ರಿಯಲ್‌ ಹೀರೋ ವೀರಪ್ಪ : ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!


Team Udayavani, Jan 12, 2021, 1:08 PM IST

ರಿಯಲ್‌ ಹೀರೋ ವೀರಪ್ಪ :  ವೃತ್ತಿ, ರೈಲ್ವೆ ಸಹಾಯಕ ಪ್ರವೃತ್ತಿ ಶಿಕ್ಷಕ!

ಬಹುತೇಕರು ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಮ್ಮ ‘ಲೈಫ್ ಸೆಟ್ಲ’ ಆಯ್ತು ಎಂದು ನಿಟ್ಟುಸಿರು ಬಿಡುತ್ತಾರೆ. ಆನಂತರದಲ್ಲಿ
ಅವರುಂಟು, ಅವರ ಸಂಸಾರ- ನೌಕರಿ ಉಂಟು. ಅಷ್ಟೇ ಅವರ ಪ್ರಪಂಚ ಆಗಿಬಿಡುತ್ತದೆ. ಈ ವೃತ್ತಿ ಬದುಕಿನಾಚೆ ನಮಗೆ ಇನ್ನೊಂದು ಸಾಮಾಜಿಕ ಜವಾಬ್ದಾರಿ ಇದೆ ಎಂದು ಯೋಚಿಸುವವರು ಅಪರೂಪ. ವಾಸ್ತವ ಹೀಗಿರುವಾಗ, ವೃತ್ತಿಯಿಂದ
‘ರೈಲ್ವೆ ಸಿಗ್ನಲ್‌ ಮ್ಯಾನ್‌’ ಆಗಿರುವ ವೀರಪ್ಪ ತಾಳದವರ, ಪ್ರವೃತ್ತಿಯಿಂದ ‘ಸ್ಕೂಲ್‌ ಮಾಸ್ತರ್‌’ ಆಗಿಯೂ ಕೆಲಸ ಮಾಡುತ್ತಿದ್ದಾರೆ.

ವೀರಪ್ಪ, ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ಲ ಗ್ರಾಮದವರು. ಬಾಗಲಕೋಟೆಯಲ್ಲಿ ರೈಲ್ವೆ ಇಲಾಖೆಯ
ಸಹಾಯಕ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುವ ಅವರು, ನಾನೊಬ್ಬನೇ ಚನ್ನಾಗಿ ಜೀವನ ನಡೆಸಿದರೆ ಸಾಲದು, ನನ್ನಂತೆ
ಇತರರೂ ನೆಮ್ಮದಿಯ ಬದುಕು ನಡೆಸಬೇಕು ಎನ್ನುತ್ತಾರೆ. ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ಸದಾಶಯದಿಂದ ಹೊಸ
ಯೋಜನೆಯೊಂದನ್ನು ರೂಪಿಸಿದ್ದಾರೆ. ಅದುವೇ ಹಳ್ಳಿ ರಂಗಶಾಲೆ ಎಲ್ಲವೂ ಉಚಿತ!

ಇದನ್ನೂ ಓದಿ:ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಡೋಸ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

“ಊರಿನ ಎಲ್ಲಾ ಮಕ್ಕಳೂ ಅಕ್ಷರ ಕಲಿಯಬೇಕು. ಶಾಲೆಯಲ್ಲಿ ಓದಿದರೂ ಅದೆಷ್ಟೋ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ
ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಒಂದು ವೇದಿಕೆ ಒದಗಿಸಬೇಕೆಂಬ ಆಸೆಯಿತ್ತು. ಹೀಗಾಗಿ, ಅಕ್ಷರ ಕಲಿಕೆಯ ಜೊತೆಗೆ ಸಾಮಾನ್ಯ ಜ್ಞಾನ, ಕಥೆ, ಕವನ, ಚಿತ್ರಕಲೆ, ಹಾಡು, ಜಾನಪದ ಕಲೆ…

