Mangaluru: ಬಸ್ ತಂಗುದಾಣಗಳ ಅವ್ಯವಸ್ಥೆ: ಸಾರ್ವಜನಿಕರಿಗೆ ನಿತ್ಯ ಸಂಕಷ್ಟ
ಬಿಜೈ ಬಸ್ ನಿಲಾಣದೊಳಗೆ ನುಗ್ಗುತ್ತಿದೆ ಮಳೆ ನೀರು
Team Udayavani, Jul 29, 2024, 3:31 PM IST
ಮಹಾನಗರ: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಅನೇಕ ಪ್ರಯಾಣಿಕ ತಂಗುದಾಣಗಳು ಅವ್ಯವಸ್ಥೆಯಿಂದ ಕೂಡಿವೆ. ಪ್ರಯಾಣಿಕರು ಮಳೆ, ಬಿಸಿಲಿಗೆ ಸಂಕಷ್ಟ ಎದುರಿಸುವಂತಾಗಿದೆ.
ನಗರದ ಲಾಲ್ಬಾಗ್ನಿಂದ ಬಿಜೈ ತೆರಳುವ ರಸ್ತೆಯ ಭಾರತ್ಮಾಲ್ ಬಳಿಯ ತಂಗುದಾಣವೊಂದು ಅವ್ಯವಸ್ಥೆಯಿಂದ ಕೂಡಿದೆ. ಮಳೆ ಬರುವ ವೇಳೆ ಆಶ್ರಯ ಪಡೆಯಲು ಬರುವವರು ಸಂಪೂರ್ಣ ಒದ್ದೆಯಾಗುವ ಸನ್ನಿವೇಶ ಇಲ್ಲಿದೆ. ಅಸಮರ್ಪಕವಾಗಿ ತಂಗುದಾಣ ನಿರ್ಮಿಸಿದ್ದು, ಮಳೆ ಸುರಿಯುವ ವೇಳೆ ತಂಗುದಾಣದೊಳಗೆ ನೀರು ನುಗ್ಗುತ್ತಿದೆ.
ಮಳೆಯಾಗುವ ವೇಳೆ ಮುಂಭಾಗದಿಂದಲೂ ನೀರು ತಂಗುದಾಣದೊಳಗೆ ಬೀಳುವುದು ಸಾಮಾನ್ಯ. ತಂಗುದಾಣದ ಹಿಂಭಾಗದಲ್ಲಿರುವ ಗೋಡೆಯಿಂದ ತಂಗುದಾಣದೊಳಗೆ ನೀರು ಬೀಳುತ್ತಿದೆ. ಇದರಿಂದ ತಂಗುದಾಣ ಪ್ರಯಾಣಿಕರಿಗೆ ಬಳಕೆಗೆ ಇಲ್ಲದಂತಾಗಿದೆ. ಗೋಡೆಯಿಂದ ಬೀಳುವ ನೀರಿಗೆ ಪೈಪ್ಗಳನ್ನು ಅಳವಡಿಸಬೇಕು ಅಥವಾ ನಿಲ್ದಾಣದ ಹಿಂಭಾಗಕ್ಕೆ ತಡೆಯನ್ನು ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಲವು ನಿಲ್ದಾಣಗಳಿಗೆ ನುಗ್ಗುತ್ತಿದೆ ಮಳೆ ನೀರು
ನಗರದ ಅನೇಕ ತಂಗುದಾಣದೊಳಗೆ ನೀರು ನುಗ್ಗುತ್ತಿದ್ದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಬಜಾಲ್ ಸಮೀಪ ಜಿ.ಎಂ. ರೋಡ್ನಲ್ಲೂ ಇಂತಹದೇ ಪರಿಸ್ಥಿತಿ ಇದೆ. ಪ್ರಯಾಣಿಕ ತಂಗುದಾಣದೊಳಗೆ ಪ್ರಯಾಣಿಕರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಮಳೆ ನೀರು ಸಂಪೂರ್ಣ ತಂಗುದಾಣದ ಒಳಗೆ ಬಿಳುತ್ತಿದೆ ಎಂಬುವುದು ಸಾರ್ವಜನಿಕರ ಆರೋಪ. ಇಂತಹ ಅನೇಕ ನಿಲ್ದಾಣಗಳಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ದುರಸ್ತಿಗೆ ಕ್ರಮಕೈಗೊಳ್ಳಿ
ಭಾರೀ ಗಾಳಿ, ಮಳೆ ಬಂದ ವೇಳೆ ರಕ್ಷಣೆ ಪಡೆಯಲು ಬಸ್ ನಿಲ್ದಾಣಕ್ಕೆ ದೌಡಾಯಿಸಿದೆ. ಆದರೆ ಅಲ್ಲಿ ನೀರು ಬೀಳದ ಜಾಗವೇ ಇರಲಿಲ್ಲ. ಸ್ವಲ್ಪ ಗಾಳಿ ಬಂದಾಗ ಎಲ್ಲ ಕಡೆಗಳಿಂದ ನೀರು ಬೀಸಿ ಒದ್ದೆಯಾದೆವು. ಪಾಲಿಕೆ ಇಂತಹ ನಿಲ್ದಾಣಗಳನ್ನು ಸರಿಪಡಿಸಬೇಕು.
-ಸೌಮ್ಯಾ ಕೆ.,ನಿತ್ಯ ಪ್ರಯಾಣಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.