

Team Udayavani, Jan 30, 2025, 7:59 PM IST
ಮಂಗಳೂರು: ನೀರುಮಾರ್ಗ ಸಮೀಪದ ಪಡು ಕೊಂಬೆಲ್ಲಚ್ಚಿಲ್ ನಿವಾಸಿ ಶಶಿರಾಜ್ ಬಂಡಿಮಾರ್(41) ಅವರು ಹೃದಯಾಘಾತದಿಂದ ಜ. 29ರಂದು ನಾಗಾಲ್ಯಾಂಡ್ನಲ್ಲಿ ನಿಧನ ಹೊಂದಿದರು.
ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ. ತುಳು ಸಂಸ್ಕೃತಿ, ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸಿದ್ದ ಅವರು ’ಟೈಮ್ಸ್ ಆಫ್ ಕುಡ್ಲ’ ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು.
ಸಣ್ಣ ಕೈಗಾರಿಕೆ, ಆತಿಥ್ಯ ಕ್ಷೇತ್ರದಲ್ಲೂ ಸಕ್ರಿಯವಾಗಿದ್ದ ಅವರು ನಾಗಾಲ್ಯಾಂಡ್ನಲ್ಲಿ ತನ್ನ ಮರದ ಫ್ಯಾಕ್ಟರಿಗೆ ಹೋಗಿದ್ದಾಗ ಅನಾರೋಗ್ಯ ಕಾಡಿತ್ತು. ಅವರು ಪಡು ಭಗವತಿ ತೀಯಾ ಸಮಾಜ ಸೇವಾ ಸಂಘ ಪಡು – ಬೊಂಡಂತಿಲ ಇದರ ಮಾಜಿ ಅಧ್ಯಕ್ಷರಾಗಿದ್ದರು. ಸ್ಥಳೀಯವಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು. ಅನೇಕ ತುಳು ಸಂಘಟನೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು.
You seem to have an Ad Blocker on.
To continue reading, please turn it off or whitelist Udayavani.