![police crime](https://www.udayavani.com/wp-content/uploads/2024/07/police-crime-2-415x256.jpg)
Russia; ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವು:ಕೇಂದ್ರ
Team Udayavani, Mar 9, 2024, 1:02 AM IST
![1-wweqwe](https://www.udayavani.com/wp-content/uploads/2024/03/1-wweqwe-620x349.jpg)
ಹೊಸದಿಲ್ಲಿ: ಉದ್ಯೋಗದ ಆಮಿಷಕ್ಕೆ ಒಳಗಾಗಿ ರಷ್ಯಾದಲ್ಲಿ ಸಿಕ್ಕಿ ಹಾಕಿಕೊಂಡಿ ರುವ ಕರ್ನಾಟಕ ಸೇರಿ ದೇಶದ ಹಲವು ಯುವಕರನ್ನು ರಕ್ಷಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ 20 ಮಂದಿ ನೆರವಿಗಾಗಿ ಸರಕಾರವನ್ನು ಸಂಪರ್ಕಿಸಿದ್ದಾರೆ. ಅವರನ್ನು ರಕ್ಷಿಸಲಾಗುತ್ತದೆ ಎಂದು ಹೇಳಿದ್ದಾರೆ.
ಉಕ್ರೇನ್ ಜತೆಗಿನ ಯುದ್ಧದಲ್ಲಿ ಹೈದರಾಬಾದ್ನ ಮೊಹಮ್ಮದ್ ಅಶ್ಫಾನ್ ಅಸುನೀಗಿರುವ ಬೆನ್ನಲ್ಲಿಯೇ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ ಉದ್ಯೋಗದ ಆಮಿಷವೊಡ್ಡಿ ಜನರನ್ನು ಸೆಳೆಯುತ್ತಿರುವ ಏಜೆಂಟ್ಗಳ ಮೇಲೆ ಗಮನ ಇರಿಸಲಾಗಿದೆ. ರಷ್ಯಾದಲ್ಲಿ ಸಿಲುಕಿಕೊಂಡಿರುವವರ ಬಗ್ಗೆ ಈಗಾಗಲೇ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.
ರಷ್ಯಾದ ಇಬ್ಬರ ಮೇಲೆ ಸಿಬಿಐ ಕಣ್ಣು: ಉದ್ಯೋಗದ ಆಮಿಷವೊಡ್ಡಿ ಭಾರತೀಯರನ್ನು ಯುದ್ಧದಲ್ಲಿ ತೊಡಗಿಸುತ್ತಿ ರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾದಲ್ಲಿನ ಇಬ್ಬರು ಕಳ್ಳಸಾಗಣೆ ದಾರರ ಮೇಲೆ ಸಿಬಿಐ ಕಣ್ಣಿಟ್ಟಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
![police crime](https://www.udayavani.com/wp-content/uploads/2024/07/police-crime-2-415x256.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.