ಅರಸೊತ್ತಿಗೆ ಕಾಲದ ಕೆರೆಗೆೆ ಕಾಯಕಲ್ಪದ ನಿರೀಕ್ಷೆ : ಅಭಿವೃದ್ಧಿಗೆ 3 ಕೋ.ರೂ.

ಸೊರಗಿದೆ ಕೆರೆ, ಅಭಿವೃದ್ಧಿಗೆ 3 ಕೋ.ರೂ. ವೆಚ್ಚದ ನೀಲ ನಕಾಶೆ ಸಿದ್ಧ

Team Udayavani, Mar 16, 2021, 6:30 AM IST

ಅರಸೊತ್ತಿಗೆ ಕಾಲದ ಕೆರೆಗೆೆ ಕಾಯಕಲ್ಪದ ನಿರೀಕ್ಷೆ

ಕಾರ್ಕಳ : ಅರಸೊತ್ತಿಗೆ ಕಾಲದಿಂದಲೂ ನೈಸರ್ಗಿಕ ಸೌಂದರ್ಯ ವೃದ್ಧಿಸಿರುವ ನಲ್ಲೂರು ನೆಲ್ಲಿಕಾರು ಹರಿಯಪ್ಪನ ಕೆರೆ ಅಭಿವೃದ್ಧಿಯ ನಿರೀಕ್ಷೆಯನ್ನು ಈ ಹೊತ್ತಿನಲ್ಲಿ ಹೆಚ್ಚಿಸಿದೆ. ಇದಕ್ಕೆ ಕಾರಣ ಈ ಕೆರೆಯನ್ನು ಪ್ರವಾಸಿ ತಾಣವಾಗಿಸುವ ಪ್ರಯತ್ನ ಗರಿಗೆದರಿದ್ದು, ಕೆರೆ ಅಭಿವೃದ್ಧಿ ನಿರೀಕ್ಷೆ ಹೆಚ್ಚಾಗಿದೆ.

ತಾಲೂಕಿನ ಪ್ರಸಿದ್ಧ ಕೆರೆಗಳ ಪೈಕಿ ಈ ಕೆರೆಯೂ ಒಂದು. ಒಂದು ಕಾಲಕ್ಕೆ ಕೆರೆಯ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿಗೆ ನೀರುಣಿಸುವ ಪ್ರಮುಖ ಕೆರೆ ಇದಾಗಿತ್ತು. ನಲ್ಲೂರು ಗ್ರಾಮದ 100ಕ್ಕೂ ಅಧಿಕ ಕುಟುಂಬಗಳ ಕೃಷಿ ಕಾರ್ಯಕ್ಕೆ ಹರಿಯಪ್ಪನ ಕೆರೆಯೇ ಮೂಲಾಧಾರವಾಗಿತ್ತು. ಪ್ರಾಣಿ- ಪಕ್ಷಿ ಮೊದಲಾದವುಗಳಿಗೆ ಈ ಕೆರೆಯ ನೀರು ಸಂಜೀವಿನಿಯಾಗಿತ್ತು. ಅನಂತರದ ದಿನಗಳಲ್ಲಿ ಕೆರೆ ನಿರ್ವಹಣೆ ಕೊರತೆ ಎದುರಿಸುತ್ತ ಬಂದಿದೆ. ಪ್ರಸ್ತುತ ಈಗ ಕೆರೆ ನಿರ್ವಹಣೆಯಿಲ್ಲದೆ ಸಂಪೂರ್ಣ ಸೊರಗಿ ಹೋಗಿದೆ.
ಕಾರ್ಕಳದಿಂದ ಧರ್ಮಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಬಜಗೋಳಿಯಿಂದ ಮುಂದಕ್ಕೆ ಪಾಜೆಗುಡ್ಡೆ ಎಂಬಲ್ಲಿ ವಿಶಾಲ ಪ್ರದೇಶದಲ್ಲಿದೆ ಹರಿಯಪ್ಪ ಕೆರೆ. ಮುಖ್ಯ ರಸ್ತೆ ಬದಿಯಲ್ಲೆ ಕೆರೆಯಿದೆ. ಕೆರೆಯು ಕಾರ್ಕಳ ಪೇಟೆಯಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ರಾಜ್ಯ ಹೆದ್ದಾರಿ 37ರಲ್ಲಿ ಸುಮಾರು 5.48 ಎಕರೆ ಪ್ರದೇಶದಲ್ಲಿ ಮೀಸಲು ಅರಣ್ಯದಲ್ಲಿ ಈ ಕೆರೆಯಿದೆ. ಯಥೇತ್ಛವಾಗಿ ನೀರು ಸಂಗ್ರಹವಾಗುವ ಈ ಕೆರೆಯಲ್ಲಿ ಹೂಳು ತುಂಬಿ ಒರತೆ ಪ್ರಮಾಣ ಈಗ ಕಡಿಮೆಯಾಗಿದೆ.

