ಉದ್ದೇಶದಿಂದ ಕೂಡಿದ ಕರ್ಮದಿಂದ ಧರ್ಮ


Team Udayavani, Sep 29, 2021, 5:21 AM IST

ಉದ್ದೇಶದಿಂದ ಕೂಡಿದ ಕರ್ಮದಿಂದ ಧರ್ಮ

ಸಾಂದರ್ಭಿಕ ಚಿತ್ರ

ಜಗತ್ತಿನಲ್ಲಿ ಮನುಷ್ಯ ಬುದ್ದಿಜೀವಿ. ಆತ ತನ್ನ ಬುದ್ದಿಶಕ್ತಿಯನ್ನು ಬಳಸಿ ಅದೆಷ್ಟೋ ಆವಿಷ್ಕಾರ, ಸಾಧನೆಗಳನ್ನು ಮಾಡಿದ್ದಾನೆ. ಇಷ್ಟಾದರೂ ಮನುಷ್ಯ ಎಷ್ಟೇ ಪ್ರಗತಿಯನ್ನು ಹೊಂದಿದ್ದರೂ ಆತ ತನ್ನ ವಿವೇಚನೆ, ಬುದ್ಧಿ, ಮನಃಸ್ಥಿತಿ ಹೀಗೆ ಎಷ್ಟೋ ವಿಚಾರಗಳಲ್ಲಿ ಇನ್ನೂ ನಿರೀಕ್ಷಿತ ಪ್ರಗತಿಯನ್ನು ಹೊಂದಲು ಸಾಧ್ಯವಾಗಿಲ್ಲ. ಮಾನವರಾದ ನಾವು ಕೇವಲ ನಮ್ಮ ನಮ್ಮ ಕರ್ಮವನ್ನು ಮಾಡುತ್ತಿದ್ದೇವೆಯೇ ವಿನಾ ಆ ಕರ್ಮದ ಹಿಂದಿನ ಉದ್ದೇಶವನ್ನೇ ಮರೆಯುತ್ತಿದ್ದೇವೆ. ಉದ್ದೇಶರಹಿತ ಕರ್ಮ ಅರ್ಥ ಹೀನ. ಉದ್ದೇಶವನ್ನು ಅರಿತು ಕೊಂಡು ನಾವು ನಮ್ಮ ಕರ್ಮವನ್ನು ಪೂರೈಸಿ ದಾಗಲಷ್ಟೇ ಆ ಕರ್ಮಕ್ಕೊಂದು ಬೆಲೆ, ಶ್ರೇಯಸ್ಸು.

ಧರ್ಮಶಾಸ್ತ್ರ ಪ್ರಾರಂಭವಾಗು ವುದು ಕರ್ಮದಿಂದ. ಈ ಕರ್ಮದಲ್ಲಿ ಎರಡು ಭಾಗಗಳಿವೆ. ಇವುಗಳೆಂದರೆ ಉದ್ದೇಶ ಮತ್ತು ಕ್ರಿಯೆ. ಇವೆರಡೂ ಸೇರಿದಾಗ ಮಾತ್ರ ಕರ್ಮವಾಗುತ್ತದೆ. ಕರ್ಮ ಆರಂಭವಾಗುವುದು ಮನಸ್ಸಿನ ಉದ್ದೇಶದಿಂದ. ಅನಂತರ ಆ ಕರ್ಮವು ಕಾರ್ಯರೂಪಕ್ಕೆ ಬರುವುದು ನಮ್ಮ ಶರೀರದ ಕ್ರಿಯೆಯಿಂದ. ಒಬ್ಬ ವ್ಯಕ್ತಿ ಒಂದು ಕರ್ಮ ಮಾಡಿದನೆಂದು ನಾವು ಅದೇ ಕರ್ಮವನ್ನು ಹಿಂದೆ-ಮುಂದೆ ಯೋಚಿಸದೇ ಮಾಡುವುದು ಖಂಡಿತ ವಾಗಿಯೂ ಸರಿಯಲ್ಲ. ಯಾವುದೇ ಕರ್ಮವನ್ನು ಮಾಡುವ ಮೊದಲು ನಾವು “ಯಾಕೆ’ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ಅತ್ಯಗತ್ಯ. ಏಕೆಂದರೆ ಈ “ಯಾಕೆ’ ಎನ್ನುವುದರ ಅರ್ಥವೇ ಉದ್ದೇಶ ಹಾಗೂ ಈ ಉದ್ದೇಶ ಕ್ರಿಯೆಗಿಂತ ಬಹಳ ಮಹತ್ವಪೂರ್ಣ ದ್ದಾಗಿದೆ. ಯಾವ ಕರ್ಮದಿಂದ ಫ‌ಲ ಸಿಕ್ಕಿರುತ್ತದೆಯೋ ಅದು ಉದ್ದೇಶದಿಂದ ಸಿಗುವುದೇ ವಿನಾ ಶರೀರದ ಕ್ರಿಯೆ ಯಿಂದಲ್ಲ. ಇಬ್ಬರು ಮಾಡುವ ಕ್ರಿಯೆ ಒಂದೇ ಆಗಿರಬಹುದು. ಆದರೆ ಉದ್ದೇಶ ಬೇರೆ ಬೇರೆ ಆಗಿದ್ದರೆ ಫ‌ಲವೂ ಅಕ್ಷರಶಃ ಬೇರೆ ಆಗಿರುತ್ತದೆ.

