ಅರ್ಥ ಅರಿಯದೆ ಅರಚಿದರೇನು ಬಂತು?


Team Udayavani, Jul 8, 2020, 5:04 AM IST

artha-bantu

ಒಬ್ಬ ಸಾಧು ನಿತ್ಯವೂ ಸ್ವಲ್ಪ ಹೊತ್ತು ವನಪ್ರದೇಶದಲ್ಲಿ ಕುಳಿತು ಪಕ್ಷಿಗಳ ಚಿಲಿಪಿಲಿ ನಾದವನ್ನು ಆಲಿಸುತ್ತಲಿದ್ದ. ಒಮ್ಮೆ ಬೇಡನೊಬ್ಬ ಬಲೆ ಹರಡಿ ಹಕ್ಕಿಗಳನ್ನು ಹಿಡಿದೊಯ್ದುದ್ದನ್ನು ನೋಡಿದ. ಆತ ಮರುದಿನವೂ ಬೇಟೆಗೆ ಬರುತ್ತಾನೆ  ಎಂಬುದನ್ನರಿತ ಸಾಧುವು, ಉಳಿದಿರುವ ಹಕ್ಕಿಗಳಿಗಾದರೂ ಅಪಾಯದ ಕುರಿತು ಎಚ್ಚರಿಸೋಣ ಎಂದು ಯೋಚಿಸಿ- “ನಾಳೆಯೂ ಬೇಡ ಬಂದು ಬಲೆ ಹರಡಿ ನಿಮ್ಮನ್ನು ಹಿಡಿಯುತ್ತಾನೆ. ಎಚ್ಚರಿಕೆಯಿಂದಿರಿ’ ಎಂದು ಹಕ್ಕಿಗಳಿಗೆ ಹೇಳಿದ.

ತನ್ನ ಮಾತು ಹಕ್ಕಿಗಳಿಗೆ ಅರ್ಥವಾಗಿದೆ ಎಂದು ಖಚಿತಪಡಿಸಿ  ಕೊಳ್ಳಲು ಅವುಗಳನ್ನು ಕೇಳಿದ- “ನಾನು ಏನು ಹೇಳಿದೆ ಹೇಳಿ?’ ಆಗ ಹಕ್ಕಿಗಳೆಲ್ಲವೂ ಒಕ್ಕೊರಲಿಂದ ನುಡಿದವು- “ಬೇಡ ಬರುತ್ತಾನೆ ಬಲೆ ಹರಡಲು, ಎಚ್ಚರಿಕೆ, ಎಚ್ಚರಿಕೆ…’  ಅದನ್ನು ಕೇಳಿದ ಸಾಧುವು ತೃಪ್ತನಾಗಿ ಹಿಂದಿರುಗಿದ. ಮರುದಿನ ಬೇಡ ಬರುತ್ತಿದ್ದಂತೆಯೇ ಹಕ್ಕಿಗಳು- “ಬೇಡ ಬರುತ್ತಾನೆ ಬಲೆ ಹರಡಲು. ಎಚ್ಚರಿಕೆ, ಎಚ್ಚರಿಕೆ’ ಎಂದು ಕೂಗಿಕೊಂಡವು. ನಿನ್ನೆಯಂತೆಯೇ ಇಂದೂ ಹಕ್ಕಿಗಳು ಸಿಗುತ್ತಾವೆಂಬ ನಿರೀಕ್ಷೆಯಲ್ಲಿದ್ದ ಬೇಡ, ಹಕ್ಕಿಗಳ ಮಾತು ಕೇಳಿ ನಿರಾಶನಾದ.

ಹೇಗೂ ಹಕ್ಕಿಗಳು ಸಿಗುವುದಿಲ್ಲ ಎಂದು ಬಲೆ ಹರಡಿ ಧಾನ್ಯದ ಕಣಗಳನ್ನು ಎರಚಿ, ಅಲ್ಲೇ ವಿಶ್ರಮಿಸಿದ. ಆದರೆ, ನಿದ್ರೆಯಿಂದ ಎಚ್ಚೆತ್ತು ನೋಡಿದವನಿಗೆ ಅಚ್ಚರಿ  ಕಾದಿತ್ತು. ಎಲ್ಲ ಹಕ್ಕಿಗಳೂ ಬಲೆಯ ಮೇಲೆಯೇ ಕುಳಿತು ಕಾಳುಗಳನ್ನು ತಿನ್ನುತ್ತಾ “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತಲಿದ್ದವು! ಬೇಡನು ತಡೆಯಲಾರದ ನಗುವಿನೊಡನೆ ಹಕ್ಕಿಗಳನ್ನು ಹೊತ್ತು ಮನೆಗೆ ತೆರಳಿದ. ಹಕ್ಕಿಗಳು  ಪಾರಾಗಿರುತ್ತವೆಂಬ ನಿಶ್ಚಯ  ದಿಂದ ಬಂದ ಸಾಧುವು ಆ ದೃಶ್ಯವನ್ನು ಕಂಡು ದಂಗಾದ. ಬೇಡನ ಬಲೆಯಲ್ಲಿದ್ದ ಹಕ್ಕಿಗಳು “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತ ಲೇ ಇದ್ದವು. ಮಾತನಾಡಬಲ್ಲ ಹಕ್ಕಿಗಳಿಗೆ ಮಾತನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ  (ಸಂಸ್ಕಾರ)ವಿರಲಿಲ್ಲವಷ್ಟೆ!

ಇದು ಹಿಂದೊಮ್ಮೆ ಎಲ್ಲೋ ಕೇಳಿದ ಕಥೆ  ಯಾದರೂ, ಪ್ರಸ್ತುತ ನಮ್ಮ ಕಥೆಯೂ ಹೌದು. ಜ್ಞಾನಿಗಳು ಹೃದಯ ಗುಹೆಯಲ್ಲಿ ಅನುಭವಿಸಿ ದ ಆತ್ಮದರ್ಶನ, ತತ್ಪರಿಣಾಮ ವಾದ ಪರಮಾ ನಂದವು ಭಾಷಾ  (ಮಂತ್ರ- ಸ್ತೋತ್ರ-  ಸಾಹಿತ್ಯಗಳ) ರೂಪದಲ್ಲಿ ಹೊರ ಹೊಮ್ಮಿವುದುಂಟು. ಶ್ರೀರಂಗ ಮಹಾಗುರುಗಳ ಆಶಯವೆಂದರೆ ಪದಾರ್ಥದ ಅನುಭವದಿಂದ ಪದವೂ, ಭಾವದಿಂದ ಭಾಷೆಯೂ ಹೊರಡುತ್ತ ವೆ. ಕೇಳುವವರಿಗೆ ತಕ್ಕ ಸಂಸ್ಕಾರವಿದ್ದಾಗ ಪದವು- ಪದಾರ್ಥದೆಡೆಗೂ, ಭಾಷೆಯು-  ಭಾವದೆಡೆಗೂ ಒಯ್ಯುತ್ತವೆ.

* ಮೈಥಿಲೀ ರಾಘವನ್‌, ಸಂಸ್ಕೃತ ಚಿಂತಕಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.