ಕಡಿದಾದ ಪ್ರದೇಶದ ತಿರುವಿನಲ್ಲಿರುವ ಈ ಕೆರೆಯನ್ನು 2011ರಲ್ಲಿ ಹೂಳು ತೆಗೆದು ದುರಸ್ತಿ ಮಾಡಲಾಗಿತ್ತು. ಬಳಿಕ ಕೆರೆ ಅಭಿವೃದ್ಧಿಪಡಿಸಿಲ್ಲ. ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ಹೆದ್ದಾರಿ ಬದಿಯಲ್ಲಿ ಇರುವುದರಿಂದ ಪ್ರವಾಸಿ ತಾಣವಾಗಿಸಬೇಕು ಎನ್ನುವ ಬೇಡಿಕೆ ಹಿಂದಿನಿಂದಲೂ ಇತ್ತು. ಆದರೆ ಬೇಡಿಕೆಗಳಿಗೆ ಮನ್ನಣೆಯೇ ದೊರೆತಿರಲಿಲ್ಲ. ಕೆರೆ ಅಭಿವೃದ್ಧಿಗೊಂಡು ಪ್ರವಾಸಿ ಕೇಂದ್ರವಾಗಿ ಮಾರ್ಪಾಡು ಮಾಡಿದಲ್ಲಿ ಹರಿಯಪ್ಪ ಕೆರೆ ಪ್ರವಾಸಿಗರನ್ನು ತನ್ನ ಕಡೆ ಸೆಳೆಯಲಿದೆ. ಇದರಿಂದ ಪ್ರವಾಸಿಗರಿಗೂ ಸ್ಥಳೀಯರಿಗೂ ಅನುಕೂಲವಾಗಲಿದೆ.

ಕೆರೆ ಸುತ್ತ ಬೇಲಿ ಅಳವಡಿಕೆ, ಕೆರೆಯ ಹೂಳು ತೆಗೆಯುವುದು, ಹೂದೋಟ, ಸುಂದರ ಪ್ರವೇಶ ದ್ವಾರ ನಿರ್ಮಿಸುವ ಯೋಜನೆಯಲ್ಲಿ ಇದೆ. 2.5 ಕಿ.ಮೀ. ದೂರ ಪ್ರಕೃತಿ ಮಡಿಲಲ್ಲಿ ನಡಿಗೆಗೆ ಅವಕಾಶ ಕಲ್ಪಿಸುವ ಯೋಜನೆಯೂ ಪ್ಲ್ರಾನ್‌ನಲ್ಲಿ ಸೇರಿದೆ.

600 ಮೀ. ವಾಕಿಂಗ್‌ ಪಾಥ್‌, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಪ್ಯಾರಾಗೋಲಾ, ಮಕ್ಕಳಿಗೆ ಆಟದ ಮೈದಾನ, 3 ಆರ್ಟ್‌ ಬ್ರಿಡ್ಜ್, ಮಾಹಿತಿ ಕೇಂದ್ರ, ನೀರಿನ ಸೌಲಭ್ಯ, ಮಕ್ಕಳಿಗಾಗಿ ಆ್ಯಂಪಿ ಥಿಯೇಟರ್‌, ಕ್ಯಾಂಟಿನ್‌, ಭದ್ರತಾ ಶೆಡ್‌, ವೀಕ್ಷಣೆ ಗೋಪುರ, ವಾಹನ ಪಾರ್ಕಿಂಗ್‌ ವ್ಯವಸ್ಥೆ, ಬೋಟಿಂಗ್‌ ಹಾಗೂ ಜಿಮ್‌ ಸಲಕರಣೆ ಅಳವಡಿಸುವ ಕಾರ್ಯವೂ ಯೋಜನೆಯಲ್ಲಿ ಸೇರಿದೆ. ಉದ್ಯಾನದಲ್ಲಿ ಔಷಧ ಗಿಡ ಬೆಳೆಸುವ ಮೂಲಕ ಔಷಧ ವನ ಯೋಜನೆಯೂ ಅರಣ್ಯ ಇಲಾಖೆ ಮುಂದಿದೆ. ಕೆರೆಯ ಹೂಳು ತೆಗೆಯುವ ಮೂಲಕ ಕೆರೆಗೆ ಕಾಯಕಲ್ಪ ನೀಡುವುದು ಮತ್ತು ಈ ಪರಿಸರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕೆನ್ನುವ ಸ್ಥಳಿಯರ ಬೇಡಿಕೆಗೆ ಅನುಗುಣವಾಗಿ ಶಾಸಕರು ಕೂಡ ಅವರ ವಿಶೇಷ ಮುತುವರ್ಜಿ ವಹಿಸಿದ್ದು, ಹರಿಯಪ್ಪನ ಕೆರೆ ಅಭಿವೃದ್ಧಿ ನಿರೀಕ್ಷೆ ಮತ್ತಷ್ಟೂ ಹೆಚ್ಚಿಸಿದೆ. ಅರಣ್ಯ ಇಲಾಖೆ ಮೂಲಕ ಹರಿಯಪ್ಪನ ಕೆರೆ ಅಭಿವೃದ್ಧಿಯಾದಲ್ಲಿ ಕೆರೆ ನೀರು ಒದಗಿಸುವುದರ ಜತೆಗೆ ಕೆರೆಯಿರುವ ಪರಿಸರ ಸುಂದರ ಪ್ರವಾಸಿ ತಾಣವಾಗಿ ಪ್ರಾಕೃತಿಕ ಪ್ರಿಯರ, ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಲಿದೆ.

5 ವರ್ಷಗಳ ಯೋಜನೆ
ಕೆರೆ ಅಭಿವೃದ್ಧಿಗೆ ಡಿಪಿಆರ್‌ ಸರಕಾರಕ್ಕೆ ಸಲ್ಲಿಸಲ್ಪಟ್ಟಿದೆ. ಮಂಜೂರಾತಿ ಆಗುವ ಹಂತದಲ್ಲಿದೆ. ಈಗಾಗಲೇ ಪ್ರಥಮ ಹಂತದಲ್ಲಿ 40 ಲಕ್ಷ ರೂ. ಮಂಜೂರುಗೊಂಡಿದೆ.
5 ವರ್ಷಗಳ ಯೋಜನೆ ಇದಾಗಿದೆ.
-ಪ್ರಕಾಶ್‌ ಆರ್‌ಎಫ್ಒ, ಅರಣ್ಯ ಇಲಾಖೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.