![Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ](https://www.udayavani.com/wp-content/uploads/2024/08/vijaya-1-415x229.jpg)
Road Mishap ಉಪ್ಪಿನಂಗಡಿ: ಬೈಕ್ – ಪಿಕಪ್ ಢಿಕ್ಕಿ: ಬೈಕ್ ಸವಾರ ಸಾವು
Team Udayavani, Jul 13, 2024, 1:14 AM IST
![Road Mishap ಉಪ್ಪಿನಂಗಡಿ: ಬೈಕ್ – ಪಿಕಪ್ ಢಿಕ್ಕಿ: ಬೈಕ್ ಸವಾರ ಸಾವು](https://www.udayavani.com/wp-content/uploads/2024/07/BIKE-2-620x455.jpg)
ಉಪ್ಪಿನಂಗಡಿ: ಬೈಕ್ ಹಾಗೂ ಪಿಕಪ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜು. 12ರಂದು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಕೊಲ್ಪೆಯಲ್ಲಿ ಸಂಭವಿಸಿದೆ.
ಮಂಗಳೂರು ಕೋಡಿಕ್ಕಲ್ ನಿವಾಸಿ ಉಮೇಶ್ ಕೆ. ಅವರ ಪುತ್ರ ಪ್ರಣಮ್ ಕೋಟ್ಯಾನ್ (23) ಮೃತಪಟ್ಟವರು. ಇವರು ಮೆಡಿಕಲ್ ರೆಪ್ ಆಗಿದ್ದರು.
ಗುಂಡ್ಯ: ಲಾರಿಗಳು ಢಿಕ್ಕಿ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗುಂಡ್ಯದಲ್ಲಿ ಎರಡು ಲಾರಿಗಳು ಪರಸ್ಪರ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ಸಂಭವಿಸಿದೆ. ಚಾಲಕರಿಬ್ಬರೂ ಅಪಾಯ ದಿಂದ ಪಾರಾಗಿದ್ದಾರೆ. ರಾತ್ರಿ ವೇಳೆ ವಾಹಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ವೇಳೆ ಕೆಲ ಸಮಯ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು.ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
347 ಬ್ಯಾಗ್ ಮೈಲ್ತುತ್ತು ವಶ
ಸುಳ್ಯ: ಅಕ್ರಮವಾಗಿ ದಾಸ್ತಾನು ಇರಿಸಿದ್ದ 347 ಬ್ಯಾಗ್ ಮೈಲ್ ತುತ್ತನ್ನು ಕನಕಮಜಲು ಗ್ರಾಮದ ಸುಣ್ಣಮೂಲೆಯಿಂದ ಕೃಷಿ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡರು.
ಖಚಿತ ಮಾಹಿತಿ ಮೇರೆಗೆ ಸುಳ್ಯದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹಾಗೂ ಜಾರಿದಳದ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಅವರ ಜಿಲ್ಲಾ ತಂಡ ದಾಳಿ ನಡೆಸಿದಾಗ ಪರವಾನಿಗೆ ಇಲ್ಲದೆ ಸಂಗ್ರಹಿಸಿದ್ದ ಮೈಲ್ತುತ್ತು ಪತ್ತೆಯಾಗಿದೆ.
ಕೇರಳ ಮೂಲದ ಸಜಿ ಹಾಗೂ ಸುರೇಶ್ ಕುಮಾರ್ ಇದನ್ನು ದಾಸ್ತಾನು ಇರಿಸಿದ್ದಾರೆಂದು ತಿಳಿದುಬಂದಿದೆ.
ಟಾಪ್ ನ್ಯೂಸ್
![Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ](https://www.udayavani.com/wp-content/uploads/2024/08/vijaya-1-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.