Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ


Team Udayavani, Nov 8, 2024, 6:00 AM IST

Air-Delhi

ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ವಾಯುಮಾಲಿನ್ಯ ತೀವ್ರಗೊಂಡಿದ್ದು, ಗಾಳಿಯ ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆಮಟ್ಟದಲ್ಲಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಎರಡು ದಿನಗಳ ಹಿಂದೆಯಷ್ಟೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ನಿರ್ವಹಣೆಗೆ ಸಂಬಂಧಿಸಿದಂತೆ ಛೀಮಾರಿ ಹಾಕಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ‌ ಕೃಷಿ ತ್ಯಾಜ್ಯ ಸುಡುವ ರೈತರಿಗೆ ದುಪ್ಪಟ್ಟು ದಂಡ ವಿಧಿಸುವ ನಿರ್ಧಾರವನ್ನು ಕೈಗೊಂಡಿದೆ.

ದೀಪಾವಳಿ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಪಟಾಕಿ ಮೇಲಿನ ನಿಷೇಧ ಪರಿಣಾಮಕಾರಿಯಾಗಿ ಜಾರಿಯಾಗದಿರುವುದು ಮತ್ತು ನೆರೆ ರಾಜ್ಯಗಳಲ್ಲಿ ರೈತರು ನಿರ್ಬಂಧದ ಹೊರತಾಗಿಯೂ ತಮ್ಮ ಹೊಲಗಳಲ್ಲಿ ಕಳೆ ಸುಡುವುದನ್ನು ಮುಂದುವರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ ದಿಲ್ಲಿ ಮತ್ತು ಕೇಂದ್ರ ಸರಕಾರ‌ಗಳೆರಡನ್ನೂ ತರಾಟೆಗೆ ತೆಗೆದುಕೊಂಡಿತ್ತಲ್ಲದೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಗಾಳಿಯ ಗುಣಮಟ್ಟ ಸುಧಾರಣೆಗಾಗಿ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆಯೂ ತಾಕೀತು ಮಾಡಿತ್ತು. ಇದೇ ವೇಳೆ ದಿಲ್ಲಿ ಮತ್ತು ಆಸುಪಾಸಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ(ಎಕ್ಯುಐ) 367ಕ್ಕೆ ಕುಸಿದಿದ್ದು ಅತ್ಯಂತ ಕಳಪೆ ಮಟ್ಟದಲ್ಲಿಯೇ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಚಳಿ ತೀವ್ರಗೊಳ್ಳಲಿದ್ದು, ಎಕ್ಯುಐ 400 ಗಡಿ ದಾಟಿ ತೀವ್ರ ಕಳಪೆ ಹಂತವನ್ನು ತಲುಪಲಿದೆ. ಒಂದು ವೇಳೆ ಎಕ್ಯುಐ 450 ಗಡಿ ದಾಟಿದಲ್ಲಿ ಆ ಪರಿಸ್ಥಿತಿಯನ್ನು ಅತ್ಯಂತ ಅಪಾಯಕಾರಿ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕೊನೆಗೂ ಕೇಂದ್ರ ಸರಕಾರ‌ ರಾಜಧಾನಿ ಪ್ರದೇಶದ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದಿಷ್ಟು ಕಠಿಣ ನಿರ್ಧಾರವನ್ನು ಕೈಗೊಂಡಿದೆ.

ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ರೈತರು ತಮ್ಮ ಹೊಲಗದ್ದೆಗಳಲ್ಲಿ ಕಳೆ, ತ್ಯಾಜ್ಯಗಳನ್ನು ರಾಶಿ ಹಾಕಿ ಸುಡುವುದರಿಂದ ದಟ್ಟ ಹೊಗೆ ದೇಶದ ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಬಗ್ಗೆ ದಿಲ್ಲಿ ಸರಕಾರ‌ ಮತ್ತು ಈ ಎರಡು ರಾಜ್ಯಗಳ ಸರಕಾರ‌ಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಬಂದಿದ್ದು, ಸುಪ್ರೀಂಕೋರ್ಟ್‌ ಮತ್ತು ಕೇಂದ್ರ ಸರಕಾರ‌ದ ನಿರ್ದೇಶನದಂತೆ ತ್ಯಾಜ್ಯ ಸುಡುವಿಕೆಗೆ ಈ ರಾಜ್ಯಗಳ ಗಡಿಭಾಗದಲ್ಲಿ ನಿರ್ಬಂಧ ವಿಧಿಸಲಾಗಿದೆ.

