![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Theft case ಬಡಗಕಜೆಕಾರು: ನಿರ್ಮಾಣ ಹಂತದ ರುದ್ರ ಭೂಮಿಯಿಂದ ಕಳವು
Team Udayavani, Jul 2, 2024, 1:25 AM IST
![Theft case ಬಡಗಕಜೆಕಾರು: ನಿರ್ಮಾಣ ಹಂತದ ರುದ್ರ ಭೂಮಿಯಿಂದ ಕಳವು](https://www.udayavani.com/wp-content/uploads/2024/07/t-620x349.jpg)
ಪುಂಜಾಲಕಟ್ಟೆ: ನಿರ್ಮಾಣ ಹಂತದಲ್ಲಿರುವ ರುದ್ರಭೂಮಿಯಿಂದ ಬೆಲೆಬಾಳುವ ಸಿಲಿಕಾನ್ ಬೀಡ್ ಹಾಗೂ ಇತರ ಸಾಮಗ್ರಿಗಳನ್ನು ಕಳವುಗೈದ ಘಟನೆ ರವಿವಾರ ಸಂಭವಿಸಿದ್ದು, ಸೋಮವಾರ ಬೆಳಕಿಗೆ ಬಂದಿದೆ.
ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಮಾಡಪಲ್ಕೆಯಲ್ಲಿ ರುದ್ರಭೂಮಿಯ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೇಂಬರ್ ನೀಡಲಾಗಿದ್ದು, ಇದನ್ನು ರುದ್ರಭೂಮಿಯಲ್ಲಿ ಅಳವಡಿಸಲಾಗಿತ್ತು. ಕಟ್ಟಡ ಕಾರ್ಮಿಕರು ಶನಿವಾರ ಕಾಮಗಾರಿ ಮುಗಿಸಿ ತಮ್ಮ ಪರಿಕರಗಳನ್ನು ಅಲ್ಲೇ ಇರಿಸಿ ತೆರಳಿದ್ದರು. ಸೋಮವಾರ ಕಾಮಗಾರಿಗೆ ಆಗಮಿಸಿದ ಸಂದರ್ಭ ಈ ಕಳ್ಳತನ ಗಮನಕ್ಕೆ ಬಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗೆ ತಿಳಿಸಿದ್ದರು. ಚೇಂಬರ್ನ ಸಿಲಿಕಾನ್ ಪ್ಲೇಟ್ ಹಾಗೂ ಕಾರ್ಮಿಕರ ಸಾಮಗ್ರಿಗಳ ಬೆಲೆ ಸುಮಾರು 60 ಸಾವಿರ ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
![Mangaluru ಮಣ್ಣು ಕುಸಿತ: ಕೆಲಸ ಹೊಸತಲ್ಲ, ದುರದೃಷ್ಟ ಹೊಸತು !](https://www.udayavani.com/wp-content/uploads/2024/07/azaz-415x241.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.