![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Feb 22, 2022, 8:30 PM IST
ಸಾಗರ : ಯಾವುದೊ ಕಾರಣಕ್ಕೆ ತಂದೆ ಬೆದರಿಸಿದ್ದಾರೆ ಎಂದು ಮನನೊಂದ ಯುವಕ ನೂರು ವರ್ಷ ಹಳೆಯದಾದ ಭಾರಿ ಗಾತ್ರದ ಮರವನ್ನು ಏರಿದ್ದಾನೆ, ಏರಿದವನಿಗೆ ಎತ್ತರದಿಂದ ಕೆಳಗೆ ನೋಡಿದ ವೇಳೆ ಭಯ ಉಂಟಾಗಿದೆ ಕಾರಣ ಕೆಳಗೆ ಇಳಿಯಲು ಆಗದೆ ತೊಂದರೆ ಅನುಭವಿಸಿ, ಕೊನೆಗೆ ಅಗ್ನಿಶಾಮಕ ಸಿಬಂದಿಗಳನ್ನು ಕರೆಸಿದ ವಿಲಕ್ಷಣ ಘಟನೆ ನಡೆಯಿತು.
ಸಾಗರದ ಮೀನು ಮಾರುಕಟ್ಟೆ ಹಿಂಭಾಗದ ಉಪ್ಪಾರಕೇರಿ ಹತ್ತಿರ ಫಯಾಜ್(21) ತನ್ನ ತಂದೆ ಬೈದರೆಂದು ಮನನೊಂದು ಮೀನು ಮಾರುಕಟ್ಟೆ ಬಳಿ ಇರುವ ಬಿಲಕಂಬಿ ಮರವನ್ನು ಏರಿ ಸುಮಾರು 80 ಅಡಿ ಎತ್ತರ ಮುಟ್ಟಿದ್ದಾನೆ. ಆನಂತರ ಕೆಳಗೆ ನೋಡಿದವನಿಗೆ ನಡುಕ ಶುರುವಾಗಿದೆ.
ಅಪ್ಪನನ್ನು ವಿರೋಧಿಸಲು ಹೊರಟವ ಸಹಾಯಕ್ಕಾಗಿ ಅಂಗಲಾಚುವಂತಾಗಿದೆ. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಸಾಗರ ಅಗ್ನಿಶಾಮಕ ದಳ ಸಿಬ್ಬಂದಿ ಏಣಿ ಹಾಗೂ ಹಗ್ಗದ ಸಹಾಯದಿಂದ ಯುವಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎಂ.ನಂದನ್ ಕುಮಾರ್, ಪ್ರಕಾಶ್, ಶಿವಕುಮಾರ್, ಪ್ರಶಾಂತ್ ಹಾಜರಿದ್ದರು.
ಇದನ್ನೂ ಓದಿ : ಗಣಿಗಾರಿಕೆಯ ಹೆಸರಿನಲ್ಲಿ ನಿಸರ್ಗದ ಒಡಲಿಗೆ ಕೊಡಲಿ ಪೆಟ್ಟು : ಅಧಿಕಾರಿಗಳ ವಿರುದ್ದ ಆಕ್ರೋಶ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.