ಕೃತಕ ಗೂಡುಗಳಲ್ಲೀಗ ಗುಬ್ಬಚ್ಚಿಗಳ ಕಲರವ!


Team Udayavani, Jun 16, 2020, 6:15 AM IST

ಕೃತಕ ಗೂಡುಗಳಲ್ಲೀಗ ಗುಬ್ಬಚ್ಚಿಗಳ ಕಲರವ!

ಮಹಾನಗರ: ನಗರೀಕರಣದ ನಡುವೆ ನಾಶವಾಗುತ್ತಿರುವ ಗುಬ್ಬಚ್ಚಿ ಸಂತತಿಯನ್ನು ಉಳಿಸುವ ಉದ್ದೇಶದಿಂದ ಮಂಗಳೂರಿನ ಪ್ರಾಣಿ ಸಂರಕ್ಷಕ ತೌಸಿಫ್‌ ಅಹ್ಮದ್‌ ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿದ್ದ ಗೂಡುಗಳಲ್ಲಿಂದು ಗುಬ್ಬಚ್ಚಿಗಳು ನೆಲೆಸಿವೆ.

ಮಂಗಳೂರು ನಗರ ದಿನೇದಿನೆ ಬೆಳೆಯುತ್ತಿದ್ದು, ಮರಗಳು ನಾಶವಾ ಗುತ್ತಿವೆ. ಪಕ್ಷಿಗಳಿಗೆ ಗೂಡುಕಟ್ಟಲು ಮರಗಳೇ ಇಲ್ಲ ಎಂಬ ಕಾರಣಕ್ಕೆ ಪಕ್ಷಿಗಳ ಸಂತತಿ ಉಳಿಸುವ ಉದ್ದೇಶದಿಂದ ತೌಸಿಫ್‌ ಅವರು ಪಿವಿಸಿ ಪೈಪ್‌ ಮೂಲಕ ಗುಬ್ಬಚ್ಚಿ ಗೂಡು ತಯಾರಿಸಿ ನಗರದ ಕಾಡುಗಳು, ಪಾರ್ಕ್‌, ಮನೆಗಳ ಟೆರೇಸ್‌ ಸೇರಿದಂತೆ 100 ಕಡೆ ಇರಿಸಿದ್ದರು. ಇದೀಗ ಕೆಲವು ಗೂಡುಗಳಲ್ಲಿ ಗುಬ್ಬಚ್ಚಿಗಳು ನೆಲೆಸಿದ್ದಲ್ಲದೆ ಕೆಲವು ಗುಬ್ಬಚ್ಚಿಗಳು ಮರಿ ಮಾಡಿವೆ.

ಅನ್ಯ ಪಕ್ಷಿ, ಅಳಿಲಿಗೂ ನೆಲೆ
ಗೂಡುಗಳಲ್ಲಿ ಬೇರೆ ಪಕ್ಷಿಗಳು, ಅಳಿಲು ಗಳು ನೆಲೆ ಕಂಡುಕೊಂಡದ್ದೂ ಇದೆ ಎನ್ನುತ್ತಾರೆ ತೌಸಿಫ್‌. ಮಳೆಗಾಲ ಮುಗಿದ ಬಳಿಕ ನಗರದ ವಿವಿಧ ಮನೆಗಳಿಗೆ ತೆರಳಿ ಗೂಡು ವಿತರಿಸುವ ಕಾರ್ಯಕ್ಕೆ ತೌಸಿಫ್‌ ಮುಂದಾಗಲಿದ್ದಾರೆ.ಈ ಗೂಡು ನಿರ್ಮಿಸಲು ಹೆಚ್ಚೇನೂ ಖರ್ಚಾಗಿಲ್ಲ. ಸುಮಾರು 2.5 ಅಡಿ ಉದ್ದ ಸುಮಾರು 4 ಇಂಚು ಅಗಲದ ಪೈಪ್‌ ತುಂಡು ಮಾಡಿ, ಮೂರು ತೂತುಗಳನ್ನು ಮಾಡಿ ಗೂಡುಗಳಾಗಿ ಪರಿವರ್ತಿಸಿದ್ದಾರೆ.

ಅವುಗಳನ್ನು ಮನೆಯ ಹೊರಗಡೆ, ಕಾರು ಪಾರ್ಕಿಂಗ್‌, ಬಾಲ್ಕನಿ, ಮರಗಳಿ ರುವ ಪ್ರದೇಶದಲ್ಲಿ ಅಲ್ಲದೆ, ಮರಗಳ ಮೇಲೆಯೂ ಇಡಬಹುದು.

ಮಡಕೆಗಳಲ್ಲಿ ನೀರು
ಪ್ರಾಣಿ, ಪಕ್ಷಿಗಳಿಗೆ ಕುಡಿಯಲೆಂದು ತೌಸೀಫ್‌ ಅವರು ಈಗಾಗಲೇ ನಗರದ ವಿವಿಧ ಕಡೆಗಳಲ್ಲಿ ಸುಮಾರು 100 ಮಡಕೆಗಳಲ್ಲಿ ನೀರು ತುಂಬಿ ಇಟ್ಟಿದ್ದರು. ಸಾರ್ವಜನಿಕರು ಆ ಮಡಕೆಗೆ ನೀರು ಹಾಕುತ್ತಿದ್ದು, ಪಕ್ಷಿಗಳು, ದನ, ಬೀದಿ ನಾಯಿ ಸೇರಿದಂತೆ ಪ್ರಾಣಿಗಳ ದಾಹ ತಣಿಸುತ್ತಿದ್ದವು. ಸದ್ಯ ಮಳೆಗಾಲ ಆರಂಭವಾದ ಕಾರಣ, ಡೆಂಗ್ಯೂ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ ಈ ಮಡಕೆಗಳನ್ನು ಕವುಚಿ ಇಡಲಾಗಿದೆ.

ಟಾಪ್ ನ್ಯೂಸ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!

Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ವಿಧಾನ ಪರಿಷತ್‌ ಉಪ ಚುನಾವಣೆ… ಮತ ಎಣಿಕೆ ಪ್ರಕ್ರಿಯೆ ಆರಂಭ

Mangaluru: ವಿಧಾನ ಪರಿಷತ್‌ ಉಪ ಚುನಾವಣೆ… ಮತ ಎಣಿಕೆ ಪ್ರಕ್ರಿಯೆ ಆರಂಭ

Rubber-Dec

Growers Worried: ಕುಸಿತ ಹಾದಿಯಲ್ಲಿ ರಬ್ಬರ್‌ ಧಾರಣೆ

16

Mangaluru: ಅಪಘಾತ; ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್‌

money

Mangaluru: ಸಿಬಿಐ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ 31.12 ಲಕ್ಷ ರೂ. ವಂಚನೆ

Crackers

Mangaluru: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ; ವಿರೋಧ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

Arrested: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

2-bbk11

BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ

1

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Female CFO: ಭಾರತದ ಪಾಮ್‌ ಕೌರ್‌ಗೆ ಎಚ್‌ಎಸ್‌ಬಿಸಿ ಸಿಎಫ್ಒ ಹುದ್ದೆ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.