Text Book ಪರಿಷ್ಕರಣೆ ಎಡಪಂಥೀಯ ‘ಕೈ’ ಗೊಂಬೆ: ಕಾಗೇರಿ


Team Udayavani, Jun 12, 2023, 3:04 PM IST

10-shirasi

ಶಿರಸಿ: ಪಠ್ಯ ಪುಸ್ತಕ‌ ಪರಿಷ್ಕರಣೆಗೆ ಮುಂದಾದ ಕಾಂಗ್ರೆಸ್ ಪಕ್ಷವು ಎಡಪಂಥೀಯ ‘ಕೈ’ ಗೊಂಬೆಯಾಗಿದೆ ಎಂದು‌ ಮಾಜಿ ಶಿಕ್ಷಣ ಸಚಿವ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಅವರು ಜೂ.12ರ ಸೋಮವಾರ‌ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ದೇಶದ ನೈಜ ಸ್ಥಿತಿ ತಿಳಿಸುವ ಸಂಗತಿ‌ ಪಠ್ಯ ಪುಸ್ತಕದಲ್ಲಿ ಇದೆ. ಆದರೆ ಈಗ ಸ್ವತಃ ಮುಖ್ಯಮಂತ್ರಿಗಳು ಎಡ ಪಂಥಿಯ ವಿಚಾರ ಧಾರೆಯ ಕೈಗೊಂಬೆ ಆಗಿದ್ದಾರೆ. ಅದರ ಪರಿಣಾಮ ಪಠ್ಯ ಪರಿಷ್ಕರಣೆಯ ಆತುರವಾಗಿದೆ ಎಂದರು‌.

ಶಿಕ್ಷಣದ ವಿಷಯದಲ್ಲಿ ಮಕ್ಕಳ, ಶಿಕ್ಷಕರ, ಪಾಲಕರ ನಡುವೆ ಆತಂಕ ಮಾಡಬಾರದು ಎಂದ ಅವರು, ಈಗ ಪುಸ್ತಕ ಪೂರ್ಣವಾಗಿ ಬಂದಿದೆ. ಗೊಂದಲ ಗೂಡು ಶಿಕ್ಷಣ ಇಲಾಖೆ ಮಾಡಬಾರದು. ಕೆಲವರು ಬರೆದಿದ್ದಾರೆ ಎಂಬ ಕಾರಣಕ್ಕೆ ತೆಗೆಯುತ್ತಿದ್ದಾರೆ ಎಂದೂ ಹೇಳಿದರು.

ಟಿಪ್ಪುವೇ ಚೆಂದ ಕಾಣುವವರಿಗೆ ಭಾರತೀಯ ಇತಿಹಾಸ ಹೇಗೆ ಚೆಂದ ಕಾಣುತ್ತಾನೆ? ಸರಕಾರದ ಈ ನಿಲುವು ಖಂಡಿಸುತ್ತೇನೆ ಎಂದರು.

ಇತಿಹಾಸಕ್ಕೆ ಹಲವು ದೃಷ್ಟಿಯಿದೆ. ಆದರೆ, ಇತಿಹಾಸವನ್ನು ಭಾರತೀಯರಾಗಿ ಭಾರತೀಯ ದೃಷ್ಟಿಕೋನದಿಂದ ಶಿಕ್ಷಣ ಕಲಿಸಬೇಕಾಗಿದೆ. ಮೊಘಲರ, ಅಲೆಕ್ಸಾಂಡರ ದೃಷ್ಟಿಕೋನದಲ್ಲಿ ‌ಕಲಿಸಬಾರದು. ಗುಲಾಮಿ ತನ ಮಾನಸಿಕತೆಯ ಶಿಕ್ಷಣಕ್ಕೆ ಖಂಡಿಸುತ್ತೇವೆ ಎಂದರು.

ಶಿಕ್ಷಣ ಪಠ್ಯದಲ್ಲಿ ಪೂರ್ವ ತಯಾರಿ ಇಲ್ಲದೇ ಬದಲಾವಣೆ ಸರಿಯಲ್ಲ. ಇದನ್ನು‌ ಕೈ ಬಿಡಬೇಕು. ತನ್ನ ತನದ  ಶಿಕ್ಷಣ‌ ಕೊಡಬೇಕು. ನಿಲ್ಲಿಸದೇ ಹೋದರೆ ಸರಜಾರದ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದರು.