ಇದನ್ನೂ ಓದಿ:ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್‌ ಮೊರೆ ಹೋದ ತಂದೆ

ಒಬ್ಬ ರಾಜನಿದ್ದ. ಒಂದು ಬಾರಿ ಅವನು ರಾಜ್ಯ ಸಂಚಾರಕ್ಕೆ ಎಂದು ಹೋದಾಗ ಒಂದೂರಲ್ಲಿ ಹುಲಿಯು ಜನರ ಮೇಲೆ ಆಕ್ರಮಿಸಲು ಮುಂದಾ ಗಿತ್ತು. ಇದನ್ನು ಕಂಡ ರಾಜನು ಆ ಹುಲಿಯನ್ನು ಬೇಟೆಯಾಡಿ ಕೊಂದು ಬಿಟ್ಟನು. ತನಗೆ ಇಷ್ಟವಿಲ್ಲದಿದ್ದರೂ ಆ ಊರಿನ ಜನರ ಸುರಕ್ಷತೆಗಾಗಿ ಅವನು ಆ ಕೆಲಸವನ್ನು ಮಾಡಬೇಕಾಯಿತು. ಆದರೆ ಹಲವು ವರ್ಷಗಳ ಅನಂತರ ಅದೇ ರಾಜನ ಮಗ ಗುರುಕುಲದಲ್ಲಿ ತನ್ನ ಗೆಳೆಯರೊಂದಿಗೆ ಆಟವಾಡುವಾಗ ದೂರದಲ್ಲೊಂದು ಹುಲಿಯು ಇರು ವುದು ಅವನ ಕಣ್ಣಿಗೆ ಬಿತ್ತು. ಆಗ ಅವನು ತಾನು ಬಲಶಾಲಿ ಎಂದು ತೋರಿಸಿಕೊಳ್ಳಲು ಆ ಹುಲಿಯನ್ನು ಬೇಟೆಯಾಡಿ ಕೊಂದುಬಿಟ್ಟನು. ಆ ಹುಲಿಯು ಯಾರಿಗೂ ಏನು ಮಾಡಿರಲಿಲ್ಲ. ಆದರೂ ತನ್ನ ತಂದೆಯು ಹುಲಿಯನ್ನು ಕೊಲ್ಲುವ ಕರ್ಮವನ್ನು ಮಾಡಿದ್ದರೆಂದು ಇವನು ಅದನ್ನೇ ಅನುಸರಿಸಿದನು. ತನ್ನ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸುವುದಕ್ಕಾಗಿ ಒಂದು ಜೀವಿಯ ಪ್ರಾಣವನ್ನೇ ತೆಗೆದನು.

ಇವರಿಬ್ಬರೂ ಮಾಡಿದ ಕ್ರಿಯೆ ಒಂದೇ ಆಗಿದ್ದರೂ ಸಮಯ, ಸಂದರ್ಭ, ಸನ್ನಿ ವೇಶ ಹಾಗೂ ಉದ್ದೇ ಶವು ಭಿನ್ನವಾಗಿತ್ತು. ಅಂದು ಆ ರಾಜ ಹುಲಿಯ ಪ್ರಾಣ ತೆಗೆದದ್ದು ತನ್ನ ಊರಿನ ಜನರ ಪ್ರಾಣ ಕಾಪಾಡಲು. ಆದರೆ ಇಂದು ರಾಜಕುಮಾರ ಹುಲಿಯನ್ನು ಕೊಂದದ್ದು ತನ್ನ ಶಕ್ತಿಯ ಪ್ರದರ್ಶನಕ್ಕಾಗಿ. ವಾಸ್ತವದಲ್ಲಿಯೂ ಈ ಸಮಸ್ತ ಪ್ರಪಂಚದ ಪುಣ್ಯ ಶಕ್ತಿ ಕೇವಲ ಉದ್ದೇಶದಲ್ಲಿ ವಾಸವಾಗಿರುತ್ತದೆಯೇ ಹೊರತು ಶರೀರದ ಕ್ರಿಯೆ
ಯಲ್ಲಲ್ಲ. ನಮ್ಮ ದೈನಂದಿನ ಬದುಕಿ ನಲ್ಲಿಯೂ ನಾವು ಹಲವಾರು ಕರ್ಮ ಗಳನ್ನು ಮಾಡುತ್ತೇವೆ. ಆದರೆ ಎಷ್ಟೋ ಬಾರಿ ನಾವು ಅದನ್ನು ಯಾಕೆ ಮಾಡುತ್ತಿದ್ದೇ ವೆಂದೇ ಗೊತ್ತಿರುವುದಿಲ್ಲ. ಸತ್ಯವೇ ನೆಂದರೆ ನಮ್ಮಲ್ಲಿ ಹಲವರು “ಯಾಕೆ’ ಎಂದು ಪ್ರಶ್ನಿಸುವುದನ್ನು ಮತ್ತು ಯೋಚಿ ಸುವುದನ್ನೇ ಮರೆತುಬಿಟ್ಟಿದ್ದಾರೆ. ಕೇವಲ ಇತರರ ಆಚಾರಗಳನ್ನು ನೋಡುವುದು, ಪಾಲಿಸುವುದು ಮಾತ್ರವಲ್ಲದೆ ಆಚಾರದ ಹಿಂದಿರುವ ವಿಚಾರವನ್ನೂ ತಿಳಿದು ಕೊಳ್ಳಬೇಕು. ಆದುದರಿಂದ ಯಾರೋ “ಆದೇಶ’ ನೀಡಿದರೆಂದು “ಉದ್ದೇಶ’ವನ್ನೇ ತಿಳಿಯದೇ “ಕರ್ಮ’ವನ್ನು ಮಾಡುವುದು “ಧರ್ಮ’ವಲ್ಲ.

- ನಿಕ್ಷಿತಾ ಸಿ. ಹಳೆಯಂಗಡಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.