Siddapura: ಸ್ಕೂಟಿ ಸ್ಕಿಡ್: ತಂದೆ-ಮಗಳು ಗಂಭೀರ
Team Udayavani, Oct 24, 2024, 2:07 AM IST
ಸಿದ್ದಾಪುರ: ರಸ್ತೆಗೆ ಬಿದ್ದಿದ್ದ ಮರಕ್ಕೆ ಸ್ಕೂಟಿ ಢಿಕ್ಕಿಯಾಗುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ತಂದೆ-ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಉಳ್ಳೂರು ಸಿಂಗಿನಕೊಡ್ಲುವಿನಲ್ಲಿ ಸಂಭವಿಸಿದೆ.
ಕುಮಾರ್ ಅವರು ತಮ್ಮ ಮಗಳು ಅನ್ವಿತಾ ಅವರನ್ನು ಸ್ಕೂಟಿಯಲ್ಲಿ ಕುಳ್ಳಿಸಿಕೊಂಡು ಸಿಂಗಿನಕೊಡ್ಲು ಬಳಿ ಸಾಗುತ್ತಿದ್ದಾಗ ಅಡ್ಡ ಬಿದ್ದ ಮರವನ್ನು ಕಾಣದೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಇಬ್ಬರೂ ಸ್ಕೂಟಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋ ಚಾಲಕ ಶಾಂತಾರಾಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.