Kalcharpe: ವಿಲೇ ಆಗದೆ ರಾಶಿ ಬಿದ್ದ ತ್ಯಾಜ್ಯ
ಕೈಕೊಟ್ಟ ಯಂತ್ರ ,ಸಾಂಕ್ರಾಮಿಕ ರೋಗ ಹರಡುವ ಭೀತಿ
Team Udayavani, Aug 3, 2024, 11:48 AM IST
ಅರಂತೋಡು: ಸುಳ್ಯ ನಗರದ ಘನ ತ್ಯಾಜ್ಯಗಳನ್ನು ಆಲೆಟ್ಟಿ ಗ್ರಾಮದ ಪೆರಾಜೆ ಸಮೀಪದ ಕಲ್ಚರ್ಪೆಯಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು ಕಸ ವಿಲೇವಾರಿಯ ಯಂತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ತ್ಯಾಜ್ಯ ರಾಶಿ ಬೀಳಲಾರಂಭಿಸಿದೆ.
ಪರಿಸರದ ಕೆಲವು ಜನರಲ್ಲಿ ಜ್ವರ ಲಕ್ಷಣವೂ ಕಾಣಿಸಿದೆ. ಈ ಭಾಗದಲ್ಲಿ ಕೊಳಚೆ ನೀರೂ ಸಂಗ್ರಹವಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಸ್ಥಳೀಯರಲ್ಲಿ ಹುಟ್ಟಿದೆ. ಆಗೊಮ್ಮೆ ಈಗೊಮ್ಮೆ ಯಂತ್ರ ದುರಸ್ತಿಯಾಗಿ ಕಾರ್ಯಾರಂಭಿ ಸಿದಾಗ ಕಪ್ಪಗಿನ ದಟ್ಟ ಹೊಗೆ ಬಿಡುಗಡೆ ಯಾಗುತ್ತಿದ್ದು ಆತಂಕ ಸೃಷ್ಟಿಸುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಪಯಸ್ವಿನಿ ನದಿ ಸೇರುವ ತ್ಯಾಜ್ಯ ಘಟಕದ ಪಕ್ಕದಲ್ಲಿ ಘನ ತ್ಯಾಜ್ಯದ ರಾಶಿ ಬಿದ್ದುಕೊಂಡಿದ್ದು ಮಳೆ ಜೋರಾಗಿ ಬರುತ್ತಿರುವಾಗ ಅವು ಪಕ್ಕದ ಚರಂಡಿ ಮೂಲಕ ಸಾಗಿ ಸುಳ್ಯ ನಗರಕ್ಕೆ ನೀರು ಪೂರೈಕೆ ಮಾಡುವ ಸುಳ್ಯದ ಜೀವ ನದಿ ಪಯಸ್ವಿನಿಯ ಒಡಲು ಸೇರುತ್ತಿದೆ.
ಯಂತ್ರ ದುರಸ್ತಿ ಪಡಿಸಲಾಗಿದೆ
ಬರ್ನಿಂಗ್ ಯಂತ್ರ ಕೆಟ್ಟು ಕೆಲವು ದಿನಗಳಿಂದ ಯಂತ್ರ ಕೆಲಸ ಮಾಡುತ್ತಿರಲಿಲ್ಲ. ಇದೀಗ ಯಂತ್ರವನ್ನು ದುರಸ್ತಿ ಪಡಿಸಲಾಗಿದೆ. ಹೆಚ್ಚುವರಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತೇವೆ.
-ಸುಧಾಕರ, ನ.ಪಂ. ಮುಖ್ಯಾಧಿಕಾರಿ, ಸುಳ್ಯ.
ವಿಷಯುಕ್ತ ಹೊಗೆ
ತ್ಯಾಜ್ಯ ಬರ್ನ್ ಮಾಡುವ ಯಂತ್ರ ಸರಿಯಾಗಿ ಕೆಲಸಮಾಡುತ್ತಿಲ್ಲ. ಕಸದ ರಾಶಿ ಮೇಲ್ಛಾವಣಿ ಮುಟ್ಟಲು ತಯಾರಾಗಿದೆ. ಪರಿಸರ ಶುಚಿತ್ವ ಇಲ್ಲದೆ ರೋಗ ಹರಡುವ ಭೀತಿ ಎದುರಾಗಿದೆ. ವಿಷಯುಕ್ತ ಹೊಗೆ ಪರಿಸರದವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. -ಆಶೋಕ ಪೀಚೆ , ಸ್ಥಳೀಯ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.