ಆದರೆ ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಪರಿಣಾಮ ಇದೊಂದು ವಾರ್ಷಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈಗ ಕೇಂದ್ರ ಸರಕಾರ‌ ಈ ನಿರ್ಬಂಧವನ್ನು ಉಲ್ಲಂ ಸುವ ರೈತರಿಗೆ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಿದ್ದು ಆ ಮೂಲಕವಾದರೂ ರೈತರ ಈ ಚಾಳಿಗೆ ಕಡಿವಾಣ ಬಿದ್ದು ರಾಜಧಾನಿಯಲ್ಲಿನ ವಾತಾವರಣ ಒಂದಿಷ್ಟು ಸುಧಾರಿಸಲಿದೆ ಎಂಬ ದೂರದ ಆಶಾಭಾವ ದಿಲ್ಲಿಯ ನಿವಾಸಿಗಳಲ್ಲಿ ಮೂಡಿದೆ.

ದಿಲ್ಲಿ ಮತ್ತು ಅಕ್ಕಪಕ್ಕದ ಪ್ರದೇಶಗಳ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ದಿಲ್ಲಿ ಸರಕಾರ‌ ಇನ್ನಷ್ಟು ಬಿಗಿಕ್ರಮಗಳನ್ನು ಕೈಗೊಳ್ಳಬೇಕು. ನಿಷೇಧ, ದಂಡದ ಜತೆಜತೆಯಲ್ಲಿ ಈ ಸಮಸ್ಯೆಗೆ ಇತರ ಕಾರಣಗಳಾದ ತೈಲೋತ್ಪನ್ನ ಚಾಲಿತ ವಾಹನಗಳು ಓಡಾಟಕ್ಕೆ ಕಡಿವಾಣ, ದಟ್ಟ ಹೊಗೆ ಹೊರಸೂಸುವ ಕೈಗಾರಿಕೆಗಳನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸುವ ಸಂಬಂಧ ನಿರ್ದಿಷ್ಟ ಮಾರ್ಗಸೂಚಿಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾದ ತುರ್ತು ಅನಿವಾರ್ಯತೆ ಇದೆ. ಹೀಗಾದಾಗ ರಾಜಧಾನಿಯ ವಾಯುಮಾಲಿನ್ಯ ಸಮಸ್ಯೆಯ ತೀವ್ರತೆ ಕಡಿಮೆಯಾಗಬಹುದು. ಈ ದಿಸೆಯಲ್ಲಿ ಕೇಂದ್ರ ಮತ್ತು ದಿಲ್ಲಿ ಸರಕಾರ‌ ಇಚ್ಛಾಶಕ್ತಿ ಮತ್ತು ಬದ್ಧತೆಯನ್ನು ಪ್ರದರ್ಶಿಸದೇ ಹೋದಲ್ಲಿ ವಾಯುಮಾಲಿನ್ಯದ ಸಮಸ್ಯೆಯಿಂದ ದಿಲ್ಲಿ ಮುಕ್ತಗೊಳ್ಳುವುದು ಕಷ್ಟಸಾಧ್ಯ.

ಟಾಪ್ ನ್ಯೂಸ್

Chamarajanagara: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ನಿಧನ

MUDA Case: High Court gives relief to Siddaramaiah; Court refuses to allow CBI investigation

MUDA Case: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ನಿರಾಳ; ಸಿಬಿಐ ತನಿಖೆಗೆ ಒಪ್ಪದ ಪೀಠ

ಬಿಎಸ್‌ವೈಗೆ ತಾತ್ಕಾಲಿಕ ರಿಲೀಫ್;‌ ಜಾಮೀನು ಕೊಟ್ಟರೂ ಕೇಸ್‌ ರದ್ದತಿ ಮಾಡದ ಹೈಕೋರ್ಟ್

ಬಿಎಸ್‌ವೈಗೆ ತಾತ್ಕಾಲಿಕ ರಿಲೀಫ್;‌ ಜಾಮೀನು ಕೊಟ್ಟರೂ ಕೇಸ್‌ ರದ್ದತಿ ಮಾಡದ ಹೈಕೋರ್ಟ್

EMI ಪಾವತಿದಾರರಿಗೆ ಸಿಹಿ ಸುದ್ದಿ: ಗೃಹಸಾಲದ ಬಡ್ಡಿ ಕಡಿತ- 5 ವರ್ಷದ ಬಳಿಕ ರೆಪೋ ದರ ಇಳಿಕೆ

EMI ಪಾವತಿದಾರರಿಗೆ ಸಿಹಿ ಸುದ್ದಿ: ಗೃಹಸಾಲದ ಬಡ್ಡಿ ಕಡಿತ- 5 ವರ್ಷದ ಬಳಿಕ ರೆಪೋ ದರ ಇಳಿಕೆ

Shocking: ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿರುವ ರೈಲಿನಿಂದ ಹೊರ ದಬ್ಬಿದ ಕಾಮುಕರು

