Politics: ವಿಪಕ್ಷ ವಿರುದ್ಧ ಗಣಿ ಅಸ್ತ್ರ- ಹಳೆ ಪ್ರಕರಣ ಕೆದಕಲು ಮುಂದಾದ ಸರಕಾರ 

ಎಸ್‌ಐಟಿ ಅವಧಿ ವಿಸ್ತರಣೆಗೆ  ಸಂಪುಟ ನಿರ್ಧಾರ

Team Udayavani, Nov 17, 2023, 12:36 AM IST

Mining

ಬೆಂಗಳೂರು: ವಿಪಕ್ಷಗಳ ವಿರುದ್ಧ ಗಣಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ರಾಜ್ಯ ಸರಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲಾಗಿದ್ದು, ಎಸ್‌ಐಟಿ ನಡೆಸುವ ಮುಂದಿನ ತನಿಖಾ ಪ್ರಗತಿಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಕಾಲಕಾಲಕ್ಕೆ ಪರಿಶೀಲಿಸಲಿದ್ದಾರೆ.

ಎಸ್‌ಐಟಿ ತನಿಖೆಯಲ್ಲಿ ಬಾಕಿ ಉಳಿದಿರುವ 10 ಕ್ರಿಮಿನಲ್‌ ಪ್ರಕರಣ

ಗಳ ತನಿಖೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಸ್‌ಐಟಿ ರಚನೆಯಾಗಿತ್ತು. ಐಜಿಪಿ ಚರಣ್‌ ರೆಡ್ಡಿ ನೇತೃತ್ವದ ಎಸ್‌ಐಟಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಿತ ಘಟಾನುಘಟಿಗಳನ್ನು ವಿಚಾರಣೆ ನಡೆಸಿತ್ತು. ಆಗ ಈ ವಿಚಾರ ಭಾರೀ ವಿವಾದವನ್ನೂ ಸೃಷ್ಟಿಸಿತ್ತು. ಈಗ ಸರಕಾರ ಹಳೆ ಪ್ರಕರಣಗಳನ್ನು ಮತ್ತೆ ಕೆದಕಲು ಮುಂದಾಗಿದ್ದು, ವಿಪಕ್ಷಗಳನ್ನು ಗಣಿ ತನಿಖೆಯ ಜಾಲದಲ್ಲಿ ಸಿಲುಕಿಸಲು ಮುಂದಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಅವರು ಎಸ್‌ಐಟಿ ಅವಧಿಯನ್ನು 2024ರ ಜೂ. 30ರ ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

ತನಿಖೆಯ ವ್ಯಾಪ್ತಿ ಏನು?

 ಎಸ್‌ಐಟಿ ತನಿಖೆ  ಬಾಕಿ ಇರುವ 10 ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ.

 ನವ ಮಂಗಳೂರು, ಕಾರವಾರ, ಮರ್ಮಗೋವಾ, ಪಣಜಿ, ಚೆನ್ನೈ ಬಂದರುಗಳಿಗೆ ಸಂಬಂಧಪಟ್ಟ 172 ಪ್ರಕರಣಗಳು ಪ್ರಾಥಮಿಕ ತನಿಖೆಗೆ ಬಾಕಿ ಇದ್ದು, ಅವುಗಳ ಪರಿಶೀಲನೆ.

 ರಾಜ್ಯ ಸರಕಾರ ರಚಿಸಿರುವ ಅದಿರು ಮೌಲ್ಯಮಾಪನ ವರದಿಗಳು ಬಾಕಿ ಇದ್ದು, ಇವುಗಳ ಬಗ್ಗೆ ಪೂರಕ ದೋಷಾರೋಪ ಪಟ್ಟಿ

 ನ್ಯಾಯಾಲಯಗಳಲ್ಲಿ  ಇರುವ 59 ಪ್ರಕರಣಗಳ ಶೀಘ್ರ ವಿಲೇವಾರಿ.

 50 ಸಾವಿರ ಮೆಟ್ರಿಕ್‌ ಟನ್‌ಗೆ ಮೇಲ್ಪಟ್ಟು ಅಕ್ರಮ ನಡೆದ ಪ್ರಕರಣಗಳು ಸಿಬಿಐಗೆ ಒಪ್ಪಿಸಲಾಗಿದ್ದು, ಅವುಗಳ ತನಿಖಾ ಪ್ರಗತಿ ಪರಿಶೀಲನೆ.

