![1-a-baaba](https://www.udayavani.com/wp-content/uploads/2024/07/1-a-baaba-415x233.jpg)
Eshwarappa: ಮೋದಿ ರಾಘವೇಂದ್ರನ ಮನೆ ಆಸ್ತಿ ಅಲ್ಲ- ನನ್ನ ಸ್ಪರ್ಧೆಗೆ ಸಂದೇಶ: ಈಶ್ವರಪ್ಪ
ಚುನಾವಣ ಚಾಣಕ್ಯ ಅಮಿತ್ ಶಾ ನಿರ್ಣಯ ಸರಿ ಇದೆ...
Team Udayavani, Apr 5, 2024, 1:10 PM IST
![Eshwarappa: ಮೋದಿ ರಾಘವೇಂದ್ರನ ಮನೆ ಆಸ್ತಿ ಅಲ್ಲ- ನನ್ನ ಸ್ಪರ್ಧೆಗೆ ಸಂದೇಶ: ಈಶ್ವರಪ್ಪ](https://www.udayavani.com/wp-content/uploads/2024/04/Eshwarappa-1-620x354.jpg)
ಶಿವಮೊಗ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಾಗ ಅವರಿಗೆ ಗೌರವ ಕೊಟ್ಟು ನಾನು ದಿಲ್ಲಿಗೆ ಹೋಗಿದ್ದೆ. ಆದರೆ ಅವರು
ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವುದು
ಈಗ ಮುಗಿದು ಹೋದ ಕಥೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೇಶ್ ಜೀ ಮನೆಗೆ ಭೇಟಿ ನೀಡಲು ಸೂಚಿಸಿದ್ದರು. ಅಮಿತ್ ಶಾ ಕಚೇರಿಯವರು ಅವರ ಕರೆ ಬಂದ ಮೇಲೆ ಕರೆಯುತ್ತೇವೆ ಎಂದರು. ಬಳಿಕ ಶಾ ಅವರು ನನ್ನ ಭೇಟಿಯ ಅಗತ್ಯ ಇಲ್ಲ ಎಂದಿದ್ದಾರೆ ಎಂದು ಕಚೇರಿಯವರು ತಿಳಿಸಿದರು. ಇದರ ಅರ್ಥ ನೀನು ಶಿವಮೊಗ್ಗಕ್ಕೆ ವಾಪಸ್ ಹೋಗು, ಚುನಾವಣೆಗೆ ಸ್ಪರ್ಧಿಸಿ ಗೆಲ್ಲು ಎಂಬುದಾಗಿದೆ. ಒಂದೊಮ್ಮೆ ಮತ್ತೆ ದಿಲ್ಲಿಯಿಂದ ಕರೆ ಬಂದರೂ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ ಸ್ಪರ್ಧೆಯಿಂದ ಮಾತ್ರ ಹಿಂದೆ ಸರಿಯುವುದಿಲ್ಲ ಎಂದರು.
ಈ ಹಿಂದೆ ಫೋನ್ ಮಾಡಿದಾಗ “ಸ್ಪರ್ಧಿಸದಂತೆ ಸೂಚನೆ ನೀಡಬೇಡಿ’ ಎಂದು ಅವರಿಗೆ ತಿಳಿಸಿದ್ದೆ. ಆಗ ಅಮಿತ್ ಶಾ ಪ್ರಾರ್ಥನೆ ಮಾಡುತ್ತೇನೆ ಅಂದರು. ಅವರ ನಿರ್ಣಯವನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ರಾಜಕೀಯ ಚಾಣಕ್ಯ ಅವರು. ರಾಜ್ಯದಲ್ಲಿ ಬಿಜೆಪಿ ಶುದ್ಧೀಕರಣ ಆಗಬೇಕು. ಕುಟುಂಬ ರಾಜಕೀಯ ನಿಲ್ಲಬೇಕು ಎಂಬುದು ಅವರ ಉದ್ದೇಶ ಎಂದರು.
