ಪಂಜಾಬಿ ಭಾಷೆ ಉತ್ತೇಜಿಸುತ್ತಿರುವ ಕರ್ನಾಟಕದ ಪ್ರೊಫೆಸರ್!
2003ರಿಂದ ಶಿಕ್ಷಕ ವೃತ್ತಿಯಲ್ಲಿರುವ ಧರೆನ್ನವರ್;ವಚನಗಳನ್ನು ಪಂಜಾಬಿಗೆ ಭಾಷಾಂತರಿಸಿದ ಹೆಗ್ಗಳಿಕೆ
Team Udayavani, Feb 6, 2023, 7:30 AM IST
ಚಂಡೀಗಡ:ತಮ್ಮ ಕರ್ಮಭೂಮಿಯಾದ ಪಂಜಾಬ್ ರಾಜ್ಯದಲ್ಲಿ ಪಂಜಾಬಿ ಭಾಷೆಗೆ ಹೆಚ್ಚಿನ ಮಾನ್ಯತೆ ಸಿಗಬೇಕು ಎಂಬ ಉದ್ದೇಶದಿಂದ ಕಾಲೇಜು ಪ್ರೊಫೆಸರ್ವೊಬ್ಬರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹಾಗಂತ, ಈ ಪ್ರೊಫೆಸರ್ ಪಂಜಾಬ್ನವರಲ್ಲ, ಬದಲಿಗೆ ಕರ್ನಾಟಕದವರು!
ಹೌದು, ಕರ್ನಾಟಕದ ಬಿಜಾಪುರ ಜಿಲ್ಲೆಯವರಾದ ಪಂಡಿತ್ ರಾವ್ ಧರೆನ್ನವರ್ 2003ರಲ್ಲೇ ಶಿಕ್ಷಕ ವೃತ್ತಿ ಅರಸಿ ಪಂಜಾಬ್ಗ ಹೋದವರು. ಪ್ರಸ್ತುತ ಅವರು ಚಂಡೀಗಡದ ಸ್ನಾತಕೋತ್ತರ ಸರ್ಕಾರಿ ಕಾಲೇಜಿನ ಸಹಾಯಕ ಪ್ರೊಫೆಸರ್.
ಅವರು ಈಗ ಪ್ರತಿದಿನ “ಎಲ್ಲರೂ ಅವರವರ ತಾಯ್ನುಡಿಗೆ ಗೌರವ ಕೊಡಬೇಕು. ನೀವೆಲ್ಲರೂ ನಿಮ್ಮ ಅಂಗಡಿಗಳ ಫಲಕಗಳಲ್ಲಿ ಆದ್ಯತೆ ಮೇರೆಗೆ ಪಂಜಾಬಿಯನ್ನೇ ಬಳಸಬೇಕು’ ಎಂದು ಬರೆದಿರುವ ಪ್ಲೆಕಾರ್ಡ್ ಹಿಡಿದು ರಾಜ್ಯಾದ್ಯಂತ ಸುತ್ತಾಡುತ್ತಿದ್ದಾರೆ. ಖಾಸಗಿ ವಿವಿಗಳಿಗೂ ಮನವಿ ಸಲ್ಲಿಸಿದ್ದಾರೆ.
ಧರೆನ್ನವರ್ ಈಗಾಗಲೇ ಸಿಖ್ ಧಾರ್ಮಿಕ ಗ್ರಂಥ “ಜಪ್ಜೀ ಸಾಹಿಬ್’ ಅನ್ನು ಕನ್ನಡ ಭಾಷೆಗೂ, ಕನ್ನಡದ ವಚನಗಳನ್ನು ಪಂಜಾಬಿ ಭಾಷೆಗೂ ತರ್ಜುಮೆ ಮಾಡಿದ್ದಾರೆ. ಕರ್ನಾಟಕದ ಮಾದರಿಯಲ್ಲೇ ಪಂಜಾಬ್ನಲ್ಲಿ ಭಾಷಾಂತರ ಕೇಂದ್ರವಿರಬೇಕು. ಶ್ರೀಮಂತ ಪಂಜಾಬಿ ಸಾಹಿತ್ಯವು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಳ್ಳಬೇಕು ಎನ್ನುತ್ತಾರೆ ಧರೆನ್ನವರ್.
ಫೆ.21ರ ಅಂತಾರಾಷ್ಟ್ರೀಯ ತಾಯ್ನುಡಿ ದಿನಕ್ಕೂ ಮುನ್ನ ರಾಜ್ಯದ ಎಲ್ಲ ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಪಂಜಾಬಿ ಭಾಷೆಯ ಫಲಕಗಳೇ ರಾರಾಜಿಸಬೇಕು. ಇದೊಂದು ಚಳವಳಿಯಾಗಿ ರೂಪುಗೊಳ್ಳಬೇಕು ಎಂದು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಇತ್ತೀಚೆಗೆ ಕರೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ: ಬಂಧನವಾಗಿ ನೂರು ದಿನ ಕಳೆಯಿತು!
ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.