ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನ ಯತ್ನ ವಿಫಲ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಮತ್ತೆ ಸಕಾಲದಲ್ಲಿ ಎಚ್ಚರಿಸಿದ ಸೈನ್‌ ಇನ್‌ ಸೆಕ್ಯೂರಿಟಿ ತಂಡ

Team Udayavani, Jun 22, 2024, 11:18 PM IST

ಮುಳ್ಳಿಕಟ್ಟೆ ಸೊಸೈಟಿಯಲ್ಲಿ ಕಳ್ಳತನ ಯತ್ನ ವಿಫಲ; ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಕುಂದಾಪುರ: ಭದ್ರತಾ ಸಂಸ್ಥೆಯ ಸಕಾಲಿಕ ಕಾರ್ಯಾ ಚರಣೆಯಿಂದ ಮತ್ತೊಂದು ಕಳ್ಳತನ ಪ್ರಕರಣ ತಪ್ಪಿದೆ.

ಮುಳ್ಳಿಕಟ್ಟೆಯಲ್ಲಿರುವ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಹೊಸಾಡು ಶಾಖೆಗೆ ಶುಕ್ರವಾರ ಮಧ್ಯ ರಾತ್ರಿ 1.45ರ ಸುಮಾರಿಗೆ ಕಳ್ಳನೋರ್ವ ಕಿಟಕಿಯ ಗ್ರಿಲ್‌ ಮುರಿದು ನುಗ್ಗಿದ್ದ. ಈ ದೃಶ್ಯ ಅಲ್ಲಿನ ಸೈನ್‌ ಇನ್‌ ಸೆಕ್ಯುರಿಟೀಸ್‌ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿ ಕೆಮರಾದಲ್ಲಿ ಸೆರೆಯಾಯಿತು. ಇದನ್ನು ಗಮನಿಸಿದ್ದ ಸೈನ್‌ ಇನ್‌ ತಂಡ ತತ್‌ಕ್ಷಣವೇ ಆ ಪ್ರದೇಶಕ್ಕೆ ಸಂಬಂಧಪಟ್ಟ ಗಂಗೊಳ್ಳಿ ಠಾಣೆ ಎಸ್‌ಐ ಬಸವರಾಜು ಅವರಿಗೆ ಕರೆ ಮಾಡಿ ಮಾಹಿತಿ ನೀಡಿತು.

ಗಂಗೊಳ್ಳಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕಳ್ಳ ಸೊಸೈಟಿ ಯೊಳಗೆ ಸೆರೆ ಸಿಕ್ಕಿದ್ದಾನೆ.

ಪರಿಸರದಲ್ಲೇ ರಾತ್ರಿ ರೌಂಡ್ಸ್‌ನಲ್ಲಿದ್ದ ಬಸವರಾಜು, ಸಿಬಂದಿ ಮೋಹನ್‌, ಶರಣಪ್ಪ ಅವರು 2-3 ನಿಮಿಷದಲ್ಲಿ ಸೊಸೈಟಿಯತ್ತ ದೌಡಾಯಿಸಿದರು. ಬಳಿಕ ಸೊಸೈಟಿಯ ಪ್ರಮುಖರನ್ನು ಕರೆಸಿ ಬಾಗಿಲು ತೆರೆದು ಒಳಗಿದ್ದ ಕಳ್ಳನನ್ನು ಸ್ಥಳದಲ್ಲಿಯೇ ಸೆರೆಹಿಡಿದರು. ಬಂಧಿತನನ್ನು ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗವಳ್ಳಿ ತಾಲೂಕಿನ ಪ್ರಕಾಶ್‌ ಬಾಬು (46) ಅಲಿಯಾಸ್‌ ನಿಯಾಜ್‌ ಎಂದು ಗುರುತಿಸಲಾಗಿದೆ.ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಸೈನ್‌ ಇನ್‌ ಸೆಕ್ಯೂರಿಟಿ ವ್ಯವಸ್ಥೆ?
ದೇವಸ್ಥಾನ, ಬ್ಯಾಂಕ್‌, ಸೊಸೈಟಿ, ಹಣಕಾಸು ಸಂಸ್ಥೆ, ಜುವೆಲ್ಲರಿ, ವಾಣಿಜ್ಯ ಮಳಿಗೆಗಳ ಸಹಿತ ಎಲ್ಲ ವ್ಯಾಪಾರ-ವಹಿವಾಟು ಸಂಸ್ಥೆಗಳಿಗೆ ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಲೈವ್‌ ಮಾನಿಟರಿಂಗ್‌ ಸಿಸಿ ಕೆಮರಾ ಹಾಕಿಸಲಾಗುತ್ತದೆ. ಈ ಸಂಸ್ಥೆಯು ದಿನದ 24 ಗಂಟೆಯೂ ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯಗಳ ಮೇಲೆ ನಿಗಾ ಇಡುತ್ತಿದ್ದು, ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆ ಕಂಡು ಬಂದರೆ ತತ್‌ಕ್ಷಣ ಪೊಲೀಸರ ಗಮನಕ್ಕೆ ತರುತ್ತದೆ. ಕುಂದಾಪುರದ ಹಲವೆಡೆ ಈವರೆಗೆ ಸಾಕಷ್ಟು ಸಂಭಾವ್ಯ ಕಳ್ಳತನ, ಅನಾಹುತಗಳನ್ನು ಪೊಲೀಸರ ಸಹಾಯದಿಂದ ತಪ್ಪಿಸುವಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ.

ಟಾಪ್ ನ್ಯೂಸ್

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ

1-eqwwewq

Maharashtra ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಸುಜಾತಾ ಸೌನಿಕ್

Agriculture ಹಿರೇಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

Agriculture ಹೀರೆಕಾಯಿ ಬೆಳೆಯಿಂದ ಉತ್ತಮ ಆದಾಯ; ಕೃಷಿಕ ಧನಪಾಲ ಯಲ್ಲಟ್ಟಿ ಸಾಧನೆ

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota

MP ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Parkala: ಕೆರೆದಂಡೆ ನಾಲ್ಕನೇ ಬಾರಿ ಕುಸಿತ; ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Udupi “ದೊಡ್ಡ ಸಾಮಗರ ನಾಲ್ಮೊಗ’ ಗ್ರಂಥ ಲೋಕಾರ್ಪಣೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Student ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆ: ಕಾರ್ಕಳದ ಮೂವರು ರಾಷ್ಟ್ರಮಟ್ಟಕ್ಕೆ

Scanning Center ಭ್ರೂಣಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ

Scanning Center ಭ್ರೂಣಪತ್ತೆ ತಡೆಗೆ ಅಧಿಕಾರಿಗಳು ಎಚ್ಚರದಿಂದಿರಿ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

CID ಸೂರಜ್‌ಗೆ ಮುಂದುವರಿದ ಸಿಐಡಿ ಪ್ರಶ್ನೆಗಳ ಸುರಿಮಳೆ

“ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ

robbers

Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.