ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ


Team Udayavani, Jan 17, 2022, 1:22 PM IST

ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ

ಬಳ್ಳಾರಿ: ಕೋವಿಡ್‌ ಹಿನ್ನೆಲೆ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದ್ದರೂ, ಜಿಲ್ಲಾ ಧಿಕಾರಿಗಳು ಹೊರಡಿಸಿದ ಆದೇಶದ ಎಡವಟ್ಟುನಿಂದ ವಸತಿ ನಿಲಯಗಳನ್ನು ಖಾಲಿ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಸ್‌ಗಳಿಲ್ಲದೇ ನಿಲ್ದಾಣಗಳಲ್ಲಿ ಭಾನುವಾರ ಪರದಾಡಿದ ಪ್ರಸಂಗ ನಡೆಯಿತು. ಈ ಕುರಿತು ತಿಳಿದು ನಿಲ್ದಾಣಕ್ಕೆ ಆಗಮಿಸಿದ
ಶಾಸಕ ಜಿ.ಸೋಮಶೇಖರರೆಡ್ಡಿ, ಬಸ್‌ ವ್ಯವಸ್ಥೆ ಮಾಡಿ ಕಳುಹಿಸಿದರು.

ಕೋವಿಡ್‌ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಶನಿವಾರ ಭಾನುವಾರ ವೀಕೆಂಡ್‌ ಕರ್ಫ್ಯೂ ಜಾರಿಯಲ್ಲಿದ್ದರೂ ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲೂ ವಿದ್ಯಾರ್ಥಿಗಳಲ್ಲೂ ಸೋಂಕು ಪತ್ತೆಯಾಗಿದ್ದು, ಎಲ್ಲೆಡೆ ಸೋಂಕು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿಯವರು ಎಲ್ಲ ಹಂತದ ವಸತಿ ನಿಲಯಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳುವಂತೆ ಶನಿವಾರ ಆದೇಶ ಹೊರಡಿಸಿದ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು, ಭಾನುವಾರ ಊಟ, ಉಪಾಹಾರ, ಬಸ್‌ಗಳಿಲ್ಲದೇ
ಪರದಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇರುವ ನಿಲಯಗಳಲ್ಲಿ ಡಿಸಿ ಆದೇಶದಿಂದ ಶನಿವಾರ ರಾತ್ರಿ, ಭಾನುವಾರ ಬೆಳಗ್ಗೆ ಸಮರ್ಪಕವಾಗಿ ಊಟ, ಉಪಾಹಾರ ನೀಡದೆ ನಿಲಯದಿಂದ ಹೊರ ಕಳುಹಿಸಲಾಗಿದೆ. ಕೆಲ ನಿಲಯಗಳಲ್ಲಿ ಕೇವಲ ಟಿ, ಬಿಸ್ಕತ್‌ ಮಾತ್ರ ನೀಡಲಾಗಿದೆ. ನಿಲಯಗಳಿಂದ ತಮ್ಮ
ತಮ್ಮ ಊರುಗಳಿಗೆ ತೆರಳಲು ಬ್ಯಾಗ್‌ಗಳೊಂದಿಗೆ ನಿಲ್ದಾಣಗಳಿಗೆ ಬಂದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್‌ಗಳು ಸಹ ಸಿಗದೆ ಎರಡೂ¾ರು ಗಂಟೆಯಿಂದ ಬಸ್‌ ಗಾಗಿ ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಡಿಸಿ ಪವನ್‌ಕುಮಾರ್‌ ಮಾಲಪಾಟಿಯವರು ಯಾವ ವಿದ್ಯಾರ್ಥಿಗಳನ್ನು ಬಲವಂತವಾಗಿ ಕಳುಹಿಸದೆ ಅಲ್ಲೆ ಇರುವುದಾಗಿ ತಿಳಿಸಿದ ವಿದ್ಯಾರ್ಥಿಗಳಿಗೆ ಉಳಿಸಿಕೊಂಡು ವ್ಯವಸ್ಥೆ ಕಲ್ಪಿಸುವಂತೆ
ಭಾನುವಾರ ಆದೇಶ ಹೊರಡಿಸಿದ್ದಾರೆ.