Tragedy: ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿರುವ ರೈಲಿನಿಂದ ಹೊರ ದಬ್ಬಿದ ಕಾಮುಕರು

High Court: ಕಂಬಳ ಆಯೋಜನೆ ಬಗ್ಗೆ ನಮ್ಮ ಆಕ್ಷೇಪವಿಲ್ಲ, ಆದರೆ…: ಪೆಟಾ ವಾದ ಮಂಡನೆ ಏನು?

High Court: ಕಂಬಳ ಆಯೋಜನೆ ಬಗ್ಗೆ ನಮ್ಮ ಆಕ್ಷೇಪವಿಲ್ಲ, ಆದರೆ…: ಪೆಟಾ ವಾದ ಮಂಡನೆ ಏನು?

Bengaluru: ಪತ್ನಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನಿಗೆ ಮದ್ಯ ಕುಡಿಸಿ ಹಲ್ಲೆ: ಆರೋಪಿ ಬಂಧನ

Bengaluru: ಪತ್ನಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನಿಗೆ ಮದ್ಯ ಕುಡಿಸಿ ಹಲ್ಲೆ: ಆರೋಪಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Plastic-2

Editorial: ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೆ ಬರಲಿ

money-Currency

Editorial: ಮೈಕ್ರೋ ಫೈನಾನ್ಸ್‌ಗೆ ಮೂಗುದಾರ ಅಧ್ಯಾದೇಶ ಕಟ್ಟುನಿಟ್ಟಾಗಿ ಜಾರಿ ಆಗಲಿ

ಸರಕಾರಿ ಶಿಕ್ಷಣ ಸಂಸ್ಥೆಗಳ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗಲಿ

ಸರಕಾರಿ ಶಿಕ್ಷಣ ಸಂಸ್ಥೆಗಳ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗಲಿ

1

Editorial: ಬೇಸಗೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಆಕಸ್ಮಿಕ; ಈಗಿನಿಂದಲೇ ಮುನ್ನೆಚ್ಚರಿಕೆ ಇರಲಿ

6

Editorial: ಗ್ರಾಮೀಣ ಭಾಗದಲ್ಲಿ ಪಶು ವೈದ್ಯರ ಸೇವೆ ನಿರಂತರ ಸಿಗಲಿ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

Chamarajanagara: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ನಿಧನ

MUDA Case: High Court gives relief to Siddaramaiah; Court refuses to allow CBI investigation

MUDA Case: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ನಿರಾಳ; ಸಿಬಿಐ ತನಿಖೆಗೆ ಒಪ್ಪದ ಪೀಠ

ಬಿಎಸ್‌ವೈಗೆ ತಾತ್ಕಾಲಿಕ ರಿಲೀಫ್;‌ ಜಾಮೀನು ಕೊಟ್ಟರೂ ಕೇಸ್‌ ರದ್ದತಿ ಮಾಡದ ಹೈಕೋರ್ಟ್

ಬಿಎಸ್‌ವೈಗೆ ತಾತ್ಕಾಲಿಕ ರಿಲೀಫ್;‌ ಜಾಮೀನು ಕೊಟ್ಟರೂ ಕೇಸ್‌ ರದ್ದತಿ ಮಾಡದ ಹೈಕೋರ್ಟ್

EMI ಪಾವತಿದಾರರಿಗೆ ಸಿಹಿ ಸುದ್ದಿ: ಗೃಹಸಾಲದ ಬಡ್ಡಿ ಕಡಿತ- 5 ವರ್ಷದ ಬಳಿಕ ರೆಪೋ ದರ ಇಳಿಕೆ

EMI ಪಾವತಿದಾರರಿಗೆ ಸಿಹಿ ಸುದ್ದಿ: ಗೃಹಸಾಲದ ಬಡ್ಡಿ ಕಡಿತ- 5 ವರ್ಷದ ಬಳಿಕ ರೆಪೋ ದರ ಇಳಿಕೆ

Shocking: ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿರುವ ರೈಲಿನಿಂದ ಹೊರ ದಬ್ಬಿದ ಕಾಮುಕರು

Tragedy: ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿರುವ ರೈಲಿನಿಂದ ಹೊರ ದಬ್ಬಿದ ಕಾಮುಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.