IAF: 2016ರಲ್ಲಿ ನಾಪತ್ತೆಯಾದ ಐಎಎಫ್ ವಿಮಾನದ ಅವಶೇಷ ಈಗ ಪತ್ತೆ
ಬಂಗಾಳಕೊಲ್ಲಿಯಲ್ಲಿ ಏಳೂವರೆ ವರ್ಷದ ಬಳಿಕ ನಡೆದ ಶೋಧ ಯಶಸ್ವಿ
Team Udayavani, Jan 12, 2024, 10:36 PM IST
ನವದೆಹಲಿ: ಏಳೂವರೆ ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ 29 ಸಿಬ್ಬಂದಿ ಸಮೇತವಾಗಿ ನಾಪತ್ತೆಯಾಗಿದ್ದ ಸಾರಿಗೆ ವಿಮಾನದ ಅವಶೇಷವೂ ಇದೀಗ ಬಂಗಾಳಕೊಲ್ಲಿ ಸಮುದ್ರದ 3.4ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ ಸಂಸ್ಥೆಯು ಸಮುದ್ರದ ಆಳದಲ್ಲಿ ನಿಯೋಜಿಸಿರುವ ಅಟಾನಾಮಸ್ (ಸ್ವಾಯತ್ತ) ಅಂಡರ್ ವಾಟರ್ ವೆಹಿಕಲ್ (ಎಯುವಿ) ವಿಮಾನದ ಅವಶೇಷಗಳ ಚಿತ್ರವನ್ನು ಸೆರೆ ಹಿಡಿದಿದೆ. ಅದನ್ನು ಪರಿಶೀಲಿಸಿದಾಗ ಚೆನ್ನೈ ಕರಾವಳಿಯಿಂದ 310 ಕಿ.ಮೀ.ದೂರದಲ್ಲಿ ಪತ್ತೆಯಾಗಿರುವ ಅವಶೇಷ ಏಳೂವರೆ ವರ್ಷದ ಹಿಂದೆ ಕಾಣೆಯಾದ ಎಎನ್-32 ವಿಮಾನದ್ದು ಎಂಬುದು ದೃಢಪಟ್ಟಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
2016ರ ಜುಲೈ 22ರಂದು ಕೆ-2743 ನೋಂದಣಿ ಹೊಂದಿರುವ ಎಎನ್-32 ವಿಮಾನವು ಬಂಗಾಳಕೊಲ್ಲಿ ಕಾರ್ಯಾಚರಣೆ ಸಂದರ್ಭದಲ್ಲಿ 29 ಸಿಬ್ಬಂದಿಯೊಂದಿಗೆ ನಾಪತ್ತೆಯಾಗಿತ್ತು. ಆ ಬಳಿಕ ಸಿಬ್ಬಂದಿಯನ್ನಾಗಲಿ, ವಿಮಾನದ ಅವಶೇಷವನ್ನಾಗಲಿ ಹುಡುಕಲು ಸಾಧ್ಯವಾಗಿರಲಿಲ್ಲ. ಇದೀಗ ಅದೇ ಪ್ರದೇಶದಲ್ಲಿ ಅವಶೇಷ ಪತ್ತೆಯಾಗಿದ್ದು, ಬೇರೆ ಯಾವುದೇ ವಿಮಾನಗಳು ಈ ಪ್ರದೇಶದಲ್ಲಿ ಪತನಗೊಂಡಿರುವುದು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯನ್ ಟೆಕ್ನಾಲಜಿ ಕಾರ್ಯನಿರ್ವಹಿಸಿದ್ದು, ಮಲ್ಟಿಬೀಮ್ ಸೊನಾರ್, ಸಿಂಥೆಟಿಕ್ ಅಪೆಂಚರ್ ಸೊನಾರ್ನಂಥ ವಿವಿಧ ಪೆಲೋಡ್ಗಳನ್ನು ಬಳಸಿ ಆಳ ಸಮುದ್ರದ ಶೋಧ ನಡೆಸಿ ಅವಶೇಷ ಪತ್ತೆ ಹಚ್ಚಿದೆ ಎಂದೂ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ
Sabarimala;ಅಯ್ಯಪ್ಪ ದರ್ಶನಕ್ಕೆ ಇನ್ನು ಆನ್ಲೈನ್ ನೋಂದಣಿ ಕಡ್ಡಾಯ
Controversial Maldives President ಭಾರತಕ್ಕೆ !; ಇಂದು ರಾಷ್ಟ್ರಪತಿ, ಪ್ರಧಾನಿ ಮೋದಿ ಭೇಟಿ
Bhopal;1,800 ಕೋ.ರೂ. ಡ್ರಗ್ಸ್ ವಶ!; ದಿಲ್ಲಿಯಲ್ಲಿ ಕೊಕೇನ್ ಪತ್ತೆ ಬೆನ್ನಲ್ಲೇ ಘಟನೆ
Chennai Airshow; ಸುಡು ಬಿಸಿಲಿಗೆ 4 ಸಾ*ವು:200 ಮಂದಿ ಆಸ್ಪತ್ರೆಗೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ
Explosion: ಕರಾಚಿ ಏರ್ ಪೋರ್ಟ್ ಬಳಿ ಭೀಕರ ಸ್ಫೋಟ: ಇಬ್ಬರು ಚೀನಾ ಪ್ರಜೆಗಳು ಮೃತ್ಯು
Bigg Boss Marathi 5: ಬಿಗ್ ಬಾಸ್ ಮರಾಠಿ ಟ್ರೋಫಿ ಗೆದ್ದ ಅನಾಥ ಹುಡುಗ; ಯಾರೀತ?
Mudigere: ಚಲಿಸುತ್ತಿರುವ ಕಾರಿನ ಬಾಗಿಲಲ್ಲಿ ಕುಳಿತು ಮಹಿಳೆ ಹುಚ್ಚಾಟ…
Mumtaz Ali Missing: ಮೊದಿನ್ ಬಾವಾ ಸೋದರ ಮಮ್ತಾಜ್ ಆಲಿ ಆತ್ಮಹ*ತ್ಯೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.