Subrahmanya: ಯುವಕನನ್ನು ಎಳೆದಾಡಿದ ದೇಗುಲದ ಆನೆ
Team Udayavani, Jun 26, 2024, 11:27 PM IST
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆಯು ಯುವಕನೊಬ್ಬನನ್ನು ಎಳೆದು ಹಾಕಿದ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಜೂ. 25ರಂದು ನಡೆದಿದೆ ಎನ್ನಲಾಗಿದೆ.
ಕುಕ್ಕೆಗೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲೆಂದು ಆನೆಯನ್ನು ಸವಾರಿ ಮಂಟಪದ ಸಮೀಪ ನಿಲ್ಲಿಸಲಾಗಿತ್ತು. ಇದೇ ವೇಳೆ ಅಲ್ಲಿನ ಲಾಡ್ಜ್ ಯೊಂದರ ರೂಂ ಬಾಯ್ ಆನೆಯ ಹತ್ತಿರ ಬಂದಿದ್ದು, ಆತ ಮದ್ಯ ಸೇವಿಸಿದ್ದ ಎನ್ನಲಾಗಿದೆ.
ಆತ ಆನೆಯ ಎದುರಿನಿಂದ ಸಾಗುವ ವೇಳೆ ಆನೆ ತನ್ನ ಸೊಂಡಿಲಿನಿಂದ ಆತನನ್ನು ಎಳೆದು ಹಾಕಿದ್ದು, ಆತ ನೆಲದ ಮೇಲೆ ಬಿದ್ದಿರುವುದು ವೀಡಿಯೋದಲ್ಲಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಮದ್ಯ ಸೇವಿಸಿದವರು ಹತ್ತಿರ ಬಂದರೆ ಆನೆ ಹೀಗೆ ಮಾಡುತ್ತಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Excise Policy Case: ಅರವಿಂದ್ ಕೇಜ್ರಿವಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್
Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ
Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..
Sandalwood; ಟ್ರೇಲರ್ನಲ್ಲಿ ‘ತಾಜ್’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ
Byndoor; ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.