Thirupathi Laddu: ತುಪ್ಪ ಪೂರೈಸಿದ ತಮಿಳುನಾಡಿನ ಎ.ಆರ್.ಡೇರಿ ವಿರುದ್ಧ ಟಿಟಿಡಿ ದೂರು
ಕಂಪನಿಯಿಂದ ನಿಯಮಗಳ ಉಲ್ಲಂಘನೆ ಆರೋಪ, ಪವನ್ ಕಲ್ಯಾಣ್-ಪ್ರಕಾಶ್ ರೈ ಮಧ್ಯೆ ಸಂಘರ್ಷ ತೀವ್ರ
Team Udayavani, Sep 26, 2024, 11:11 PM IST
ತಿರುಪತಿ: ತಿರುಪತಿಯ ತಿರುಮಲ ದೇಗುಲಕ್ಕೆ ಕಲಬೆರಕೆ ತುಪ್ಪ ಪೂರೈಸಿದ ತಮಿಳುನಾಡಿನ ಎ.ಆರ್.ಡೇರಿ ಫುಡ್ಸ್ ಪ್ರೈ.ಲಿ. ವಿರುದ್ಧ ತಿರುಪತಿ ತಿರುಮಲ ದೇವಸ್ಥಾನಮ್ ಟ್ರಸ್ಟ್ (ಟಿಟಿಡಿ) ಪೊಲೀಸರಿಗೆ ದೂರು ನೀಡಿದೆ.
ನಿಯಮಗಳ ಉಲ್ಲಂಘನೆ ಆರೋಪದ ಮೇರೆಗೆ ಟಿಟಿಡಿ ಜನರಲ್ ಮ್ಯಾನೇಜರ್ ಮುರಳಿ ಕೃಷ್ಣ ಎಂಬವರು ತಿರುಪತಿ ಪೂರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಟಿಟಿಡಿ ಸಿಇಒ ಜೆ.ಶ್ಯಾಮಲಾ ರಾವ್, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು, ಹಂದಿಯ ಕೊಬ್ಬು ಬೆರೆಸಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎ.ಆರ್.ಡೇರಿ ಫುಡ್ಸ್, ನಾವು ಜೂನ್, ಜುಲೈ ತಿಂಗಳಲ್ಲಿ ಮಾತ್ರ ತುಪ್ಪ ನೀಡಿರುವುದು. ತುಪ್ಪದ ಗುಣಮಟ್ಟ ಸರಿಯಾಗಿದೆ ಎಂದು ಟಿಟಿಡಿಯೇ ಪರಿಶೀಲಿಸಿ ಪ್ರಮಾಣಪತ್ರ ನೀಡಿದೆ ಎಂದಿದೆ.
ಆಂಧ್ರದ ದೇಗುಲಗಳಲ್ಲಿ ಜಗನ್ ಪೂಜೆ!
ಮಾಜಿ ಸಿಎಂ ಜಗನ್ ರೆಡ್ಡಿ ಅಧಿಕಾರಾವಧಿಯಲ್ಲಿ ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬೆರೆಸಲಾಗಿದೆ ಎಂದು ಆರೋಪಿಸುವ ಮೂಲಕ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾಪ ಮಾಡಿದ್ದಾರೆ. ಆ ಪಾಪದಿಂದ ಅವರಿಗೆ ಮುಕ್ತಿ ಸಿಗಲಿ ಎಂಬ ಉದ್ದೇಶದಿಂದ ಪ್ರಾಯಶ್ಚಿತ್ತ ಮಾಡಲು ಜಗನ್ ರೆಡ್ಡಿ ಅಧ್ಯಕ್ಷರಾಗಿರುವ ವೈಎಸ್ಆರ್ಸಿಪಿ ಮುಂದಾಗಿದೆ. ಇದೇ ಶನಿವಾರ ಆಂಧ್ರಪ್ರದೇಶದ ಎಲ್ಲ ದೇಗುಲಗಳಲ್ಲಿ ಪ್ರಾಯಶ್ಚಿತ್ತಾರ್ಥವಾಗಿ ಪೂಜೆ ನಡೆಸಲಾಗುವುದು, ಎಲ್ಲರೂ ಪಾಲ್ಗೊಳ್ಳಬೇಕು ಎಂದು ಟ್ವೀಟರ್ನಲ್ಲಿ ಜಗನ್ ಪೋಸ್ಟ್ ಮಾಡಿದ್ದಾರೆ.
ಪವನ್ ಕಲ್ಯಾಣ್-ಪ್ರಕಾಶ್ ರೈ ಸಂಘರ್ಷ ತೀವ್ರ
ತಿರುಪತಿ ಲಡ್ಡು ವಿಚಾರದಲ್ಲಿ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಖ್ಯಾತ ನಟ ಪ್ರಕಾಶ್ ರಾಜ್ ನಡುವಿನ ಘರ್ಷಣೆ ಮತ್ತಷ್ಟು ತೀವ್ರವಾಗಿದೆ. ರಾಜಕಾರಣಿ ಕಾನೂನು ಜಾರಿಯಲ್ಲಿ ಪಾತ್ರವಹಿಸಬೇಕು. ಆತ ಪ್ರಕರಣದ ತನಿಖೆ ಮಾಡಬೇಕೇ ಹೊರತು, ಕೋಮುಸಂಘರ್ಷ ಉಂಟು ಮಾಡುವುದಕ್ಕೆ ಯತ್ನಿಸಬಾರದು ಎಂದು ಪವನ್ ಕಲ್ಯಾಣ್ ವಿರುದ್ಧ ಪ್ರಕಾಶ್ ರೈ ಕಿಡಿಕಾರಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಪವನ್ ಕಲ್ಯಾಣ್, “ನಾನು ಹಿಂದೂ ಧರ್ಮದ ಪಾವಿತ್ರ್ಯತೆ ಬಗ್ಗೆ ಮಾತಾಡುತ್ತಿದ್ದೇನೆ. ನೀವೇಕೆ ನನ್ನನ್ನು ಟೀಕಿಸುತ್ತಿದ್ದೀರಿ ಎಂದು ಗೊತ್ತಿಲ್ಲ. ಸನಾತನ ಧರ್ಮದ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ನಾನು ಮಾತಾಡಬಾರದಾ? ಪ್ರಕಾಶ್ ಸ್ವಲ್ಪ ಪಾಠ ಕಲಿಯಬೇಕಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಎಂಆರ್ಐ ಸೇವೆ ವ್ಯತ್ಯಯ
Clean sweep ನಿರೀಕ್ಷೆಯಲ್ಲಿ ಭಾರತ: ಬಾಂಗ್ಲಾ ವಿರುದ್ಧದ ದ್ವಿತೀಯ ಟೆಸ್ಟ್ ಇಂದಿನಿಂದ
Minimum wages; ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಿದ ಕೇಂದ್ರ
400 crores ಆನ್ಲೈನ್ ಗೇಮಿಂಗ್ ಆ್ಯಪ್ ವಂಚನೆ ಪತ್ತೆ
Leopard cage; ಚಿರತೆ ಬೋನಿನಲ್ಲಿಟ್ಟಿದ್ದ ಮೇಕೆ ಕದ್ದೊಯ್ದ ಖದೀಮರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.