![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Dec 31, 2021, 9:27 PM IST
ಕುಷ್ಟಗಿ: 2021ಕ್ಕೆ ವಿದಾಯ ಹೇಳಿ ಬರಲಿರುವ ಹೊಸ ವರ್ಷವು ಹರುಷದಿಂದ ಕೂಡಿರಲಿ, ಮಕ್ಕಳು ಬರುವ ವರ್ಷವನ್ನು ಸಿಹಿಯೊಂದಿಗೆ ಸ್ವಾಗತಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ತಾಲೂಕಿನ ನೀರಲೂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿ ಊಟದ ವೇಳೆ ಕರಿಗಡಬು, ಹಪ್ಪಳ, ಸಂಡಿಗೆ ಸಹಿತ ವಿಶೇಷ ಹಬ್ಬದ ಊಟ ಬಡಿಸಲಾಗಿದೆ.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಖಾಜಾಸಾಬ್ ಪಿಂಜಾರ ಅವರು, ಶುಕ್ರವಾರ ಶಾಲಾ ಮಕ್ಕಳಿಗೆ ಸ್ವಂತ ಖರ್ಚಿನಿಂದ ಹಬ್ಬದ ಔತಣ ನೀಡಿ ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ. 1ರಿಂದ 7ನೇ ತರಗತಿಯ 176 ಮಕ್ಕಳು ಮದ್ಯಾಹ್ನದ ಊಟವಾಗಿ ಬೆಲ್ಲ, ಕಡಲೆ ಬೇಳೆಯ ಹೂರಣದ ಕರಿಗಡಬು, ಹಪ್ಪಳ, ಸಂಡಿಗೆ , ಕಟ್ಟಿನ ಸಾರು ಉಂಡು ಬಾಯಿ ಚಪ್ಪರಿಸಿರುವುದು ವಿದಾಯದ ವರ್ಷ ಹಾಗೂ ಸ್ವಾಗತಿಸುವ ಹೊಸ ವರ್ಷವನ್ನು ಸ್ಮರಣೀವಾಗಿಸಿದರು.
ಕರಿಗಡುಬಿನ ಜೊತೆಗೆ ತುಪ್ಪವನ್ನು ಮಕ್ಕಳಿಗೆ ಊಣ ಬಡಿಸಲಾಯಿತು. ಈ ಕುರಿತು, ಮಕ್ಕಳಿಗೆ ಸಿಹಿ ಊಟ ನೀಡಿದರೆ ಮಕ್ಕಳು ಲವಲವಿಕೆಯಿಂದ ಶಾಲೆಗೆ ಬರುತ್ತಾರೆ. ಅಲ್ಲದೇ ಮಕ್ಕಳಿಗೆ ಬರಲಿರುವ ಹೊಸ ವರ್ಷ ಅವರ ಬಾಳಲ್ಲಿ ಸಿಹಿಯಾಗಿರಲಿ ಎನ್ನುವ ಸದುದ್ದೇಶದ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬದ ಅಡುಗೆ ತಯಾರಿದ್ದಾಗಿ ಖಾಜಾಸಾಬ್ ಪಿಂಜಾರ ಹೇಳಿದರು.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.