ರಾಜ್ಯದ ಮೊದಲ ಕೃಷಿ ಮ್ಯೂಸಿಯಂ ಉದ್ಘಾಟನೆಗೆ ಸಿದ್ಧ

ಒಂದೇ ಸೂರಿನಡಿ ಸಮ್ರಗ ಕೃಷಿ ಮಾಹಿತಿ - ಬೆಂಗಳೂರಿನ ಕೃಷಿ ವಿವಿ ಆವರಣದಲ್ಲಿ ಆ.3ರಂದು ಆರಂಭ

Team Udayavani, Jul 31, 2023, 6:28 AM IST

farm house

ಬೆಂಗಳೂರು: ಕೃಷಿ ಕುರಿತ ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ಶ್ರವಣ ಹಾಗೂ ದೃಶ್ಯ ಮಾದರಿಗಳ ಮೂಲಕ ಪಡೆಯಬಹುದಾದ ರಾಜ್ಯದ ಮೊದಲ “ಕೃಷಿ ಮ್ಯೂಸಿಯಂ” ಸಿದ್ಧತೆ ಕೆಲಸಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ವೀಕ್ಷಣೆಗೆ ಶೀಘ್ರವೇ ಲಭ್ಯವಾಗಲಿದೆ.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 923 ಚದರ ಅಡಿ ವಿಸ್ತೀರ್ಣದಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾದ ಕೃಷಿ ಮ್ಯೂಸಿಯಂ ಆ.3ರಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಸಮಗ್ರ ಕೃಷಿ ಪರಿಕಲ್ಪನೆಯಡಿ ಸೂಕ್ತ ಮಾದರಿ ಅಳವಡಿಸಿಕೊಂಡು ರೈತರಿಗೆ, ಶಾಲಾ ಮಕ್ಕಳಿಗೆ, ಪ್ರವಾಸಿಗರಿಗೆ, ಕೃಷಿ ಆಸಕ್ತರಿಗೆ ಕೃಷಿಯ ಸಂಪೂರ್ಣ ಮಾಹಿತಿ ಇಲ್ಲಿ ಸಿಗಲಿದೆ.

ಸುಂದರ ಟ್ಯಾಬ್ಲೋ ಆಕೃತಿ
ಮ್ಯೂಸಿಯಂನಲ್ಲಿ ಕೃಷಿ ಕುರಿತ ಸಮಗ್ರ ಮಾಹಿತಿಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ವಿಭಾಗದಲ್ಲಿ ಅನಾದಿಕಾಲದಿಂದ ಇಂದಿನವರೆಗೆ ರಾಜ್ಯದಲ್ಲಿ ಅನುಸರಿಸುತ್ತಿದ್ದ ಕೃಷಿ ಪದ್ಧತಿಗಳನ್ನು ಸುಂದರವಾದ ಟ್ಯಾಬ್ಲೋ ಆಕೃತಿಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಜತೆಗೆ ಕೃಷಿ ಇತಿಹಾಸ, ಅಭಿವೃದ್ಧಿ, ಕೃಷಿ ವಿವಿ ಸ್ಥಾಪನೆ ಹಾಗೂ ಬೆಳೆದು ಬಂದಿರುವ ಹಾದಿ ಕುರಿತು ಭಿತ್ತಿ ಚಿತ್ರಗಳ ಮೂಲಕ ಸಂಪೂರ್ಣ ಮಾಹಿತಿ ನೀಡಲಿದೆ.

ಕೃಷಿ ತಳಿ-ಯಂತ್ರಜ್ಞಾನ
ಮಣ್ಣಿನ ರಚನೆ, ಬೆಳೆಗಳ ಪದ್ಧತಿ, ಬೆಳೆ ರೋಗ, ಸಾವಯವ ಕೃಷಿ, ಬೀಜ ಬಿತ್ತನೆ ಯಾಂತ್ರೀಕರಣ, ಜೈವಿಕ ತಾಂತ್ರಿಕತೆ, ಜೈವಿಕ ತಂತ್ರಜ್ಞಾನ, ಆನುವಂಶೀಯ ಮತ್ತು ಸಸ್ಯ ತಳಿಯ ಅಭಿವೃದ್ಧಿ ಹಾಗೂ ರೇಷ್ಮೆ, ಜೇನು ಕೃಷಿ ಕುರಿತ ಮಾಹಿತಿ ಲಭ್ಯವಾಗಲಿದೆ. ಜತೆಗೆ ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿಗೆ ಬಳಸಲ್ಪಡುವ ಯಂತ್ರಗಳು ವಸ್ತು ಸಂಗ್ರಹಾಲಯದಲ್ಲಿವೆ.

ಹೈನುಗಾರಿಕೆ ಮಾಹಿತಿ
ಹೈನುಗಾರಿಕೆ ಹಾಗೂ ಕೃಷಿ ಉತ್ಪನ್ನಗಳು ಯಾವ ರೀತಿ ಮಾರುಕಟ್ಟೆ ತಲುಪುತ್ತದೆ ಎನ್ನುವ ಮಾಹಿತಿ ಇಲ್ಲಿದೆ. ಕೃಷಿ, ಅರಣ್ಯ, ಆಧುನಿಕ ಕೃಷಿ ಮಾರುಕಟ್ಟೆ, ವಿಸ್ತರಣೆ ತಂತ್ರಜ್ಞಾನ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಮುಂತಾದವುಗಳ ಕಲಾಕೃತಿಗಳಿವೆ. ಜತೆಗೆ ವಿವಿಧ ಪಕ್ಷಿಗಳ ಧ್ವನಿಯನ್ನೂ ಇಲ್ಲಿ ಕೇಳಬಹುದಾಗಿದೆ.