ಬಸ್‌ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಪರದಾಟದ ಬಗ್ಗೆ ಮಾಹಿತಿ ತಿಳಿದು ನಿಲ್ದಾಣಕ್ಕೆ ಆಗಮಿಸಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಕ್ಕಳ ಸಮಸ್ಯೆ ನೋಡಲು ಖುದ್ದು ನಿಲ್ದಾಣಕ್ಕೆ ಭೇಟಿ ನೀಡಿರುವೆ. ಮಕ್ಕಳಿಗೆ ಸಮಸ್ಯೆಯಾಗಲು ಬಿಡಲ್ಲ. ಪ್ರತಿ ಮಕ್ಕಳನ್ನು ಮನೆಗೆ ಕಳುಹಿಸುವ ಜವಾಬ್ದಾರಿ ನನ್ನದಾಗಿದೆ. ಜಿಲ್ಲಾಡಳಿತದ ಆದೇಶದಿಂದ ಈ ಸಮಸ್ಯೆಯಾಗಿದೆ. ಮುಂಜಾಗ್ರತೆ ಕೈಗೊಳ್ಳಬೇಕಿತ್ತು ಎಂದು ಬಸ್‌ ವ್ಯವಸ್ಥೆ ಮಾಡಿ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಮ್ಮ ತಮ್ಮ ಊರುಳಿಗೆ ಸುರಕ್ಷಿತವಾಗಿ ಕಳುಹಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್‌ ಹೆಚ್ಚಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನಿವಾರ್ಯವಾಗಿ ವಸತಿ ನಿಲಯ ಬಂದ್‌ ಮಾಡೋದು ಸೇರಿ ಒಂದಷ್ಟು ನಿರ್ಬಂಧ ಹೇರಿದೆ. ಎಲ್ಲ ಮಕ್ಕಳನ್ನು ಅವರವರ ಊರುಗಳಿಗೆ ಕಳುಹಿಸುತ್ತೇನೆ. ಹೆಚ್ಚುವರಿ ಬಸ್‌ ಬಿಡಲು ಕೆಎಸ್ಸಾರ್ಟಿಸಿ ಡಿಸಿ ಜೊತೆ ಮಾತನಾಡಿದ್ದೇನೆ. ಎಲ್ಲ ಬಸ್‌ ಗಳಿಗೂ ಪಾಸ್‌ ಅನುಮತಿಸುವಂತೆ ಸೂಚನೆ ನೀಡಿದ್ದೇನೆ. ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ಮಾಡಿಸಬೇಕಿತ್ತು. ಆದರೆ ತ್ವರಿತ ಆದೇಶದಿಂದ ಒಂದಷ್ಟು ಗೊಂದಲ ಆಗಿದೆ ಎಂದರು.

ಟಾಪ್ ನ್ಯೂಸ್

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Mangaluru: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ

Mangaluru: ಅ.5; ಪೊಳಲಿಯಲ್ಲಿ “ಪೊಳಲಿ ಯಕ್ಷೋತ್ಸವ-2024′

Mangaluru: ಅ.5; ಪೊಳಲಿಯಲ್ಲಿ “ಪೊಳಲಿ ಯಕ್ಷೋತ್ಸವ-2024′

Fraud Case: ಡ್ರಗ್ಸ್‌ ಇದೆ ಎಂದು ಹೇಳಿ 39.30 ಲ.ರೂ. ವಂಚನೆ

Fraud Case: ಡ್ರಗ್ಸ್‌ ಇದೆ ಎಂದು ಹೇಳಿ 39.30 ಲ.ರೂ. ವಂಚನೆ

Ullal: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Ullal: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Wife-Letter

MUDA Case: 14 ನಿವೇಶನ ಹಿಂದಿರುಗಿಸುವುದಾಗಿ ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಪತ್ರ!

Aravind-Bellad

Dharwad: ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ: ಶಾಸಕ ಅರವಿಂದ ಬೆಲ್ಲದ್‌ ಭವಿಷ್ಯ

1-asas

Belagavi; ಮಹಾನಗರ ಪಾಲಿಕೆ ಸೂಪರ್ ಸೀಡ್ ಮಾಡುವಂತೆ ಬೃಹತ್ ಪ್ರತಿಭಟನೆ

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

robbers

UPSC ಕೋಚಿಂಗ್‌ಗಾಗಿ ಕಿಡ್ನಾಪ್‌: 10 ಲಕ್ಷ ರೂ.ಗೆ ಬೇಡಿಕೆ

1-IMA

IMA; ಜೀವ ರಕ್ಷಕ ತೆಗೆಯಲು ಒಪ್ಪಿಗೆ ಕಡ್ಡಾಯ: ಆಕ್ಷೇಪ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Madanthyar: ಉರುವಾಲು; ಸಿಡಿಲು ಬಡಿದು ಮನೆಗೆ ಹಾನಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Moodbidri: ಡಿ. 10 -15: ಆಳ್ವಾಸ್‌ ವಿರಾಸತ್‌-2024

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.