ಉದಯವಾಣಿ ವರದಿ

ರಾಯಧನ ನಿಗದಿ ಹಾಗೂ ಅದಿರು ಮೌಲ್ಯಮಾಪನದಲ್ಲಿ ನಡೆದ ಕಳ್ಳಾಟಕ್ಕೆ ರಾಜ್ಯ ಸರಕಾರ ಮರುಜೀವ ನೀಡುವ ಸಾಧ್ಯತೆ ಬಗ್ಗೆ ನ. 14ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾಗುವುದಕ್ಕೆ ಮುನ್ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಯ ಮುಂದೆ ಇದಕ್ಕೆ ಸಂಬಂಧಪಟ್ಟ ಕಡತ ಸಲ್ಲಿಕೆಯಾಗಿತ್ತು. ಪಿಎಸಿ 2014-15ರ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ಗಮನ ಹರಿಸುತ್ತಿದ್ದಂತೆ ಸರಕಾರ ಒಟ್ಟಾರೆಯಾಗಿ ಗಣಿ ಹಗರಣದ ತನಿಖೆಯನ್ನು ಪರಿಶೀಲಿಸಲು ಮುಂದಾಗಿದೆ.

ಐದು ವರ್ಷಗಳಲ್ಲಿ ಈ ಎಲ್ಲ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮುಂದಿನ ಎಂಟು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ತನಿಖಾ ಪ್ರಗತಿ ಸಾಧಿಸುವುದು ಇದರ ಉದ್ದೇಶ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಸಂಬಂಧಪಟ್ಟ ಪ್ರಕರಣ ವಿಚಾರಣೆಗೆ ಬಾಕಿ ಇದ್ದರೆ ಅದನ್ನೂ ನಾವು ಪರಿಶೀಲಿಸುತ್ತೇವೆ.

-ಎಚ್‌.ಕೆ. ಪಾಟೀಲ್‌,  ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ

ಟಾಪ್ ನ್ಯೂಸ್

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

supreem

Supreme Court; ಕೈಗಾರಿಕ ಮದ್ಯಸಾರಕ್ಕೆ ತೆರಿಗೆ ವಿಧಿಸಲು ರಾಜ್ಯಕ್ಕೆ ಅಧಿಕಾರ ಇದೆ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Byndoor: ಹೊಳೆಗೆ ಬಿದ್ದ ಬೈಕ್‌, ಸವಾರ ಪಾರು

Byndoor: ಹೊಳೆಗೆ ಬಿದ್ದ ಬೈಕ್‌, ಸವಾರ ಪಾರು

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

Kemmannu: ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅ. 27: “ಶತಾಭಿವಂದನಂ’ ಕೊಡುಗೆ ಅನಾವರಣ

Sullia: ಸುಟ್ಟ ಗಾಯ: ಮಹಿಳೆ ಸಾವು: ಪತಿಯ ಅಣ್ಣನೇ ಬೆಂಕಿ ಹಚ್ಚಿದ್ದ ಪ್ರಕರಣ

Sullia: ಸುಟ್ಟ ಗಾಯ: ಮಹಿಳೆ ಸಾವು: ಪತಿಯ ಅಣ್ಣನೇ ಬೆಂಕಿ ಹಚ್ಚಿದ್ದ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

congress

Maharashtra Election; ಕಾಂಗ್ರೆಸ್‌ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

jio

‘JioHotstar’ ಡೊಮೈನ್‌ಗೆ 1 ಕೋಟಿ ಕೊಡಿ: ಟೆಕಿ ಆಫ‌ರ್‌

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

1-sebi

SEBI ಮುಖ್ಯಸ್ಥೆ ಗೈರು: ಸಮಿತಿ ಸಭೆ ಮುಂದೂಡಿದ ಕ್ರಮಕ್ಕೆ ಬಿಜೆಪಿ ಆಕ್ರೋಶ

supreem

Supreme Court; ಕೈಗಾರಿಕ ಮದ್ಯಸಾರಕ್ಕೆ ತೆರಿಗೆ ವಿಧಿಸಲು ರಾಜ್ಯಕ್ಕೆ ಅಧಿಕಾರ ಇದೆ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kaup: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.