![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 11, 2022, 8:01 PM IST
ಬೆಂಗಳೂರು:ಗಾರ್ಮಿನ್ ಲಿಮಿಟೆಡ್ನ ಘಟಕವಾದ ಗಾರ್ಮಿನ್ ಇಂಡಿಯಾ ಇನ್ಸ್ಟಿಂಕ್ಟ್ 2 ಸರಣಿಯನ್ನು ಬಿಡುಗಡೆ ಮಾಡಿದೆ. ಉನ್ನತ ತಂತ್ರಜ್ಞಾನ- ಚಾಲಿತ ಇನ್ಸ್ಟಿಂಕ್ಟ್ 2 ಸರಣಿಯು ಅನಿಯಮಿತ ಬ್ಯಾಟರಿ ಹೊಂದಿದ್ದು, ಸೋಲಾರ್ ಬ್ಯಾಟರಿಯನ್ನು ಸಹ ಕೆಲವು ಮಾದರಿಗಳು ಹೊಂದಿವೆ.
ಇನ್ಸ್ಟಿಂಕ್ಟ್ 2 ಥರ್ಮಲ್ ಮತ್ತು ಶಾಕ್ ರೆಸಿಸ್ಟೆನ್ಸ್ಗಾಗಿ ಮಿಲಿಟರಿ ಸ್ಟ್ಯಾಂಡರ್ಡ್ 810 ಗೆ ನಿರ್ಮಿಸಲಾಗಿದೆ 100 ಮೀಟರ್ ವರೆಗೆ ನೀರು ನಿರೋಧಕವಾಗಿದೆ. ಗೀರು- ನಿರೋಧಕ ಗಾಜು ಹೊಂದಿದೆ.
ಇನ್ಸ್ಟಿಂಕ್ಟ್ 2 ಸರಣಿಯು ಗಮನಾರ್ಹ ಬ್ಯಾಟರಿ ಹೊಂದಿದೆ. ಇನ್ಸ್ಟಿಂಕ್ಟ್ 2 ಸ್ಮಾರ್ಟ್ವಾಚ್ ಮೋಡ್ನೊಂದಿಗೆ ನಾಲ್ಕು ವಾರಗಳವರೆಗೆ ನಿರಂತರ ಬಳಕೆಯನ್ನು ಒದಗಿಸುತ್ತದೆ. ಇನ್ಸ್ಟಿಂಕ್ಟ್ 2 ಸೋಲಾರ್ ಮಾದರಿಗಳು ಸ್ಮಾರ್ಟ್ವಾಚ್ ಮೋಡ್ನಲ್ಲಿ ಅನಿಯಮಿತ ಬ್ಯಾಟರಿ ಹೊಂದಿದೆ.
ಇನ್ಸ್ಟಿಂಕ್ಟ್ 2 ಸರಣಿಯು ವರ್ಕ್ಔಟ್ಗಳ ಸಮಯದಲ್ಲಿ ಹೃದಯ ಬಡಿತ, ಒತ್ತಡದ ಟ್ರ್ಯಾಕಿಂಗ್, ನಿದ್ರೆಯ ಸ್ಕೋರ್, ಪಲ್ಸ್ ಆಕ್ಸಿಮೀಟರ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಹೊಂದಿದೆ.
ಸ್ಮಾರ್ಟ್ ವಾಚ್ ಪ್ರೀಲೋಡೆಡ್ ಸ್ಪೋಟ್ರ್ಸ್ ಅಪ್ಲಿಕೇಶನ್ಗಳು, ಕಠಿಣ ತರಬೇತಿಯ ಸಮಯದಲ್ಲಿ ಮಾರ್ಗದರ್ಶನ ನೀಡುತ್ತದೆ ಇದು ಮಲ್ಟಿಸ್ಪೋರ್ಟ್ ಚಟುವಟಿಕೆ ವೈಶಿಷ್ಟ್ಯವನ್ನು ಸಹ ಹೊಂದಿದೆ.
ಆನ್ಲೈನ್- ಸಿನರ್ಜಿಜರ್ ಮತ್ತು ಆಫ್ಲೈನ್ ಗಾರ್ಮಿನ್ ಬ್ರಾಂಡ್ ಸ್ಟೋರ್ ಗ ಳು, ಹೆಲಿಯೊಸ್, ಜಸ್ಟ್ ಇನ್ ಟೈಮ್, ಡೆಕಾಥ್ಲಾನ್, ಸ್ಟೋರ್- ಬೆಂಗಳೂರು, ರಿಟೇಲ್ ಪಾರ್ಟ್ನರ್ಗಳಿಂದ 13ನೇ ಮಾರ್ಚ್’22 ವರೆಗೆ ಗಾರ್ಮಿನ್ ಇನ್ಸ್ಟಿಂಕ್ಟ್ 2 ಅನ್ನು ಮುಂಗಡ ಬುಕ್ಕಿಂಗ್ ಮಾಡಬಹುದು. ಆಫರ್ ಅವಧಿಯಲ್ಲಿ ಇನ್ಸ್ಟಿಂಕ್ಟ್ 2 ಅನ್ನು ಮುಂಗಡವಾಗಿ ಬುಕ್ ಮಾಡುವ ಮೊದಲ 100 ಗ್ರಾಹಕರಿಗೆ ರೂ. 7,990 ಮೌಲ್ಯದ “ಸೌಕೋನಿ” ಕ್ಯಾಶುಯಲ್ ಶೂ “ಅಝೂರಾ” ಉಚಿತವಾಗಿ ದೊರೆಯಲಿದೆ.
ಈ ವಾಚ್ ಗಳು ಆರು ಆವೃತ್ತಿಗಳಲ್ಲಿ ದೊರಕಲಿವೆ. ಬೆಲೆ 33,990 ರೂ.ಗಳಿಂದ, 51,990 ರೂವರೆಗೆ ಇದೆ. ಗಾರ್ಮಿನ್ ಆನ್ಲೈನ್ ಮತ್ತು ಆಫ್ಲೈನ್ ಸ್ಟೋರ್ ಗಳು ಅಲ್ಲದೇ ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಟಾಟಾ ಕ್ಲಿಕ್ ಆನ್ಲೈನ್ ನಲ್ಲಿ ದೊರಕುತ್ತವೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಇದೀಗ ಜಿಯೋ ಹಾಟ್ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.