![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Oct 6, 2021, 7:38 PM IST
ಕೋಟ: ಕಾರಂತರು ಬದುಕು ಒಂದು ದಂತಕಥೆಯಾಗಿದ್ದು, ಅವರು ಕೈ ಸಂಶೋಧಕರರಾಗಿ ಹೊಸತನದ ಅನ್ವೇಷಕರಾಗಿ ಬದುಕಿದವರು ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಹೇಳಿದರು.
ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಡಾ| ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ ಪ್ರದಾನ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ವೆಬಿನಾರ್ ಉಪನ್ಯಾಸದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರಂತರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟ ಕವಿ ಹೃದಯಿ , ಸಮಯ ಪಾಲನೆಯಲ್ಲಿ ಅವರಿಗಿದ್ದ ನಿಷ್ಠೆ ನಮಗೆ ಮಾದರಿ. ಯಕ್ಷಗಾನಕ್ಕೆ ಕಾರಂತರು ಜೀವಂತ ಕಲೆ ಎಂದು ವಿಶೇಷ ಮಹತ್ವ ನೀಡುತ್ತಿದ್ದರು ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಪರಂಪರೆಯನ್ನು ಮರೆಯುತ್ತಿರುವುದು ವಿಷಾದನೀಯ ಎಂದರು. ಕಾರ್ಯಕ್ರಮವನ್ನು ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸತೀಶ್ ವಡ್ಡರ್ಸೆ ಸಮನ್ವಯಗೊಳಿಸಿದರು.
ಇದನ್ನೂ ಓದಿ:ಕುಂದಾಪುರ: ಗಾಳಿ-ಮಳೆಗೆ 50ಕ್ಕೂ ಅಧಿಕ ಮನೆಗೆ ಹಾನಿ
You seem to have an Ad Blocker on.
To continue reading, please turn it off or whitelist Udayavani.