![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 27, 2021, 6:50 AM IST
ಢಾಕಾ: ಬಾಂಗ್ಲಾದೇಶವನ್ನು ಶತಾಯ ಗತಾಯ ವಶಕ್ಕೆ ಪಡೆಯಲು ಹವಣಿಸಿದ್ದ ಪಾಕಿಸ್ಥಾನ ಸೇನೆ, 1971ರಲ್ಲಿ ಬಾಂಗ್ಲಾದೇಶದಲ್ಲಿ ನರಮೇಧ, ಅತ್ಯಾಚಾರದಂಥ ಹೇಯ ಕೃತ್ಯಗಳನ್ನು ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿಗಾಗಿ ತೆರಳಿರುವ ಅವರು, ಢಾಕಾದಲ್ಲಿ ಶುಕ್ರವಾರ ಬಾಂಗ್ಲಾ ರಾಷ್ಟ್ರಪಿತ ಶೇಖ್ ಮುಜಿಬುರ್ ರಹಮಾನ್ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬಾಂಗ್ಲಾದೇಶದಲ್ಲಿ ಪಾಕಿಸ್ಥಾನ ಸೇನೆ ನಡೆಸಿದ ವಿಧ್ವಂಸಕ ಹಾಗೂ ಹೇಯ ಕೃತ್ಯಗಳು ಭಾರತೀಯ ಮನಸ್ಸನ್ನು ತಲ್ಲಣಗೊಳಿಸಿದ್ದವು. ಅಂದು ಪಾಕಿಸ್ಥಾನ ಸೇನೆಯ ದೌರ್ಜನ್ಯವನ್ನು ಖಂಡಿಸಿ ಸತ್ಯಾಗ್ರಹಕ್ಕೆ ಇಳಿದ ಲಕ್ಷಾಂತರ ಭಾರತೀಯರಲ್ಲಿ ನಾನೂ ಒಬ್ಬ. ಆಗ ನನ್ನ ವಯಸ್ಸು 20-22 ಆಗಿದ್ದು, ಅದೇ ನಾನು ಸೇರಿದ ಮೊದಲ ಹೋರಾಟ. ಆಗ ನಾನು ಜೈಲಿಗೂ ಹೋಗಿದ್ದೆ ಎಂದು ಮೋದಿ ನೆನಪಿಸಿಕೊಂಡರು. ಬಾಂಗ್ಲಾವನ್ನು ಸ್ವತಂತ್ರ ವಾಗಿ ಸಲು ಸಹಾಯ ಮಾಡಿದ ಸಮಸ್ತ ಭಾರತೀಯ ಸೇನೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮಾಜಿಗಳ ಸ್ಮರಣೆ: ಬಾಂಗ್ಲಾ ವಿಮೋಚನೆಯಲ್ಲಿ ಇಂದಿರಾಗಾಂಧಿ ನೀಡಿದ ಬೆಂಬಲವನ್ನು ಬಾಂಗ್ಲಾ ದೇಶೀಯರು ಎಂದಿಗೂ ಮರೆಯಲಾರರು. ಬಾಂಗ್ಲಾದ ಅಭಿವೃದ್ಧಿಯಲ್ಲೂ ಇಂದಿರಾಜೀ ಅವರ ಕಾಣಿಕೆ ಮಹತ್ವದ್ದು ಎಂದ ಮೋದಿ, ಬಾಂಗ್ಲಾ ವಿಮೋಚನೆಗೆ ಬೆಂಬಲ ಸೂಚಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, “ನಮ್ಮ ಹೋರಾಟ ಕೇವಲ ಬಾಂಗ್ಲಾವನ್ನು ಸ್ವತಂತ್ರವಾಗಿಸುವುದಷ್ಟೇ ಅಲ್ಲ, ಇತಿಹಾಸಕ್ಕೆ ಹೊಸ ದಿಕ್ಕನ್ನೂ ತೋರಿಸುವ ಉದ್ದೇಶವೂ ಇದರ ಹಿಂದಿದೆ’ ಎಂದಿದ್ದನ್ನು ಸ್ಮರಿಸಿದರು.
ಇಂದಿನ ಕಾರ್ಯಕ್ರಮ
– ಶನಿವಾರ ಬೆಳಗ್ಗೆ ಢಾಕಾದಿಂದ ಸತ್ಕಿರಾಂಡ್ಗೆ ಪ್ರಧಾನಿ ಮೋದಿ ಭೇಟಿ.
– ಶ್ಯಾಮನಗರ್ನಲ್ಲಿರುವ ಜೆಶೋರೇಶ್ವರಿ ದೇಗುಲದಲ್ಲಿ ಕಾಳಿ ಮಾತೆಯ ದರ್ಶನ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.