ಆಕರ್ಷಕ ಪ್ರಾಂಗಣ
ಮ್ಯೂಸಿಯಂ ಪ್ರಾಂಗಣವು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು, ಇಲ್ಲಿ ಸಾಂಪ್ರದಾಯಿಕ ಹಾಗೂ ಯಾಂತ್ರಿಕ ಕೃಷಿಯನ್ನು ಬಿಂಬಿಸುವ ಟ್ಯಾಬ್ಲೋಗಳಿವೆ. ಪ್ರಾಂಗಣದಲ್ಲಿ ಕೃಷಿ ಬಗ್ಗೆ ಮಾಹಿತಿ ನೀಡಿದ ಬಳಿಕ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಏಕಕಾಲಕ್ಕೆ 700ಕ್ಕೂ ಅಧಿಕ ಮಂದಿ ಮ್ಯೂಸಿಯಂ ಅನ್ನು ವೀಕ್ಷಿಸಬಹುದು.

ಉಚಿತ ಪ್ರವೇಶ
ಪ್ರಸ್ತುತ ಉಚಿತ ಪ್ರವೇಶ ಕಲ್ಪಿಸಿದ್ದು, ಕಚೇರಿ ದಿನಗಳಲ್ಲಿ ಬೆಳಗ್ಗೆ 9ರಿಂದ 4ರ ವರೆಗೆ ಹಾಗೂ ಶನಿವಾರ 9ರಿಂದ 12.30ರ ವರೆಗೆ ಸಾರ್ವಜನಿಕರು ಭೇಟಿ ನೀಡಬಹುದು. ಮ್ಯೂಸಿಯಂ ಸಮೀಪ ಸಿರಿಧಾನ್ಯ ಉತ್ಪನ್ನಗಳ ಮಾರಾಟ ಕೇಂದ್ರವೂ ಇದೆ. ಆಧುನಿಕ ಕೃಷಿ ಯಂತ್ರ, ಬೀಜ ಹಾಗೂ ಸಸಿಗಳ ಮಾರಾಟ ವ್ಯವಸ್ಥೆಯೂ ಇದೆ.

ಮುಂಬರುವ ದಿನದಲ್ಲಿ ಕೃಷಿ ಮ್ಯೂಸಿಯಂ ಒಂದು ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ. ಇದು ಯುವಜನರನ್ನು ಕೃಷಿಯತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಶಾಲಾ ಮಕ್ಕಳು ಮ್ಯೂಸಿಯಂಗೆ ಭೇಟಿ ನೀಡುವ ಮೂಲಕ ಕೃಷಿ ಸಂಬಂಧಿಸಿದ ಮಾಹಿತಿ ಸಿಗಲಿದೆ.
-ಡಾ| ಎಸ್‌.ವಿ. ಸುರೇಶ್‌, ಕುಲಪತಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು.

ತೃಪ್ತಿ ಕುಮ್ರಗೋಡು

ಟಾಪ್ ನ್ಯೂಸ್

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

7-sirsi

ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ವ್ಯವಸ್ಥೆ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

6-belthangady

Belthangady: ಉತ್ತಮ ಮಳೆ; ತೆಂಕಾರಂದೂರು ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ

Mass Wedding: ರಿಲಯನ್ಸ್‌ನಿಂದ 50 ಜೋಡಿಗೆ ವಿವಾಹಭಾಗ್ಯ: ತಲಾ 1ಲಕ್ಷ ಸ್ತ್ರೀ ಧನ

Mass Wedding: ರಿಲಯನ್ಸ್‌ನಿಂದ 50 ಜೋಡಿಗೆ ವಿವಾಹಭಾಗ್ಯ: ತಲಾ 1ಲಕ್ಷ ಸ್ತ್ರೀ ಧನ

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

Vijayapura: ಕೃಷ್ಣಾ ನದಿ ತೆಪ್ಪ ದುರಂತ… ರಫೀಕ್ ಶವ ಪತ್ತೆ, ರಕ್ಷಣಾ ಕಾರ್ಯಾಚರಣೆ ಮುಕ್ತಾಯ

Dinesh-gundurao

Private Hospital: ಡೆಂಗ್ಯೂ ಪರೀಕ್ಷೆಗೆ ಏಕರೂಪ ದರ

CM-Siddaramaiah

Valmiki Nigama ಅಕ್ರಮದ ತನಿಖೆ ನಡೆಯುತ್ತಿದೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Naxal chandru- Naxal Chandru arrested after 19 years; What is the case?

Naxal chandru-19 ವರ್ಷದ ಬಳಿಕ ನಕ್ಸಲ್‌ ಚಂದ್ರು ಸೆರೆ; ಏನಿದು ಪ್ರಕರಣ?

7-sirsi

ತುಂಬಿ‌ ಹರಿಯುತ್ತಿರುವ ಚಂಡಿಕಾ‌ನದಿ‌;ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ವ್ಯವಸ್ಥೆ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

6-belthangady

Belthangady: ಉತ್ತಮ ಮಳೆ; ತೆಂಕಾರಂದೂರು ದೇವಸ್ಥಾನದ ಆವರಣದ ತಡೆ ಗೋಡೆ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.