ಅರ್ಥ ತಿಳಿದವನೊಬ್ಬನೇ…


Team Udayavani, Jun 2, 2020, 5:02 AM IST

artha-tili

ಕುವೆಂಪು ಅವರ ಬೊಮ್ಮನಹಳ್ಳಿಯ ಕಿಂದರ ಜೋಗಿ, ಇಂಗ್ಲಿಷ್‌ನಿಂದ ಅನುವಾದವಾದ ನೀಳ್ಗವಿತೆ. ಇದರ ಮೂಲ ಲೇಖಕ ಬ್ರೌನಿಂಗ್ ಸಾರ್ಡೆಲ್ಲೋ- ಆತ ತನ್ನ 28ನೇ ವಯಸ್ಸಿನಲ್ಲಿ ಬರೆದು ಪ್ರಕಟಿಸಿದ ನೀಳ್ಗವಿತೆ. ಈ ಕವಿತೆ ಐರೋಪ್ಯ  ಕಾವ್ಯಜಗತ್ತಿನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಬಹುತೇಕ ಕವಿ, ಸಾಹಿತಿ, ವಿಮರ್ಶಕರಿಗೆ ಈ ಕಾವ್ಯದ ತಲೆಬುಡ ಅರ್ಥವಾಗಲಿಲ್ಲ. ಡಗ್ಲಾಸ್‌ ಜೆರಾಲ್ಡ್ ಎಂಬ ಸಾಹಿತಿ ಜ್ವರದಿಂದ ಬಳಲುತ್ತಿದ್ದಾಗ “ಸಾರ್ಡೆಲ್ಲೋ’ ಓದಿದನಂತೆ.

ಅದು ಜನಸಾಮಾನ್ಯರಿಗೆ ಏನೇನೂ ಅರ್ಥವಾಗದೆಂದೂ, ಪಂಡಿತರಿಗಷ್ಟೇ ಆ ಕಾವ್ಯದ ರುಚಿ ಸಿಕ್ಕೀತೆಂದೂ, ಅವನಿಗೆ ಅನ್ನಿಸಿತಂತೆ. ಆತ ತನ್ನ ಹೆಂಡತಿಗೆ ಅದನ್ನು ಓದಲು ಕೊಟ್ಟ. ಪೂರ್ತಿ ಓದಿದ ಆಕೆ- ಇದೇನು, ಸ್ವಲ್ಪವೂ ಅರ್ಥವಾಗದ ಗೊಬ್ಬರ  ಇದು! ಎಂದಾಗ, ತನ್ನ ಊಹೆ ನಿಜ ಎಂದು ಕುಣಿದು ಕುಪ್ಪಳಿಸಿದನಂತೆ! ಸಾರ್ಡೆಲ್ಲೋ ಕಾವ್ಯದಿಂದಾಗಿ, ಬ್ರೌನಿಂಗ್‌ನ ಸಾಮರ್ಥ್ಯಕ್ಕೆ ಒಳಗೊಳಗೇ ಉರಿದವರೂ ಇದ್ದರು.

ಲಾರ್ಡ್‌ ಟೆನ್ನಿಸನ್‌ ಎಂಬ ಕವಿ, ಸಾರ್ಡೆಲ್ಲೋ ವಿಷಯದಲ್ಲಿ,  ಆ ಅಷ್ಟುದ್ದದ ಕವಿತೆಯಲ್ಲಿ ಅರ್ಥವಾಗ ಬಲ್ಲ ಸಾಲುಗಳು ಎರಡೇ. ಆದರೆ, ಅವೆರಡೂ ಸುಳ್ಳು ಗಳೇ ಎಂದಿದ್ದಾನೆ. ಕಾಲೈಲ್‌ ಎಂಬ ಇನ್ನೊಬ್ಬ ಕವಿ, ನಾನು ಅದನ್ನು ನನ್ನ ಪತ್ನಿಗೆ ಓದಿಸಿದೆ. ಸಾರ್ಡೆಲ್ಲೋ ಎಂದರೆ ವ್ಯಕ್ತಿಯೇ, ನಗರವೇ ಅಥವಾ ಕೇವಲ ಪುಸ್ತಕದ ಹೆಸರೇ ಎಂಬುದು ಆಕೆಗಿನ್ನೂ ಬಗೆಹರಿದಿಲ್ಲ ಎಂದ.  ಒಮ್ಮೆ, ಒಂದಷ್ಟು ಮಂದಿ ನೇರ ಬ್ರೌನಿಂಗ್‌ ಬಳಿಯೇ ಬಂದು, ಕವಿತೆಯ ಒಂದೆರಡು ಭಾಗಗಳನ್ನು ತೋರಿಸಿ ಇದರ ಅರ್ಥ ಹೇಳಿ ಎಂದು ದುಂಬಾಲು  ಬಿದ್ದರು.

ಬ್ರೌನಿಂಗ್‌, ಕವಿತೆಯ ಕೆಲ ಸಾಲುಗಳನ್ನು ನಾಟಕೀಯವಾಗಿ, ಧ್ವನಿಯ ಏರಿಳಿತಗಳೊಂದಿಗೆ ಓದಿ ಹೇಳಿದ. ಅರ್ಥವಾಗಲಿಲ್ಲ ಎಂದಿತು ಗುಂಪು. ಆತ ಮತ್ತೂಮ್ಮೆ ಅವೇ ಸಾಲುಗಳನ್ನು ಇನ್ನಷ್ಟು ಲಂಬಿಸಿ ಓದಿದ.  ಆಗಲೂ ಗುಂಪಿಗೆ ಏನೇನೂ ತಿಳಿಯಲಿಲ್ಲ. ಆಗ ಬ್ರೌನಿಂಗ್‌ ಹೇಳಿದ: ನಾನು ಈ ಸಾಲುಗಳನ್ನು ಬರೆದಾಗ ಇಬ್ಬರಿಗೆ ಅವುಗಳ ಅರ್ಥ ತಿಳಿದಿತ್ತು. ಒಂದು ನಾನು, ಇನ್ನೊಂದು ದೇವರು. ಆದರೆ ಈಗ ಅವುಗಳ ಅರ್ಥ ಗೊತ್ತಿರುವುದು ಆ ದೇವರಿಗೆ  ಮಾತ್ರ.

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.