ಮಧ್ಯಾಹ್ನದ ಬಿಸಿಯೂಟ ಇನ್ನು ಪಿಎಂ-ಪೋಷಣ್
Team Udayavani, Sep 30, 2021, 6:15 AM IST
ಹೊಸದಿಲ್ಲಿ: ದೇಶದ 11.2 ಲಕ್ಷ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವುದಕ್ಕಾಗಿ ಪ್ರಧಾನಮಂತ್ರಿ ಪೋಷಣ್ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
ಯೋಜನೆ 5 ವರ್ಷಗಳ ಅವಧಿಯದ್ದಾಗಿದ್ದು, 1.31 ಲಕ್ಷ ಕೋಟಿ ರೂ.ಗಳನ್ನು ವ್ಯಯಿಸಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ಬಿಸಿಯೂಟದ ಬದಲು ಪಿಎಂ -ಪೋಷಣ್ ಯೋಜನೆ ಜಾರಿಯಾಗಲಿದೆ.
ಸಚಿವ ಸಂಪುಟವು ಸರಕಾರಿ ಸ್ವಾಮ್ಯದ ರಫ್ತು ಸಾಲ ಖಾತರಿ ನಿಗಮ (ಇಸಿಜಿಸಿ)ಕ್ಕೆ 4,400 ಕೋ.ರೂ. ಬಂಡವಾಳ ಒದಗಿಸುವ ಮತ್ತು ಅದರ ಷೇರು ಮಾರಾಟಕ್ಕೂ ಅಂಗೀಕಾರ ನೀಡಿದೆ. ರಾಷ್ಟ್ರೀಯ ರಫ್ತು ವಿಮಾ ಖಾತೆ (ಎನ್ಇಐಎ) ಯೋಜನೆಯ ವಿಸ್ತರಣೆ ಮತ್ತು ಅದಕ್ಕೆ 5 ವರ್ಷಗಳ ಅವಧಿಗೆ 1,650 ಕೋ.ರೂ.ಗಳ ಸಹಾಯಾನುದಾನ ಬಿಡುಗಡೆಗೂ ಅಸ್ತು ಎಂದಿದೆ.
ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ
ಹೊಸತೇನು?
-ಬಾಲವಾಡಿ ಮಕ್ಕಳಿಗೂ ವಿಸ್ತರಣೆ
-ಹಬ್ಬಗಳ ಸಂದರ್ಭ ಮಕ್ಕಳಿಗೆ ವಿಶೇಷ ಭೋಜನ ಒದಗಿಸಲು ಸಮುದಾಯಕ್ಕೆ ಅವಕಾಶ
-ಶಾಲಾ ಕೈತೋಟದಲ್ಲಿ ಬೆಳೆದ ಪೌಷ್ಟಿಕಾಂಶ
ಯುಕ್ತ ಹಣ್ಣು-ತರಕಾರಿ ಬಳಕೆ
-ಸ್ಥಳೀಯ, ಸಾಂಪ್ರದಾಯಿಕ ಆಹಾರಕ್ಕೆ ಒತ್ತು ನೀಡಲು ಅಡುಗೆ ಸ್ಪರ್ಧೆ
-ರೈತ ಉತ್ಪನ್ನ ಸಂಘಗಳು, ಸ್ತ್ರೀಶಕ್ತಿ ಗುಂಪುಗಳ ಒಳಗೊಳ್ಳುವಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!
Jammu – Kashmir: ಮತ್ತೆ ಉಗ್ರರಿಂದ ಗುಂಡಿನ ದಾಳಿ… ಓರ್ವ ವಲಸೆ ಕಾರ್ಮಿಕನಿಗೆ ಗಾಯ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!
MUST WATCH
ಹೊಸ ಸೇರ್ಪಡೆ
BBK11: ಮತ್ತೆ ʼಬಿಗ್ಬಾಸ್ʼ ಕಾರ್ಯಕ್ರಮದ ವಾಹಿನಿಗೆ ಬಂದ ಲಾಯರ್ ಜಗದೀಶ್; ವೀಕ್ಷಕರು ಖುಷ್
Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!
INDvsNZ: ರಾಹುಲ್, ಕುಲದೀಪ್, ಸಿರಾಜ್ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ
Muddebihal: ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು
Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.