Aus V/s WI: 86 ರನ್ನಿಗೆ ಉದುರಿದ ವಿಂಡೀಸ್- 31 ಓವರ್ಗಳಲ್ಲಿ ಮುಗಿದ ಏಕದಿನ!
ಆಸ್ಟ್ರೇಲಿಯ: ಮ್ಯಾಚ್ ನಂ. 1000 - 6.5 ಓವರ್ಗಳಲ್ಲಿ ಚೇಸಿಂಗ್!
Team Udayavani, Feb 6, 2024, 10:48 PM IST
ಕ್ಯಾನ್ಬೆರಾ (ಆಸ್ಟ್ರೇಲಿಯ): ಏಕದಿನ ಇತಿಹಾಸದ ಸಣ್ಣ ಪಂದ್ಯವೊಂದಕ್ಕೆ ಆಸ್ಟ್ರೇಲಿಯ-ವೆಸ್ಟ್ ಇಂಡೀಸ್ ನಡುವಿನ ಮಂಗಳವಾರದ 3ನೇ ಮುಖಾಮುಖೀ ಸಾಕ್ಷಿಯಾಗಿದೆ. 100 ಓವರ್ಗಳ ತನಕ ಸಾಗಬೇಕಿದ್ದ ಈ ಪಂದ್ಯ ಕೇವಲ 31 ಓವರ್ಗಳಲ್ಲಿ ಮುಗಿದಿದೆ. ಇದು ಆಸ್ಟ್ರೇಲಿಯದಲ್ಲಿ ನಡೆದ ಅತೀ ಸಣ್ಣ ಏಕದಿನ ಮುಖಾಮುಖೀ ಎಂಬುದು ವಿಶೇಷ. ಆಸೀಸ್ 8 ವಿಕೆಟ್ಗಳಿಂದ ಗೆದ್ದು ಸರಣಿಯನ್ನು 3-0 ಕ್ಲೀನ್ಸ್ವೀಪ್ ಆಗಿ ವಶಪಡಿಸಿಕೊಂಡಿತು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಭಾರೀ ಕುಸಿತಕ್ಕೆ ಸಿಲುಕಿ 24.1 ಓವರ್ಗಳಲ್ಲಿ ಕೇವಲ 86 ರನ್ನಿಗೆ ಆಲೌಟ್ ಆಯಿತು. ಇದು ಏಕದಿನದಲ್ಲಿ ವಿಂಡೀಸಿನ 5ನೇ ಕನಿಷ್ಠ ಸ್ಕೋರ್. ಜವಾಬಿತ್ತ ಆಸ್ಟ್ರೇಲಿಯ ಬರೀ 6.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 87 ರನ್ ಮಾಡಿ ಜಯಭೇರಿ ಮೊಳಗಿಸಿತು. ಆಗಿನ್ನೂ 43.1 ಓವರ್ಗಳ ಆಟ ಬಾಕಿ ಇತ್ತು.
ಈ ಪಂದ್ಯ ಟಿ20 ಪಂದ್ಯದ ಅವಧಿ ಗಿಂತಲೂ ಬೇಗ ಮುಗಿದು ಹೋಯಿತು. ಇನ್ನಿಂಗ್ಸ್ ಬ್ರೇಕ್ ಸೇರಿದಂತೆ ಕೇವಲ 3 ಗಂಟೆಗಳಲ್ಲಿ ಸಮಾಪ್ತಿಯಾಯಿತು.
ಆಸ್ಟ್ರೇಲಿಯದಲ್ಲಿ ನಡೆದ ಇದಕ್ಕೂ ಹಿಂದಿನ ಸಣ್ಣ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಒಳಗೊಂಡಿತ್ತು. ಅದು ಪರ್ತ್ ನಲ್ಲಿ ನಡೆದ 2013ರ ಪಂದ್ಯವಾಗಿತ್ತು. 33.1 ಓವರ್ಗಳಲ್ಲಿ ಇದು ಮುಗಿದಿತ್ತು. ಗೇಲ್, ಪೊಲಾರ್ಡ್, ಬ್ರಾವೊ ಬ್ರದರ್ ಮೊದಲಾದ ಘಟಾನುಘಟಿ ಆಟಗಾರರನ್ನು ಹೊಂದಿದ್ದ ಅಂದಿನ ವಿಂಡೀಸ್ ತಂಡ 23.5 ಓವರ್ಗಳಲ್ಲಿ ಬರೀ 70 ರನ್ನಿಗೆ ಕುಸಿದಿತ್ತು. ಆಸ್ಟ್ರೇಲಿಯ 9.2 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತ್ತು.
ಬಾರ್ಟ್ಲೆಟ್ ದಾಳಿ
ಎಡಗೈ ವೇಗಿ ಕ್ಸೇವಿಯರ್ ಬಾರ್ಟ್ಲೆಟ್ 21 ರನ್ನಿಗೆ 4 ವಿಕೆಟ್ ಉರುಳಿಸಿ ಕೆರಿಬಿಯನ್ನರಿಗೆ ಆಘಾತವಿಕ್ಕಿದರು. ಲ್ಯಾನ್ಸ್ ಮಾರಿಸ್ ಮತ್ತು ಆ್ಯಡಂ ಝಂಪ ತಲಾ 2 ವಿಕೆಟ್ ಉರುಳಿಸಿದರು.
32 ರನ್ ಮಾಡಿದ ಆರಂಭಕಾರ ಅಲಿಕ್ ಅಥನಾಝ್ ಅವರದೇ ವಿಂಡೀಸ್ ಸರದಿಯ ಗರಿಷ್ಠ ಗಳಿಕೆ. ಆಸೀಸ್ ಪರ ನೂತನ ಆರಂಭಕಾರ ಜೇಕ್ ಫ್ರೆàಸರ್ ಮೆಕ್ಗರ್ಕ್ 18 ಎಸೆತಗಳಿಂದ 41 ರನ್ (5 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಜೋಶ್ ಇಂಗ್ಲಿಸ್ 35 ರನ್ ಮಾಡಿ ಔಟಾಗದೆ ಉಳಿದರು (16 ಎಸೆತ, 4 ಬೌಂಡರಿ, 1 ಸಿಕ್ಸರ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ರಾಹುಲ್, ಕುಲದೀಪ್, ಸಿರಾಜ್ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ
INDvsNZ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ದಾಖಲೆ ಬರೆದ ರವಿ ಅಶ್ವಿನ್
ಇಂದಿನಿಂದ ಪುಣೆ ಟೆಸ್ಟ್ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್ ಇಂಡಿಯಾ
ICC Test Batting Ranking: ಕೊಹ್ಲಿಯನ್ನು ಹಿಂದಿಕ್ಕಿದ ಪಂತ್
ಭಾರತ-ನ್ಯೂಜಿಲ್ಯಾಂಡ್ ವನಿತಾ ಕ್ರಿಕೆಟ್… ವಿಶ್ವಕಪ್ ಅಭ್ಯಾಸಕ್ಕೆ ಮಹತ್ವದ ಸರಣಿ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ʼಬಿಗ್ಬಾಸ್ʼ ಕಾರ್ಯಕ್ರಮದ ವಾಹಿನಿಗೆ ಬಂದ ಲಾಯರ್ ಜಗದೀಶ್; ವೀಕ್ಷಕರು ಖುಷ್
Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!
INDvsNZ: ರಾಹುಲ್, ಕುಲದೀಪ್, ಸಿರಾಜ್ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ
Muddebihal: ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು
Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.