ಪಠ್ಯವು ಬೇರೆ ಬೇರೆ ಹಂತದಲ್ಲಿ ಪರಿಷ್ಕರಣೆ ಆಗಬೇಕು. ಪ್ರಜಾಪ್ರಭುತ್ವದ ಆಶಯಕ್ಕೆ‌ ಇಂತಹ ನಿರ್ಣಯ ಸರಿಯಲ್ಲ. ಇವು ಕಾಂಗ್ರೆಸ್ ತಂತ್ರಗಾರಿಕೆಯಲ್ಲ, ಕುತಂತ್ರಗಾರಿಕೆಯಾಗಿದೆ ಎಂದೂ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ  ಹೊಸತಾಗಿ ಆಯ್ಕೆ ಆಗಿದೆ. ಬೆಳೆವ ಸಿರಿ‌ ಮೊಳಕೆಯಲ್ಲಿ ಎನ್ನುವ ಹಾಗೇ ಈ ಸರಕಾರದ ಪ್ರಾರಂಭಿಕ ದಿನಗಳು ರಾಜ್ಯದ‌ ಜನರ‌ ನಿರೀಕ್ಷೆ ಹುಸಿಗೊಳಿಸುತ್ತಿದೆ. ಸರಕಾರ ಗೊಂದಲದಲ್ಲಿದೆ. ಖಾತೆಯ ಬಗ್ಗೆ ಸಚಿವರು ತಿಳಿದುಕೊಳ್ಳುವ ಮೊದಲೇ ಗೊಂದಲದಲ್ಲಿ ಅವರೂ ಇದಾರೆ. ಗ್ಯಾರೆಂಟಿಗಳ ಗೊಂದಲದಲ್ಲಿ ಆಡಳಿತ ನಡೆಸುವದೇ ಆಗುತ್ತದಾ ಇಲ್ಲವಾ ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಕಾಂಗ್ರೆಸ್ ಒಳ್ಳೆ ಆಡಳಿತ ನೀಡದೇ ಇದ್ದಾಗ ವಿವಾದ, ಗೊಂದಲ‌, ಸಮಸ್ಯೆ ಸೃಷ್ಟಿ ಮಾಡಿ ಗೊಂದಲ ಮಾಡುವದೇ ಕೆಲಸವಾಗಿದೆ. ಕಾಂಗ್ರೆಸ್ ಹಿಂದಿನ‌ ನಿಲುವು ಮತ್ತೆ ಶುರು ಮಾಡಿದೆ ಎಂದರು.

ದ್ವೇಷ ರಾಜಕಾರಣದ‌ ಮನಸ್ಥಿತಿ ಮಾಡುತ್ತಿದೆ. ರಾಜ್ಯದ ಹಲವಡೆ‌ ಮಾಡುತ್ತಿದೆ. ದ್ವೇಷ ರಾಜಕಾರಣದಿಂದ ಸಂದೇಶ ಸಿಎಂ, ಡಿಸಿಎಂ ಅವರಿಂದಲೇ ಪಸರಿಸುತ್ತಿದೆ. ಇದು ಆತಂಕಕಾರಿ, ಅಪಾಯಕಾರಿ ವ್ಯವಸ್ಥೆ ಆಗಿದೆ ಎಂದರು.

ಹಿಂದಿನ ಬಿಜೆಪಿ ಸರಕಾರದಿಂದ ಮಂಜೂರಾದ ಅಭಿವೃದ್ದಿ ಗೆ ತಡೆ ಮಾಡಿದೆ. ಇದು ಅಭಿವೃದ್ದಿಗೆ ವಿರೋಧ ಎಂಬಂತೆ ಆಗಿದೆ ಎಂದ ಅವರು, ಬಿಜೆಪಿ ಮಂಜೂರಾದ ಕಾಮಗಾರಿ ಮುಂದುವರಿಸಬೇಕು. ಅಭಿವೃದ್ದಿಗೆ ಯಾವ ಸರಕಾರ ತಡೆ ಮಾಡಬಾರದು.

ಖಾತೆ ಸಮಯ ಆಗದೇ ಗೊಂದಲದಲ್ಲಿ ಇದೆ. ಇಲಾಖೆ ಜವಬ್ದಾರಿ ಕಾರ್ಯ ಮಾಡಬೇಕು ಎಂದರು.

ಈ ವೇಳೆ ರಾಜೇಶ ಶೆಟ್ಟಿ, ಉಷಾ ಹೆಗಡೆ, ನರಸಿಂಹ ಬಕ್ಕಳ, ಗುರುರಾಜ ಶಾಭಬಾಗ, ಮಾರುತಿ ನಾಯ್ಕ ಇದ್ದರು.

ಗ್ಯಾರೆಂಟಿ ಗೊಂದಲ‌ ಇದೆ. ಚುನಾವಣೆ ಪೂರ್ವ ಹೇಳಿದ್ದು ಕಾಂಗ್ರೆಸ್ ಮಾಡಬೇಕು. ಈಗ ಏನ್ ಮಾಡಿದರೂ ನಡೆಯುತ್ತದೆ ಎಂದು ಕಾಂಗ್ರೆಸ್ ನಡೆದರೆ ಅದು ಜನತೆಗೆ ಮಾಡುವ ಮೋಸ. – ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸ್ಪೀಕರ್

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqewq

Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ

Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ

Heavy Rain ಯಲ್ಲಾಪುರ: ಬಾಗಿನಕಟ್ಟಾ ಬಳಿ ಭೂಕುಸಿತ; ಸಂಚಾರ ಸ್ಥಗಿತ

11-honnavara

Honnavara: ಭಾರೀ ಮಳೆ; ಹಲವು ಮನೆಗಳಿಗೆ ನೆರೆ ನೀರು

Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ

Kumata: ಭಾರಿ ಮಳೆಗೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆ… ನೆರೆ ಭೀತಿ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.