ಮೋದಿ ರಾಘವೇಂದ್ರನ ಮನೆ ಆಸ್ತಿ ಅಲ್ಲ: ಮೋದಿ ಫೋಟೋ ಬಳಸಿಕೊಳ್ಳಬಾರದು ಎನ್ನಲು ಮೋದಿ ಅವರು ರಾಘವೇಂದ್ರ ಮನೆ ಆಸ್ತಿ ಅಲ್ಲ. ಮೋದಿ ವಿಶ್ವ ನಾಯಕ. ಮೋದಿಯನ್ನು ನಾನು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಆದರೆ ಯಡಿಯೂರಪ್ಪ ಅವರ ಹೃದಯದಲ್ಲಿ ಬೇರೆಯವರೇ ಇದ್ದಾರೆ. ಬಿ.ವೈ.ವಿಜಯೇಂದ್ರ ಅವರು ಈಶ್ವರಪ್ಪರನ್ನು ಮನವೊಲಿಸಲಾಗುವುದು ಎಂದು ಹೇಳಿ ಎಲ್ಲರನ್ನೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಯಾರೂ ಸಂಧಾನಕ್ಕೆ ಬರುವುದಿಲ್ಲ. ಸಹೋದರನ ಸೋಲಿನ
ಭೀತಿಯಿಂದ ವಿಜಯೇಂದ್ರ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಷಡ್ಯಂತ್ರ ಮಾಡಿಯೇ ಅಭ್ಯಾಸ. ಮತ್ತೂಮ್ಮೆ ಈಶ್ವರಪ್ಪನನ್ನು ಸಮಾಧಾನಗೊಳಿಸಲಾಗುವುದು ಎಂದು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಹೇಳಿದರು.
ಗೀತಾ ಬಗ್ಗೆ ಹಗುರವಾಗಿ ಮಾತನಾಡಿಲ್ಲ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರನ್ನು ಡಮ್ಮಿ ಎಂದು ಹಗುರವಾಗಿ ಹೇಳಿಲ್ಲ. ಗೀತಾ ನನ್ನ ಸಹೋದರಿ. ಬಿ.ಎಸ್. ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಈ ಹಿಂದೆ ಶಿಕಾರಿಪುರದಲ್ಲಿ ಹೊಂದಾಣಿಕೆ ಮಾಡಿಕೊಂಡು ಲಿಂಗಾಯತ ನಾಯಕ ನಾಗರಾಜ ಗೌಡ ಹಾಗೂ ಹಿಂದುಳಿದ ನಾಯಕ ಗೋಣಿ ಮಾಲತೇಶ್ ಭವಿಷ್ಯ ಹಾಳು ಮಾಡಿದರು. ಹೊಂದಾಣಿಕೆ ರಾಜಕೀಯ ಮಾಡಿಕೊಂಡಿಲ್ಲವೆಂದು ಮಧು ಬಂಗಾರಪ್ಪ ಹೇಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
ಟಾಪ್ ನ್ಯೂಸ್
![1-a-baaba](https://www.udayavani.com/wp-content/uploads/2024/07/1-a-baaba-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ](https://www.udayavani.com/wp-content/uploads/2024/06/PM-1-150x101.jpg)
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
![Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!](https://www.udayavani.com/wp-content/uploads/2024/06/Gopi-1-150x80.jpg)
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
![1-sadsadasd](https://www.udayavani.com/wp-content/uploads/2024/06/1-sadsadasd-150x92.jpg)
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
![Sometimes governments topple in a single day…: Mamata gives big hint](https://www.udayavani.com/wp-content/uploads/2024/06/mamata-1-150x83.jpg)
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
![Modi pays homage to Mahatma Gandhi and Vajpayee memorial before taking oath](https://www.udayavani.com/wp-content/uploads/2024/06/rajghat-150x83.jpg)
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಹೊಸ ಸೇರ್ಪಡೆ
![1-a-baaba](https://www.udayavani.com/wp-content/uploads/2024/07/1-a-baaba-150x84.jpg)
Hathras stampede;‘ಸತ್ಸಂಗ’ದ ವೇಳೆ ಕಾಲ್ತುಳಿತ : ಮೃತರ ಸಂಖ್ಯೆ 116ಕ್ಕೆ
![Barbados](https://www.udayavani.com/wp-content/uploads/2024/07/huricanbe-150x83.jpg)
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
![Court-Symbol](https://www.udayavani.com/wp-content/uploads/2024/07/Court-Symbol-1-150x90.jpg)
Dakshina Kannada: ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನಿವೃತ್ತ ಕಮಾಂಡೆಂಟ್ ದೋಷಮುಕ್ತ
![Agriculture-Tracator](https://www.udayavani.com/wp-content/uploads/2024/07/Agriculture-Tracator-150x90.jpg)
Agriculture: ಭತ್ತದ ಕೃಷಿಗೆ ಯಂತ್ರವೂ ಸಿಗುತ್ತಿಲ್ಲ, ಕಾರ್ಮಿಕರೂ ಬರುತ್ತಿಲ್ಲ
![4-manipal](https://www.udayavani.com/wp-content/uploads/2024/07/4-manipal-150x90.jpg)
Manipal: ಅನಾಮಧೇಯ ಆ್ಯಪ್ ಡೌನ್ಲೋಡ್ ಮಾಡಿ ವಂಚನೆಗೊಳಗಾದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.