ಕೃಷ್ಣಾ ಕಣಿವೆಯಲ್ಲಿ ತೈಲ ನಿಕ್ಷೇಪ ಶೋಧ


Team Udayavani, May 15, 2019, 3:07 AM IST

krishna

ಆಲಮಟ್ಟಿ: ನೈಸರ್ಗಿಕ ಸಂಪತ್ತುಗಳಾದ ಡೀಸೆಲ್‌, ಪೆಟ್ರೋಲ್‌, ಕೆರೋಸಿನ್‌ ಹಾಗೂ ಗ್ಯಾಸ್‌ (ನೈಸರ್ಗಿಕ ಅನಿಲ) ಕೃಷ್ಣಾ ಕಣಿವೆಯಲ್ಲಿ ಹೇರಳವಾಗಿದೆ ಎಂದು ಕೇಂದ್ರ ಸರ್ಕಾರ ಶೋಧನೆಗೆ ಮುಂದಾಗಿದ್ದು, ಅದರನ್ವಯ ಆಲಮಟ್ಟಿ ಸುತ್ತಮುತ್ತಲಿನ ಜಮೀನುಗಳಲ್ಲಿ ರಂಧ್ರ ಕೊರೆಯುವ ಕಾರ್ಯ ಚುರುಕುಗೊಂಡಿದೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ವತಿಯಿಂದ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಈ ಅಧ್ಯಯನ ಕಾರ್ಯ ನಡೆಯುತ್ತಿದೆ. ಅಲಾ ಜಿಯೋ ಇಂಡಿಯಾ ಲಿ. ಸಂಸ್ಥೆ ಭೂಮಿಯಲ್ಲಿ ರಂಧ್ರ ಕೊರೆದು ಆಳವನ್ನು ಆಧರಿಸಿ ಆಂತರಿಕ ಸ್ಫೋಟ ನಡೆಸಿ ದತ್ತಾಂಶ ಸಂಗ್ರಹಿಸುತ್ತಿದೆ.

ಆಲಮಟ್ಟಿ ಬಳಿ ಕೆಲವು ಜಮೀನು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಲ ಜಮೀನುಗಳಲ್ಲಿ ಕೊರೆಯಲಾಗಿರುವ ರಂಧ್ರಗಳಲ್ಲಿ ಹಲವು ರಂಧ್ರಗಳಲ್ಲಿ ನೀರು ಬರುತ್ತಿದ್ದರೆ, ಇನ್ನು ಕೆಲವು ರಂಧ್ರಗಳಲ್ಲಿ ನೀರು ಬರದೇ ಕೇವಲ ಕಲ್ಲಿನ ಪುಡಿ ಬರುತ್ತಿದೆ. ಒಂದೆರಡು ರಂಧ್ರಗಳಲ್ಲಿ ಬರುತ್ತಿರುವ ನೀರಿನಲ್ಲಿ ತೈಲದ ವಾಸನೆಯಿದೆ ಎನ್ನುತ್ತಾರೆ ಕರ್ತವ್ಯದಲ್ಲಿ ತೊಡಗಿದ್ದ ಆಂಧ್ರ ಮೂಲದ ಕಾರ್ಮಿಕರು.

ಆಲಾ ಜಿಯೋ ಸಂಸ್ಥೆ 3 ಕಿಮೀಗೆ ಒಂದರಂತೆ ಕೊಳವೆ ಬಾವಿ ಕೊರೆಯುತ್ತಿದೆ. ಈ ಅಧ್ಯಯನವು ಉಪಗ್ರಹ (ಸ್ಯಾಟ್‌ಲೆçಟ್‌) ಆಧರಿಸಿ ನಡೆಯುತ್ತದೆ. ಕೊಳವೆ(ರಂಧ್ರ) ಕೊರೆಯುವ ಜಮೀನುಗಳಲ್ಲಿ ಮೊದಲು ಜಿಯೋಫೋನ್‌ ಭೂಮಿಯಲ್ಲಿ ಹೂತಿಟ್ಟು ಅದರ ಮೂಲಕ ದತ್ತಾಂಶವನ್ನು ಗಣಕ ಯಂತ್ರದ ಸಹಾಯದಿಂದ ಸಂಗ್ರಹಿಸಲಾಗುತ್ತಿದೆ.

ಈಗಾಗಲೇ ಆಲಮಟ್ಟಿಯಿಂದ ವಿಜಯಪುರಕ್ಕೆ ತೆರಳುವ ಮಾರ್ಗದ ಅರಳದಿನ್ನಿ ಹಾಗೂ ಯಲಗೂರ ಜಮೀನುಗಳಲ್ಲಿ ಮತ್ತು ಆಲಮಟ್ಟಿ-ನಾರಾಯಣಪುರ ರಾಜ್ಯ ಹೆದ್ದಾರಿಯ ಹಡೇಕರ ಮಂಜಪ್ಪ ಸ್ಮಾರಕ ಶೈಕ್ಷಣಿಕ ಕೇಂದ್ರಗಳ ಸಮೀಪದಲ್ಲಿ ಸುಮಾರು 10 ಕಿಮೀ ಉದ್ದದಲ್ಲಿ ಕೇಬಲ್‌ ಹಾಕಲಾಗಿದೆ.

2-3 ದಿನಗಳಿಂದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಮುಂಭಾಗದಲ್ಲಿ ಸುಮಾರು 2 ಕಿಮೀ ಅಂತರದಲ್ಲಿ 30ಕ್ಕೂ ಅಧಿ ಕ ಯಂತ್ರಗಳಿಂದ ರೈತರ ಜಮೀನು, ಸರ್ಕಾರಿ ಜಮೀನುಗಳಲ್ಲದೇ ರಸ್ತೆಯ ಪಕ್ಕದಲ್ಲಿ 70 ಅಡಿಯಿಂದ 100 ಅಡಿವರೆಗೆ ರಂಧ್ರಗಳನ್ನು ಕೊರೆಯಲಾಗುತ್ತಿದೆ.

ಈಗಾಗಲೇ ಸುಮಾರು 300ಕ್ಕೂ ಅ ಧಿಕ ರಂಧ್ರಗಳನ್ನು ಕೊರೆದು ಅದರಲ್ಲಿ ಬರುವ ಮಣ್ಣು ಹಾಗೂ ಮರಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ತೈಲದ ನಿಕ್ಷೇಪ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳಿವೆಯೋ ಎನ್ನುವುದು ಸ್ಪಷ್ಟವಾಗುತ್ತದೆ.

ಹಿಂದೆಯೂ ನಡೆದಿತ್ತು ಅಧ್ಯಯನ: 2011-12ರಲ್ಲಿ ಸುಮಾರು ಮೂರು ಬಾರಿ ಭೂಗರ್ಭ ಇಲಾಖೆ ವತಿಯಿಂದ ಹೆಲಿಕಾಪ್ಟರ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷ್ಣಾ ನದಿ ದಡದಲ್ಲಿರುವ ಸುಮಾರು 10 ಕಿಮೀ ವ್ಯಾಪ್ತಿಯನ್ನೊಳಗೊಂಡಂತೆ ಭೂಗರ್ಭದಲ್ಲಿರುವ ಯುರೇನಿಯಂ, ಚಿನ್ನ, ತೈಲ ಹಾಗೂ ನೈಸರ್ಗಿಕ ಅನಿಲ ಹೀಗೆ ಹಲವಾರು ಸಂಪತ್ತುಗಳ ಕುರಿತು ಅಧ್ಯಯನ ನಡೆಸಲಾಗಿತ್ತು.

ತೈಲ ಹಾಗೂ ನೈಸರ್ಗಿಕ ಅನಿಲ ಪತ್ತೆಗಾಗಿ ಸೀಮಾಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಇಂಧನ ಶೋಧ ನಡೆಸಲಾಗುತ್ತಿದೆ. ನಾವು ಸಂಗ್ರಹಿಸಿದ ದತ್ತಾಂಶವನ್ನು ಒಎನ್‌ಜಿಸಿ ಅ ಧಿಕಾರಿಗಳಿಗೆ ಸಲ್ಲಿಸುತ್ತೇವೆ. ಬೆಳೆಯಿಲ್ಲದ ಜಮೀನುಗಳಲ್ಲಿ ಮಾತ್ರ ರಂಧ್ರ ಕೊರೆಯುತ್ತಿದ್ದೇವೆ. ಬೆಳೆ ಇರುವಲ್ಲಿ ರಂಧ್ರವನ್ನು ಕೊರೆಯುವುದಿಲ್ಲ.
-ಮುನ್ನಾ ಜಮಾದಾರ, ಕ್ಷೇತ್ರ ಮೇಲ್ವಿಚಾರಕ

ನಮ್ಮ ಜಮೀನಿನಲ್ಲಿ ರಾತ್ರೋ ರಾತ್ರಿ 16 ಕಡೆ ರಂಧ್ರ ಕೊರೆದಿದ್ದಾರೆ. ಇತ್ತೀಚೆಗಷ್ಟೇ ನೀರಿನ ಲಭ್ಯತೆಯಿರುವುದರಿಂದ ಸೋಮವಾರ ತೊಗರಿ ಬಿತ್ತನೆ ಮಾಡಲಾಗಿತ್ತು. ಮಂಗಳವಾರ ನೀರು ಹಾಯಿಸಬೇಕೆಂದರೆ ಬೃಹತ್‌ ವಾಹನಗಳನ್ನು ಬಳಸಿ ಜಮೀನನ್ನು ಹಾಳು ಮಾಡಿದ್ದಾರೆ. ಇವರು ಯಾರು, ರಂಧ್ರಗಳನ್ನು ಏಕೆ ಕೊರೆದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.
-ಎಸ್‌.ಜಿ. ಹಿರೇಮಠ, ರೈತ

ಯುಪಿಎ ಅವಧಿಯಲ್ಲಿ ಹೆಲಿಕಾಪ್ಟರ್‌ ಮೂಲಕ ಅಧ್ಯಯನ ನಡೆಸಲಾಗಿತ್ತು. ಪೆಟ್ರೋಲಿಯಂ ಉತ್ಪನ್ನ ಹಾಗೂ ನೈಸರ್ಗಿಕ ಅನಿಲ ನಮ್ಮ ದೇಶದಲ್ಲಿ ದೊರೆತರೆ ಕೊಲ್ಲಿ ರಾಷ್ಟ್ರಗಳತ್ತ ಮುಖ ಮಾಡುವುದು ತಪ್ಪುತ್ತದೆ. ಇದು ಉತ್ತಮ ಕಾರ್ಯವಾಗಿದ್ದು ಅಧ್ಯಯನ ತಂಡದವರು ರಂಧ್ರ ಕೊರೆಯುವುದಕ್ಕಿಂತ ಮುಂಚೆ ರೈತರ ಗಮನಕ್ಕೆ ತರಬೇಕು.
-ಮಲ್ಲು ರಾಠೊಡ, ತಾಪಂ ಸದಸ್ಯ

* ಶಂಕರ ಜಲ್ಲಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.