ಸ್ಕೂಟರ್ ಅಡ್ಡಗಟ್ಟಿ ಹಲ್ಲೆ: ದೂರು, ಪ್ರತಿದೂರು
Team Udayavani, May 29, 2024, 8:35 PM IST
ಸವಣೂರು: ಸ್ಕೂಟರನ್ನು ಅಡ್ಡಗಟ್ಟಿ ಬಾಳುಕತ್ತಿಯಿಂದ ಹಲ್ಲೆ ನಡೆಸಿದ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ಸವಣೂರು ಇಡ್ಯಾಡಿಯ ಗುಣಪಾಲ ಗೌಡ ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಂತೆ ಗುಣಪಾಲ ಗೌಡ ಮತ್ತು ಪ್ರಸಾದ್ ಇಡ್ಯಾಡಿ ಅವರ ಮಧ್ಯೆ 4 ವರ್ಷಗಳಿಂದ ಜಮೀನಿನ ವಿಚಾರದಲ್ಲಿ ತಕರಾರಿದ್ದು, ಮೇ 27ರಂದು ರಾತ್ರಿ ಗುಣಪಾಲ ಗೌಡ ಸವಣೂರಿನಿಂದ ತನ್ನ ಮನೆಯ ಕಡೆಗೆ ಸ್ಕೂಟರಿನಲ್ಲಿ ಹೋಗುತ್ತಿರುವ ವೇಳೆ ಅವರ ಮುಂದಿನಿಂದ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ, ಪ್ರಸಾದ್ ಇಡ್ಯಾಡಿ ತನ್ನ ರಿಕ್ಷಾವನ್ನು ಸ್ಕೂಟರಿಗೆ ಅಡ್ಡ ಇಟ್ಟು ಅವಾಚ್ಯವಾಗಿ ಬೈದು, ಕೊಲ್ಲುವುದಾಗಿ ಬೆದರಿಸಿ ಕತ್ತಿಯಿಂದ ಹಲ್ಲೆ ನಡೆಸಿದ್ದ. ಗಾಯಗೊಂಡು ನೆಲಕ್ಕೆ ಬಿದ್ದ ಗುಣಪಾಲ ಬೊಬ್ಬೆ ಹೊಡೆದಾಗ ಅವರ ಮಕ್ಕಳು ಬರುವ ವೇಳೆ ಆರೋಪಿ ಪ್ರಸಾದ್ ಕತ್ತಿಯೊಂದಿಗೆ ರಿಕ್ಷಾದಲ್ಲಿ ಪರಾರಿಯಾಗಿದ್ದ. ಸ್ವಲ್ಪ ಸಮಯದ ಬಳಿಕ ಪ್ರಸಾದ್ ಇಡ್ಯಾಡಿ, ಬಾಬು ಗೌಡ ಮತ್ತು ಬಾಲಕೃಷ್ಣ ಅವರು ಘಟನೆ ನಡೆದ ಸ್ಥಳಕ್ಕೆ ಮರಳಿ ಬಂದಿದ್ದು, ಬಾಲಕೃಷ್ಣ ಅವರು ಗುಣಪಾಲ ಗೌಡರ ಮಗ ಭವಿತ್ಗೆ ಜೀವಬೆದರಿಕೆ ಒಡ್ಡಿ ಕತ್ತಿಯಿಂದ ಹಲ್ಲೆ ನಡೆಸಿದ್ದ. ತಡೆಯಲು ಹೋದ ರಂಜಿತ್ ಮತ್ತು ಮನೋಹರ್ಗೂ ಕತ್ತಿಯ ಏಟು ತಾಗಿದೆ ಎಂದು ದೂರಿನಲ್ಲಿ ತಿಳಿಸಿದಂತೆ ಪ್ರಕರಣ ದಾಖಲಾಗಿದೆ.
ಪ್ರತಿದೂರು
ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಸಾದ್ ಇಡ್ಯಾಡಿ ನೀಡಿದ ಪ್ರತಿ ದೂರಿನಂತೆ, ಆರೋಪಿಗಳಾದ ಗುಣಪಾಲ, ಮೋಕ್ಷಿತ್, ಚೇತನ್, ಭವಿತ್, ರಂಜಿತ್ ಮತ್ತು ಮನೋಹರ ಅವರು ಸೇರಿ ತನಗೆ ಹಾಗೂ ಸಹೋದರ ಬಾಲಕೃಷ್ಣ ಅವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.