![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 10, 2023, 10:57 PM IST
ನವದೆಹಲಿ: ತೀವ್ರ ವಾಯು ಮಾಲಿನ್ಯದಿಂದ ಪರಿತಪಿಸುತ್ತಿದ್ದ ದೆಹಲಿ ಜನರಿಗೆ ವರುಣ ಕೃಪೆ ತೋರಿದ್ದಾನೆ. ದೆಹಲಿ ಮತ್ತು ಗಾಜಿಯಾಬಾದ್ನಲ್ಲಿ ಶುಕ್ರವಾರ ಬೆಳಗ್ಗೆ ಮಳೆಯಾಗಿದೆ. ಜೋರಾದ ಗಾಳಿ ಮತ್ತು ಮಳೆಯು ಭೂಮಿಯನ್ನು ತಂಪಾಗಿಸಿದೆ. ಇದರಿಂದ ಸಹಜವಾಗಿ ವಾಯು ಗುಣಮಟ್ಟ ತುಸು ಸುಧಾರಣೆ ಕಂಡಿದೆ.
ಇನ್ನೊಂದೆಡೆ, ಮಾಲಿನ್ಯದ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕಳೆ ಸುಡುವುದನ್ನು ನಿಲ್ಲಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ, ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳಿಗೆ ಸೂಚಿಸಿದೆ. “ಜನರ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಂಡಿದ್ದಾನೆ. ಮಳೆ ಸುರಿದು, ಗಾಳಿ ಬೀಸಿದಕ್ಕಾಗಿ ಸರ್ಕಾರಕ್ಕೆ ಅಲ್ಲ, ಬದಲಾಗಿ ಭಗವಂತನಿಗೆ ಧನ್ಯವಾದಗಳು’ ಎಂದು ನ್ಯಾಯಪೀಠ ಹೇಳಿದೆ.
“ಕಳೆ ಸುಡುವಿಕೆ ನಿಲ್ಲಬೇಕು. ನೀನೇನು ಕ್ರಮ ಕೈಗೊಳ್ಳುತ್ತಿರೋ ಅದು ನಿಮ್ಮ ಆಯ್ಕೆ. ಆದರೆ ದೀಪಾವಳಿ ವೇಳೆಗೆ ವಾಯು ಗುಣಮಟ್ಟ ಉತ್ತಮವಾಗಬೇಕಿದೆ’ ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿತು.
ಇದೇ ವೇಳೆ, ದೆಹಲಿಯಲ್ಲಿ ಮಳೆ, ಗಾಳಿಯಿಂದಾಗಿ ಹವಾಮಾನ ಬದಲಾವಣೆಯಾಗಿದ್ದು, ವಾಯು ಮಾಲಿನ್ಯ ತುಸು ತಗ್ಗಿದೆ. ಹೀಗಾಗಿ ನ.13ರಿಂದ ಆರಂಭವಾಗಬೇಕಿದ್ದ ಸಮ-ಬೆಸ ಯೋಜನೆಯನ್ನು ದೆಹಲಿ ಸರ್ಕಾರ ಮುಂದೂಡಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.