ಸ್ಟಾರ್ಟ್‌ ಆ್ಯಕ್ಷನ್‌!: ರಿಸೆಷನ್‌ನಲ್ಲಿ ಶುರುವಾದ ಕಂಪನಿಗಳು


Team Udayavani, May 25, 2020, 5:05 AM IST

smart-actopn

ಆರ್ಥಿಕತೆ ಸಂಕಷ್ಟದಲ್ಲಿರುವ ಸಮಯದಲ್ಲಿ, ಹಲವು ತೊಂದರೆಗಳು ಎದುರಾಗುತ್ತವೆ. ಅಚ್ಚರಿಯ ಸಂಗತಿಯೆಂದರೆ, ಇಂಥ ಸಂಕಷ್ಟದ ಸಮಯದಲ್ಲೇ ಅನೇಕ ಸಂಸ್ಥೆಗಳು ಹುಟ್ಟಿಕೊಂಡು, ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೂ ಕಾರಣ  ಆಗಿವೆ. ಇಂದು ಇರುವ ಅನೇಕ ಬಹುರಾಷ್ಟ್ರೀಯ ಕಂಪನಿಗಳು, ಆರ್ಥಿಕ ಮಹಾಕುಸಿತದ ಸಮಯದಲ್ಲೇ ಸ್ಥಾಪನೆಯಾದವು ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಆ ಕಂಪನಿಗಳ ಹುಟ್ಟಿಕೊಂಡ ಸಂದರ್ಭ ಮತ್ತು ಅವುಗಳ ವಿವರ ಇಂತಿದೆ…

ಪ್ರಾಕ್ಟರ್‌ ಅಂಡ್‌ ಗ್ಯಾಂಬಲ್‌: ದಿನನಿತ್ಯ ನಾವು ಬಳಸುವ ಸೋಪು, ಟೂತ್‌ಪೇಸ್ಟ್, ಶ್ಯಾಂಪೂ ಮುಂತಾದ ಹತ್ತು ಹಲವು ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆ ಪ್ರಾಕ್ಟರ್‌ ಅಂಡ್‌ ಗ್ಯಾಂಬಲ. ಇದು, 18ನೇ ಶತಮಾನದಲ್ಲಿ, ಅಮೆರಿಕ ಕಂಡ  ಆರ್ಥಿಕ ಕುಸಿತದ ಸಮಯದಲ್ಲಿ ಸ್ಥಾಪನೆಗೊಂಡಿತ್ತು.  ಶುರುವಿನಲ್ಲಿ ಇದು ಸೋಪು ತಯಾರಿಕಾ ಸಂಸ್ಥೆಯಷ್ಟೇ ಆಗಿತ್ತು. ಆದರೆ ಇಂದು, ಜಗತ್ತಿನ ಅತಿದೊಡ್ಡ ಕನ್ಸೂಮರ್‌ ಗೂಡ್ಸ್ ತಯಾರಕ ಕಂಪನಿಯಾಗಿ ಬೆಳೆದು ನಿಂತಿದೆ. ಹೆಡ್‌  ಅಂಡ್‌ ಶೋಲ್ಡರ್ಸ್‌, ಟೈಡ್‌, ಜಿಲೆಟ್‌, ಓಲೇ ಮುಂತಾದ ಬ್ರ್ಯಾಂಡ್‌ಗಳು ಇದೇ ಸಂಸ್ಥೆಗೆ ಸೇರಿವೆ. 183  ರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆ, ಬಹಳಷ್ಟು ಆರ್ಥಿಕ ಕುಸಿತಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತಿದೆ.

ಜನರಲ್‌ ಮೋಟಾರ್ಸ್‌: ಜಗತ್ತಿನ ಅತಿದೊಡ್ಡ ಅಟೊಮೊಬೈಲ್‌ ತಯಾರಕ ಸಂಸ್ಥೆ ಎನಿಸಿಕೊಂಡಿರುವ ಜನರಲ್‌ ಮೋಟಾರ್ಸ್‌ ಸ್ಥಾಪನೆಯಾಗಿದ್ದು, 1908ರಲ್ಲಿ. ಆಗ ಜಗತ್ತು ಆರ್ಥಿಕ ಮಹಾಕುಸಿತವನ್ನು ಎದುರಿಸುತ್ತಿದ್ದಿತು. ಆ ಸಮಯದಲ್ಲಿ ಕಂಪನಿ,  ಕಾರು ಮಾರಲು ಸಾಕಷ್ಟು ತೊಂದರೆಗಳನ್ನು ಎದುರಿಸಿತು. ಆದರೆ, ಆನಂತರದಲ್ಲಿ ಹತ್ತಾರು ಸಣ್ಣಪುಟ್ಟ ಕಾರುತಯಾರಕ ಕಂಪನಿಗಳನ್ನು ವಶಪಡಿಸಿಕೊಂಡು, ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಹೊರಹೊಮ್ಮಿತು. ಭಾರತದಲ್ಲಿ ಈ ಸಂಸ್ಥೆ ಶೆವರೋಲೆಟ, ಓಪೆಲ್‌ ಮಾಡೆಲ್‌ನ ಕಾರುಗಳನ್ನು ಪರಿಚಯಿಸಿತ್ತು.

