![Udupi ಬೈಕ್ ಡೂಮ್ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ!](https://www.udayavani.com/wp-content/uploads/2024/07/u-1-415x250.jpg)
Ration Card: ಪಡಿತರ ಕಾರ್ಡ್ ಪರಿಷ್ಕರಣೆ ಶೀಘ್ರ: ಕೆ.ಎಚ್.ಮುನಿಯಪ್ಪ
Team Udayavani, Aug 29, 2023, 9:23 PM IST
![MUNIYAPPA](https://www.udayavani.com/wp-content/uploads/2023/08/MUNIYAPPA-3-620x372.jpg)
ದಾವಣಗೆರೆ: ಬಿಪಿಎಲ್, ಎಪಿಎಲ್ ಕಾರ್ಡ್ಗಳನ್ನು ಆದಷ್ಟು ಬೇಗ ಪರಿಷ್ಕರಿಸಿ ಎಲ್ಲ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿಯ ಹಣ ಜಮಾ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಒಟ್ಟು 1.28 ಕೋಟಿ ಕಾರ್ಡ್ಗಳ ಪೈಕಿ 1.7 ರಿಂದ 1.10 ಕೋಟಿ ಕಾರ್ಡ್ಗಳಿಗೆ ಐದು ಕೆಜಿಯ ಅಕ್ಕಿ ಹಣ ಪಾವತಿಸಲಾಗಿದೆ.
ಇನ್ನು ಕೆಲ ದಿನಗಳಲ್ಲಿ ಆಗಸ್ಟ್ ತಿಂಗಳ ಎಲ್ಲ ಹಣ ನೀಡಲಾಗುವುದು. ಅಕ್ಕಿ ವಿತರಣೆಯನ್ನೂ ಆದಷ್ಟು ಶೀಘ್ರವಾಗಿ ಮಾಡಲಾಗುವುದು. ರಾಜ್ಯದಲ್ಲಿ 21 ಲಕ್ಷದಷ್ಟು ಕಾರ್ಡ್ಗಳಿಗೆ ಬ್ಯಾಂಕ್ ಖಾತೆ ಇರಲಿಲ್ಲ. 7ರಿಂದ 8 ಲಕ್ಷ ಕಾರ್ಡ್ಗಳಿಗೆ ಖಾತೆ ಮಾಡಿಸಲಾಗಿದೆ. ಹಾಗಾಗಿ ಹಣ ಜಮಾ ವಿಳಂಬವಾಗಿತ್ತು. ಎಲ್ಲ ಕಾರ್ಡ್ಗಳ ಪರಿಷ್ಕರಣೆ ನಂತರ ಹಣ ಜಮಾ ಮಾಡಲಾಗುವುದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೇ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುವುದು. ಡಿಸೆಂಬರ್ನಲ್ಲಿ ಯುವನಿಧಿ ಯೋಜನೆಯನ್ನೂ ಆರಂಭಿಸಲಾಗುವುದು ಎಂದರು.
ಟಾಪ್ ನ್ಯೂಸ್
![Udupi ಬೈಕ್ ಡೂಮ್ನಲ್ಲಿ ಹಾವು; ಬೆಚ್ಚಿ ಬಿದ್ದ ಸವಾರ!](https://www.udayavani.com/wp-content/uploads/2024/07/u-1-415x250.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.