಇಲ್ಲಿಗೆ ಬರುವ ಕರೆಗಳು ತರಹೇವಾರಿ ಆಗಿರುತ್ತವೆ ಎಂಬುದಕ್ಕೆ ಈ ಹಿಂದೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಮೊಟ್ಟೆ ಮತ್ತು ಮ್ಯಾಗಿಗೆ ಬೇಡಿಕೆ ಮಂಡಿಸಿದ್ದೇ ಸಾಕ್ಷಿ. ಅಂಥ ಇನ್ನೊಂದು ಪ್ರಕರಣ ಇದು.

ನಗರದ ನಿವೃತ್ತ ಶಿಕ್ಷಕರೊಬ್ಬರಿಗೆ ದಿನಸಿ ಖರೀದಿಗೆ ಹಣ ಬೇಕಾಗಿತ್ತು. ಬ್ಯಾಂಕ್‌ಗೆ ವಾಹನದಲ್ಲಿ ತೆರಳಬೇಕು. ಲಾಕ್‌ಡೌನ್‌ನಡಿ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಇರುವುದರಿಂದ ಕಾರು ಹೊರತೆಗೆಯಲು ಮನಸೊÕಪ್ಪಲಿಲ್ಲ. ಕಾಲ್ನಡಿಗೆಯಲ್ಲಿ ತೆರಳಲು ವಯಸ್ಸಿನ ಸಮಸ್ಯೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್‌ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದರು.

ಕರೆ ಸ್ವೀಕರಿಸಿದ ವಾರ್‌ ರೂಂ ಸಿಬಂದಿಯಿಂದ “ಅನುಮತಿ ಇರುವ ವಾಹನದ ವ್ಯವಸ್ಥೆ ತಮಗೆ ಮಾಡಿಕೊಡುತ್ತೇವೆ, ಅದರಲ್ಲಿ ಬ್ಯಾಂಕ್‌ಗೆ ತೆರಳಿ ಹಣ ಪಡೆಯಿರಿ’ ಎಂಬ ಸಲಹೆ ಸಿಕ್ಕಿತು. ಆದರೆ ನಿವೃತ್ತ ಶಿಕ್ಷಕರು ಅದಕ್ಕೆ ಒಪ್ಪಲಿಲ್ಲ. ಲಾಕ್‌ಡೌನ್‌ ಇರುವಾಗ ಹೊರಗೆ ಹೋಗುವುದು ತಪ್ಪಲ್ಲವೇ ಎಂಬುದು ಅವರ ವಾದ. ವಾರ್‌ ರೂಂ ಸಿಬಂದಿಗೂ ಇದು ಸರಿಯೆನಿಸಿತು. ಅವರು “ಇನ್ನೇನು ಮಾಡೋಣ’ ಎಂದು ಚೆಂಡನ್ನು ಶಿಕ್ಷಕರ ಅಂಗಳಕ್ಕೇ ದೂಡಿದರು. “ವಾರ್‌ ರೂಂನ ನಂಬಿಕಸ್ತ ಮತ್ತು ಜಿಲ್ಲಾಡಳಿತದ ಅನುಮತಿ ಇರುವ ಸಿಬಂದಿಯೊಬ್ಬರನ್ನು ನನ್ನ ಮನೆಗೆ ಕಳುಹಿಸಿ’ ಎಂದು ಕೇಳಿಕೊಂಡರು ನಿವೃತ್ತ ಶಿಕ್ಷಕರು.

ಲಾಕ್‌ಡೌನ್‌ ಉಲ್ಲಂ ಸಿಲ್ಲ
ಇದರಂತೆ ಸಿಬಂದಿಯೊಬ್ಬರು ಶಿಕ್ಷಕರ ಮನೆಗೆ ತೆರಳಿದರು. ಅವರು ಚೆಕ್‌ ಬರೆದು ಕೊಟ್ಟು ಬ್ಯಾಂಕ್‌ಗೆ
ಹೋಗಿ ಹಣ ಡ್ರಾ ಮಾಡಿ ತಂದು ಕೊಡುವಂತೆ ವಿನಂತಿಸಿದರು. ಸಿಬಂದಿ ಹಾಗೆಯೇ ಮಾಡಿದರು. ನಿವೃತ್ತ ಶಿಕ್ಷಕರು ಲಾಕ್‌ಡೌನ್‌ ಉಲ್ಲಂಘನೆ ಮಾಡದೆಯೇ ವಾರ್‌ರೂಂ ನೆರವು ಪಡೆದು ಹಣವನ್ನು ನಗದಾಗಿ ಪಡೆಯುವುದಕ್ಕಾಯಿತು!

ಚಿತ್ರ ವಿಚಿತ್ರ “ನೆರವಿಗೆ ಮನವಿ!’
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್‌ ರೂಂ ಮತ್ತು ದ.ಕ. ಜಿಲ್ಲಾಡಳಿತದ ಅಧೀನ ಮನಪಾದಲ್ಲಿರುವ ಕೊರೊನಾ ಮೇಲ್ವಿಚಾರಣ ಕೇಂದ್ರದಲ್ಲಿ ದಾಖಲಾಗುತ್ತಿರುವ ಚಿತ್ರವಿಚಿತ್ರ “ನೆರವಿಗೆ ಮನವಿ’ಗಳ ಸ್ಯಾಂಪಲ್‌ ಇದು. ಇತ್ತೀಚೆಗೆ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು “ಮೊಟ್ಟೆ ಹಾಗೂ ಮ್ಯಾಗಿ ಬೇಕು’ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್‌ ಮಾಡಿದ್ದರು. ರಾಜ್ಯ ನಗರಾಭಿವೃದ್ಧಿ ಇಲಾಖೆ ಅಧಿಕಾರಿ ಇದನ್ನು ನೋಡಿ ಸಂಸದರ ವಾರ್‌ ರೂಂಗೆ ಸೂಚಿಸಿ ಆಕೆ ಕೇಳಿದ್ದನ್ನು ಕೊಟ್ಟು ಬಂದಿದ್ದರು.

“ಖರ್ಚಿಗೆ ಹಣ ಕೊಡಿ… ಮದ್ಯ ಕೊಡಿ…’
ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟ ಸಂಪೂರ್ಣ ಬಂದ್‌ ಆಗಿದ್ದು ಹಲವರಿಗೆ ಸಮಸ್ಯೆಯಾಗಿದೆ. ಹತಾಶರಾದ ಕೆಲವರು ಸಂಸದರ ವಾರ್‌ ರೂಂ, ಜಿಲ್ಲಾಡಳಿತದ ಕೇಂದ್ರಕ್ಕೆ ಕರೆ ಮಾಡಿ ಮದ್ಯ ನೀಡುವಂತೆ ಗೋಗರೆಯುತ್ತಿದ್ದಾರೆ. ಇನ್ನೂ ಕೆಲವರು ಖರ್ಚಿಗೆ ಹಣವಿಲ್ಲ; ಸಹಾಯ ಮಾಡಿ ಎನ್ನುತ್ತಿದ್ದಾರೆ. ಗ್ಯಾಸ್‌ ಖಾಲಿ, ಕರೆಂಟ್‌ ಹೋಗಿದೆ, ಬೈಕಿನ ಇಎಂಐ ಪಾವತಿಸುತ್ತೀರಾ, ಮೊಟ್ಟೆ ಕೊಡಿ… ಹೀಗೂ ಕರೆ ಮಾಡುವವರಿದ್ದಾರೆ!

ಟಾಪ್ ನ್ಯೂಸ್

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.