ಮುಂತಾದ ವಿಭಾಗದಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಹಳ್ಳಿ ರಂಗ ಶಾಲೆಯಲ್ಲಿ ಉಚಿತವಾಗಿ ತರಬೇತಿ ನೀಡುತ್ತಿರುವೆ’ ಎನ್ನುತ್ತಾರೆ ವೀರಪ್ಪ. ವೀರಪ್ಪ ಅವರ ರೈಲ್ವೆ ಇಲಾಖೆಯ ಕೆಲಸ ಸಂಜೆ 7ಗಂಟೆಗೆ ಮುಗಿಯುತ್ತದೆ. ಆನಂತರ ರಾತ್ರಿ 9 ಗಂಟೆಯವರೆಗೆ ಮಕ್ಕಳಿಗೆ ಪಾಠ ಮಾಡುತ್ತಾರೆ. ಈ ಕಾರ್ಯದಲ್ಲಿ ವೀರಪ್ಪ ಅವರಿಗೆ ಗೆಳೆಯರೂ ಸಾಥ್‌ ಕೊಡುತ್ತಿದ್ದಾರೆ. ವೀರಪ್ಪ ಅವರು “ಹಳ್ಳಿ ರಂಗಶಾಲೆ’ ನಡೆಸುತ್ತಿರುವುದು ತಮ್ಮ ಮನೆಯ ಕೋಣೆಯಲ್ಲಿ. ಮಕ್ಕಳಿಗೆ ಸಾಮಾನ್ಯ ಜ್ಞಾನ, ಬೇಸಿಕ್‌ ಕಲಿಕೆಯ ಜೊತೆಗೆ ಹಾಡು, ಭಾಷಣ,
ನೃತ್ಯ, ಕವಾಯತ್‌ ಕಲಿಸುತ್ತಾರೆ. ವೀರಪ್ಪ ಅವರು ಕವಿ, ಬರಹಗಾರ ಮತ್ತು ಛಾಯಾಗ್ರಹಕ ಕೂಡ ಹೌದು. ಹೀಗಾಗಿ ಮಕ್ಕಳಿಂದ ಕವಿತೆಗಳನ್ನು ಓದಿಸುತ್ತಾರೆ. ಚಿತ್ರ ಬಿಡಿಸುವುದನ್ನು ಹೇಳಿಕೊಡುತ್ತಾರೆ., ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಮಾಹಿತಿ ನೀಡುತ್ತಾರೆ. ಹೀಗೆ ಮಾಡುವುದರಿಂದ, ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಕ್ಕಳಿಗೆ ಅನುಕೂಲ ಆಗುತ್ತದೆ ಎಂಬುದು ಅವರ ಮಾತು.

ಎಲ್ಲಾ ಮಕ್ಕಳಿಗೂ ಸಮವಸ್ತ್ರ “ಹಳ್ಳಿ ರಂಗಶಾಲೆ’ಯಲ್ಲಿ ಎಲ್ಲಾ ಮಕ್ಕಳಿಗೂ ಪ್ರತ್ಯೇಕ ಸಮವಸ್ತ್ರ ಇವೆ. ಒಂದಷ್ಟು ಹಣವನ್ನು
ದಾನಿಗಳು ನೀಡಿದ್ದಾರೆ. ಉಳಿದ ಹಣವನ್ನು ವೀರಪ್ಪ ಆವರೇ ಹಾಕಿ ಸಮವಸ್ತ್ರ ಖರೀದಿಸಿ ಅವನ್ನು ಹಳ್ಳಿ ರಂಗಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜೋತ್ಸವ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ  ಆಚರಿಸುತ್ತಾರೆ. ಹಳ್ಳಿ ರಂಗಶಾಲೆಯ ಚಟುವಟಿಕೆ ಗದಗ ಜಿಲ್ಲಾದ್ಯಂತ ಮನೆ ಮಾತಾಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಕೂಡ ಮನೆ ಮನೆಗೆ ತೆರಳಿ ಹೋಮ್‌ ವರ್ಕ್‌ ಕೊಟ್ಟು ಮಕ್ಕಳ ಕಲಿಕೆಗೆ
ಬ್ರೇಕ್‌ ಬೀಳದಂತೆ ನೋಡಿಕೊಂಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ನಗರಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಳ್ಳಿಯಲ್ಲಿಯೇ ತರಬೇತಿ ದೊರಕುವಂತೆ ಮಾಡುವುದು ಅವರ ಮುಂದಿನ ಗುರಿಯಂತೆ. ಸೇವೆಯೇ ಜೀವನ ಎಂದು ನಂಬಿರುವ ಇಂಥವರ ಸಂಖ್ಯೆ ಹೆಚ್ಚಲಿ.

– ಬಾಲಾಜಿ ಕುಂಬಾರ, ಚಟ್ನಾಳ

 

ಟಾಪ್ ನ್ಯೂಸ್

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Manglrui

Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ

1-asasa

Test; ನ್ಯೂಜಿಲ್ಯಾಂಡ್‌ ಆಲೌಟ್‌ 88 : ಲಂಕೆಗೆ 514 ರನ್‌ ದಾಖಲೆ ಮುನ್ನಡೆ

dinesh-gu

Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ

leopard

leopard: ಮೂಲ್ಕಿ ಕೊಯ್ಯಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MOdi (3)

Jammu and Kashmir ಜನತೆ ಭ್ರಷ್ಟ ಮುಕ್ತ ಸರಕಾರ ಬಯಸಿದ್ದಾರೆ: ಮೋದಿ

court

Jama Masjid:ಮಾಜಿ ಪಿಎಂ ಸಹಿ ಕಡತ ಸಲ್ಲಿಸದ್ದಕ್ಕೆ ಕೋರ್ಟ್‌ ಟೀಕೆ

UNITED NATIONS

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್‌ ಬೆಂಬಲ

1-wewewq

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.