![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Sep 10, 2023, 7:52 PM IST
ನವದೆಹಲಿ: ಸಂಚಾರ ಸಮಯದಲ್ಲಿ ರೈಲು ಚಾಲಕರು ತೂಕಡಿಸುತ್ತಿದ್ದರೆ ಅವರನ್ನು ಎಚ್ಚರಿಸುವ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಸಾಧನವನ್ನು ಈಶಾನ್ಯ ಗಡಿ ರೈಲ್ವೆಯು(ಎನ್ಎಫ್ಆರ್) ಅಭಿವೃದ್ಧಿಪಡಿಸುತ್ತಿದೆ. ಒಂದು ವೇಳೆ ಆಗಲೂ ರೈಲು ಚಾಲಕ ಎಚ್ಚರಗೊಳ್ಳದಿದ್ದರೆ ಸಾಧನವು ರೈಲನ್ನು ತುರ್ತಾಗಿ ಸ್ಥಗಿತಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ರೈಲು ಅಪಘಾತಗಳನ್ನು ತಡೆಯಲು ಈ ಸಾಧನವು ಉಪಯಕ್ತವಾಗಲಿದೆ. ಚಾಲಕ ತೂಕಡಿಸಿದರೆ, ಈ ವೇಳೆ ಆತನನ್ನು ಎಚ್ಚರಗೊಳಿಸುವ ಸಾಧನ ಅಭಿವೃದ್ಧಿಪಡಿಸುವಂತೆ ರೈಲ್ವೆ ಮಂಡಳಿಯು ಜೂನ್ನಲ್ಲಿ ಎನ್ಎಫ್ಆರ್ಗೆ ಸೂಚಿಸಿತ್ತು.
ಈ ಸಾಧನಕ್ಕೆ “ರೈಲ್ವೆ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್'(ಆರ್ಡಿಎಎಸ್) ಎಂದು ಹೆಸರಿಡಲಾಗಿದೆ. ರೈಲು ಚಾಲಕರು ತೂಕಡಿಸುವಾಗ ಈ ಸಾಧನವು ಎಚ್ಚರಿಕೆಯ ಗಂಟೆ(ಅಲಾರಾಮ್) ಬಾರಿಸಲಿದೆ. ಒಂದು ವೇಳೆ ಕೆಲವು ಸಮಯದವರೆಗೆ ಚಾಲಕ ಎಚ್ಚರಗೊಳ್ಳದಿದ್ದರೆ, ಆಗ ತುರ್ತು ಬ್ರೇಕ್ ಹಾಕಲಿದೆ ಎಂದು ಮೂಲಗಳು ತಿಳಿಸಿವೆ.
ಆರ್ಡಿಎಎಸ್ ಅಭಿವೃದ್ಧಿ ಹಂತದಲ್ಲಿದೆ. ಅದರ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಗಳು ನಡೆಯುತ್ತಿವೆ. ಎನ್ಎಫ್ಆರ್ ತಾಂತ್ರಿಕ ತಂಡವು ಈ ಕಾರ್ಯದಲ್ಲಿ ಮಗ್ನವಾಗಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಪ್ರಯೋಗಗಳು ಪೂರ್ಣಗೊಳ್ಳಲಿದೆ. ನಂತರ ಇವುಗಳನ್ನು ಹಂತ-ಹಂತವಾಗಿ ರೈಲುಗಳಿಗೆ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಇದೀಗ ಜಿಯೋ ಹಾಟ್ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.