Ragarathna Malike: ಶ್ರೋತೃಗಳನ್ನು ರಂಜಿಸಿದ ಯುವ ಕಲಾವಿದೆ ಪ್ರಜ್ಞಾಅಡಿಗ


Team Udayavani, Aug 25, 2024, 1:54 AM IST

Prajna-Adiga

ವಿದ್ವತ್‌ಪೂರ್ಣವಾದ ಹಾಗೂ ಉನ್ನತ ಮಟ್ಟದ ಒಂದು ಸಂಗೀತ ಕಛೇರಿಯನ್ನು ಆಲಿಸುವ ಯೋಗವನ್ನು ಉಡುಪಿಯ ಶ್ರೋತೃಗಳಿಗೆ ಒದಗಿಸಿದ ಯುವ ಕಲಾವಿದೆ ನಮ್ಮ ಊರಿನ ಹೆಮ್ಮೆಯ ಕುವರಿ ಪ್ರಜ್ಞಾ ಅಡಿಗ.

ಉಡುಪಿಯ “ರಾಗ ಧನ’ ಸಂಸ್ಥೆಯ “ರಾಗರತ್ನ ಮಾಲಿಕೆ’ ಸರಣಿಯ 26ನೆಯ ಕಾರ್ಯಕ್ರಮವಾಗಿ, ಪ್ರಜ್ಞಾ ಅಡಿಗ ಅವರ ಹಾಡುಗಾರಿಕೆ, ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಆತ್ಮವಿಶ್ವಾಸದಿಂದ ಕೂಡಿದ ಇಂಪಾದ ಕಂಠಸಿರಿ; ಸಭಿಕರು ಮತ್ತು ಸಹವಾದಕರೊಂದಿಗೆ ಚೈತನ್ಯಪೂರ್ಣವಾದ ಸಂವಹನ; ಸು#ಟವಾಗಿ ಮೂಡಿಬರುವ ಬಿರ್ಕಾಗಳಲ್ಲೂ ಧ್ವನಿಸುವ ರಾಗ ಮತ್ತು ಸಾಹಿತ್ಯ ಶುದ್ಧತೆ.

ಈ ಕಛೇರಿಯಲ್ಲಿ ಗಮನ ಸೆಳೆದ ಅಂಶವೆಂದರೆ ಅತ್ಯುತ್ತಮವಾದ ಅನುಕ್ರಮಣಿಕೆ; ನಿರ್ದಿಷ್ಟ ರಾಗಗಳು, ಕೃತಿಗಳು ಮತ್ತು ಅವುಗಳ ಕಾಲಮಿತಿಯಲ್ಲಿ ಕರಾರುವಾಕ್ಕಾಗಿ ನಿರ್ವಹಿಸುವ ಗಾಯಕಿ ತಮ್ಮ ಪ್ರಸ್ತುತಿಗಳನ್ನು ಲಕ್ಷಣಯುತವಾಗಿ ಮತ್ತು ಸ್ವಯಂ ಪರಿಪೂರ್ಣವಾಗಿ ಅದೇ ಸಮಯ ಎಲ್ಲಿಯೂ ಅನಗತ್ಯವಾಗಿ ಬೆಳೆಸದೆ ನಿರೂಪಿಸಿ, ಅವುಗಳ ತಾಜಾತನವನ್ನು, ಅಂತೆಯೇ ಕಛೇರಿಯ ಬಿಗುತನವನ್ನು ಕೊನೆಯವರೆಗೂ ಕಾದುಕೊಂಡರು.

ಬೆಹಾಗ್‌ ವರ್ಣದೊಂದಿಗೆ ಕಛೇರಿ ಪ್ರಾರಂಭ; ನವಿರಾದ ಪಲಕುಗಳಿಂದ ಕೂಡಿದ ಕಿರು ಆಲಾಪನೆ ಮತ್ತು ಸ್ವರವಿನಿಕೆಗಳ ರೀತಿಗೌಳ (ರಾಗರತ್ನ ಮಾಲಿಕೆ ಕೃತಿ) ಸೌಖ್ಯವಾದ ರಾಗ ವಿಸ್ತಾರದಿಂದ ಮನ ಸೆಳೆದ ಕಾಂಭೋಜಿ (ಏಮಯ್ಯ ರಾಮ) ಕೃತಿಗಳ ಅನಂತರ ಕಲ್ಯಾಣಿಯನ್ನು (ನಿನು ವಿನಾ ಗತಿ) ವಿಸ್ತರಿಸಲಾಯಿತು. ಕರ್ಣರಂಜನೀಯವಾಗಿ ವೃದ್ಧಿ ಸುವ ಸಂಗತಿಗಳು, ಹುರುಪಿನಿಂದ ಕೂಡಿದ ಏಕಾವರ್ತ ಸ್ವರ ಕಲ್ಪನೆಗಳಿಂದ ವೇದಿಕೆ ಕಳೆಗಟ್ಟಿತು.

ತ್ವರಿತಗತಿಯ ವಸಂತರಾಗದ ಕೃತಿಯು “ಮರಕತ ಲಿಂಗಂ’, ತದನಂತರ ಎತ್ತಿಕೊಳ್ಳಲಾದ “ತೋಡಿ’ (ನಿನ್ನೆ ನಮ್ಮಿನಾನು) ಪ್ರಧಾನವಾಗಿ ವಿಜೃಂಭಿಸಿತು. ಎಲ್ಲೂ ನೀರಸವೆನಿಸದ ಆಲಾಪನೆ, ಗ್ರಹ ಭೇದ, ನೆರವಲ…, ರೋಚಕವಾದ ‘ಕುರೈಪ್ಪು’ಗಳು ವಿವಿಧ ವಿನ್ಯಾಸಗಳಿಂದ ಕೂಡಿದ ಮುಕ್ತಾಯಗಳು ಸಭಿಕರ ಮುಕ್ತ ಪ್ರಶಂಸೆಗೆ ಪಾತ್ರವಾದವು. ಕಲಾವಿದೆಯ ಇಂಗಿತವರಿತು ನಾಗೇಂದ್ರ ಪ್ರಸಾದ್‌ ಅವರು ಮೃದಂಗದಲ್ಲಿ ನೀಡಿದ ಗಣಿತ ಲೆಕ್ಕಾಚಾರಗಳು ಮತ್ತು ಅವರ ತನಿ ಆವರ್ತನ ಶ್ರೋತೃಗಳಿಂದ ಸೈ ಎನಿಸಿಕೊಂಡಿತು. ಉತ್ತಮವಾದ ಹೊಂದಾಣಿಕೆಯೊಂದಿಗೆ ವಯೊಲಿನ್‌ ಸಹಕಾರ ನೀಡಿದ ಕೃತಿ ಕೌಶಿಕ್‌ ಅಭಿನಂದನಾರ್ಹರು. ಮೂವರೂ ಕಲಾವಿದರ ಹೊಂದಾಣಿಕೆ ಅನನ್ಯವಾಗಿತ್ತು. ಕಾಪಿ ರಾಗದ ದೇವರ ನಾಮ, ಮರಾಠಿ ಅಭಂಗ ಮತ್ತು ಹಂಸಾನಂದಿ ತಿಲ್ಲಾನದೊಂದಿಗೆ ಕಛೇರಿ ಸಂಪನ್ನವಾಯಿತು.

- ಸರೋಜಾ ಆರ್‌. ಆಚಾರ್ಯ, ಉಡುಪಿ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.