![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Vamanjoor ಬಸ್ನಿಂದ ಬಿದ್ದು ಗಂಭೀರ ಗಾಯ
Team Udayavani, Jun 28, 2024, 11:48 PM IST
![Vamanjoor ಬಸ್ನಿಂದ ಬಿದ್ದು ಗಂಭೀರ ಗಾಯ](https://www.udayavani.com/wp-content/uploads/2024/06/road-mishap-11-7-620x326.jpg)
ಮಂಗಳೂರು: ಬಸ್ನಿಂದ ಬಿದ್ದು ಪ್ರಯಾಣಿಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ವಾಮಂಜೂರು ಬಳಿ ಸಂಭವಿಸಿದೆ.
ಶಮೀಮುದ್ದೀನ್ (25) ಗಾಯಗೊಂಡವರು. ಅವರು ಗುರುವಾರ ಸಂಜೆ ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹೋಗುವ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ವಾಮಂಜೂರು ಸಮೀಪದ ಪ್ರಶಾಂತ್ನಗರ ಕ್ರಾಸ್ ಬಳಿ ತಲಪುವಾಗ ಬಸ್ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದಾಗ ಬಾಗಿಲ ಬಳಿ ನಿಂತಿದ್ದ ಶಮೀಮುದ್ದೀನ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.