ಎಚ್‌ ಪಿ: “ದಿ ಗ್ರೇಟ್‌ ಡಿಪ್ರಷನ್‌’ ಎಂದೇ ಕುಖ್ಯಾತಿ ಪಡೆದ, 1937ರ ಆರ್ಥಿಕ ಮಹಾಕುಸಿತದ ಸಮಯದಲ್ಲೇ, ಎಚ್‌ಪಿ ಸಂಸ್ಥೆ ಸ್ಥಾಪನೆಯಾಗಿದ್ದು. ಕಂಪ್ಯೂಟರ್‌, ಪ್ರಿಂಟರ್‌ ಸೇರಿದಂತೆ, ಹಲವು ಎಲೆಕ್ಟ್ರಾನಿಕ್‌  ಉತ್ಪನ್ನಗಳನ್ನು ತಯಾರಿಸುವ  ಈ ಸಂಸ್ಥೆ, ಶುರುವಿನಲ್ಲಿ ರೇಡಿಯೊ ಆಸಿಲೇಟರ್‌ ಎನ್ನುವ ಉಪಕರಣವನ್ನು ತಯಾರಿಸುತ್ತಿತ್ತು. ಧ್ವನಿಗ್ರಹಣ ತಂತ್ರಜ್ಞಾನದಲ್ಲಿ ಬಳಸುವ ಉಪಕರಣಗಳ ಪರೀಕ್ಷೆಗಾಗಿ, ರೇಡಿಯೊ ಆಸಿಲೇಟರ್‌ ನ ಅಗತ್ಯವಿತ್ತು. ಎಚ್‌ ಪಿ ಸಂಸ್ಥೆ ಕಂಪ್ಯೂಟರ್‌ ಕ್ಷೇತ್ರಕ್ಕೆ ಕಾಲಿಟ್ಟಿದ್ದು, 1966ರಲ್ಲಿ.

ಮೈಕ್ರೊಸಾಫ್ಟ್‌: ಆಫೀಸು, ಶಾಲೆ, ಬ್ಯಾಂಕು, ಹೀಗೆ ಎಲ್ಲಾ ಕಡೆಗಳಲ್ಲಿ ಮೈಕ್ರೊಸಾಫ್ಟ್‌ ಕಂಪ್ಯೂಟರ್‌, ಆಪರೇಟಿಂಗ್‌ ಸಿಸ್ಟಂಗಳನ್ನು ನೋಡಬಹುದು. ಅದಿಲ್ಲದೇ ಕೆಲಸಗಳೇ ನಡೆಯುವುದಿಲ್ಲ. ಈ ಕಂಪನಿ ಸ್ಥಾಪನೆಗೊಂಡಿದ್ದು 1975ರಲ್ಲಿ.  ಆಗ ಅಮೆರಿಕದಲ್ಲಿ ರಿಸೆಷನ್‌ ಕಾಡುತ್ತಿತ್ತು. ಆರಂಭದಲ್ಲಿ ಸಾಫ್ಟ್‌ವೇರ್‌ ಮಾತ್ರ ತಯಾರಿಸುತ್ತಿದ್ದ ಸಂಸ್ಥೆ, ಐದು ವರ್ಷಗಳ ನಂತರ, ಮೊದಲ ಪರ್ಸನಲ್‌ ಕಂಪ್ಯೂಟರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಇದರಿಂದ ಕಂಪನಿ  ಎಷ್ಟು ಲಾಭ ಸಂಪಾದಿಸಿತೆಂ ದರೆ, ಬಿಲ್‌ ಗೇಟ್ಸ್‌ ಇಂದು ಮೈಕ್ರೊ ಸಾಫ್ಟ್‌ ಮುಖ್ಯಸ್ಥನ ಹುದ್ದೆಯಿಂದ ಕೆಳಕ್ಕಿಳಿದಿದ್ದರೂ, ಜಗತ್ತಿನ ಎರಡನೇ ಅತಿದೊಡ್ಡ ಶ್ರೀಮಂತ ಎಂದು ಗುರುತಿಸಲ್ಪಡುತ್ತಾರೆ.

ಟಾಪ್ ನ್ಯೂಸ್

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

Dengue

Health Problem: ಕರುನಾಡ‌ ಜೀವ‌ ಹಿಂಡುತ್ತಿರುವ ಡೆಂಗ್ಯೂ!

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಅನಿರೀಕ್ಷಿತ ಶ್ಲಾಘನೆ, ನೌಕರರಿಗೆ ವರ್ಗಾವಣೆಯ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

High-Court

HSRP ಅಳವಡಿಕೆ ಅವಧಿ ಸೆ. 15ರವರೆಗೆ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.