![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 24, 2020, 8:10 PM IST
ಲಂಡನ್: ಕೋವಿಡ್ ಸೋಂಕಿನ ಲಕ್ಷಣಗಳೊಂದಿಗೆ ಲಾಕ್ ಡೌನ್ ಅವಧಿಯಲ್ಲಿ 400 ಕಿ.ಮೀ. ಕಾರು ಚಾಲನೆ ಮಾಡಿದ ಆರೋಪ ಎದುರಿಸುತ್ತಿರುವ ತಮ್ಮ ಸಲಹೆಗಾರ ಡೊಮಿನಿಕ್ ಕಮಿಂಗ್ಸ್ ಅವರನ್ನು ವಜಾಗೊಳಿಸುವಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮೇಲೆ ವಿಪಕ್ಷಗಳು ಒತ್ತಡ ಹೇರಿವೆ.
ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ಅಭಿಯಾನದ ರೂವಾರಿಯೂ ಆಗಿರುವ ಕಮಿಂಗ್ಸ್ ಅವರು ಕಳೆದ ಮಾರ್ಚ್ನಲ್ಲಿ ಡುರ್ಹಾಮ್ ಹಾಗೂ ಉತ್ತರ ಇಂಗ್ಲಂಡ್ ನಡುವೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಲಾಕ್ ಡೌನ್ನ ಕಠಿನ ನಿಯಮಾವಳಿಗಳು ಜಾರಿಯಲ್ಲಿದ್ದವು. ಔಷಧ ಹಾಗೂ ಆಹಾರದಂತಹ ಅಗತ್ಯ ವಸ್ತುಗಳ ಪೂರೈಕೆಯ ಉದ್ದೇಶವಿಲ್ಲದಿದ್ದರೆ ಜನರು ಕುಟುಂಬಸ್ಥರ ಭೇಟಿಗೆ ತೆರಳದೆ ಮನೆಗಳಲ್ಲೇ ಇರುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಕಾಯಿಲೆ ಬಿದ್ದಿರುವ ಮಗುವನ್ನು ನೋಡಿಕೊಳ್ಳಲು ಹೆತ್ತವರ ಸಹಾಯ ಪಡೆಯುವುದಕ್ಕಾಗಿ ಅವರು ಪ್ರಯಾಣಿಸಿದ್ದರೆಂದು ನಿಕಟವರ್ತಿಗಳು ತಿಳಿಸಿದ್ದಾರೆ.
ಬಲಿಷ್ಠರಿಗೆ ಒಂದು, ಬಡವರಿಗೆ ಮತ್ತೂಂದು ನಿಯಮ ಇದೆ ಎಂಬ ಭಾವನೆ ಮೂಡುವಂತೆ ವರ್ತಿಸಿದ ಡೊಮಿನಿಕ್ ಕಮಿನ್ಸ್ ತಾವಾಗಿಯೇ ಪದತ್ಯಾಗ ಮಾಡಬೇಕಿತ್ತು. ಈಗ ಪ್ರಧಾನಿಯವರೇ ಅವರನ್ನು ಕಿತ್ತುಹಾಕಬೇಕಿದೆ ಎಂದು ವಿಪಕ್ಷ ನಾಯಕ ಇಯಾನ್ ಬ್ಲಾಕ್ಫೋರ್ಡ್ ಆಗ್ರಹಿಸಿದ್ದಾರೆ.
ನಿಯಮ ಮುರಿದಿಲ್ಲ
ಈ ನಡುವೆ, ಕಮಿಂಗ್ಸ್ ಯಾವುದೇ ಲಾಕ್ಡೌನ್ ನಿಯಮಗಳನ್ನು ಮುರಿದಿಲ್ಲ ಎಂದು ಡೌನಿಂಗ್ ಸ್ಟ್ರೀಟ್ ಸ್ಪಷ್ಟಪಡಿಸಿದೆ.ಕಮಿಂಗ್ಸ್ ಅವರ ಪತ್ನಿ ಕೋವಿಡ್ ಪೀಡಿತರಾಗಿದ್ದರು. ಸ್ವತಃ ಅವರಿಗೂ ಕೋವಿಡ್ ಸೋಂಕು ತಗಲುವ ಅಪಾಯವಿತ್ತು. ಮಗುವಿಗೆ ಸೂಕ್ತ ಉಪಚಾರ ಲಭಿಸಲೆಂಬ ಉದ್ದೇಶದಿಂದ ಅವರು ತಮ್ಮ ಹೆತ್ತವರ ಬಳಿಗೆ ಬಿಟ್ಟು ಬರಲು ತೆರಳಿದ್ದರು ಎಂದು ತಿಳಿಸಲಾಗಿದೆ. ಕಮಿಂಗ್ಸ್ ಅವರು ಕಾನೂನುಬದ್ಧವಾಗಿ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಅವರ ಪದತ್ಯಾಗದ ಪ್ರಶ್ನೆಯೇ ಇಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಬ್ರಿಟನ್ ಕೋವಿಡ್ನ ವಜ್ರಾಘಾತಕ್ಕೆ ಒಳಗಾಗಿದ್ದು, ಗರಿಷ್ಠ ಸೋಂಕಿತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ಅಲ್ಲಿ 2,55,544 ಸೋಂಕಿತರಿದ್ದು, 36,475 ಜನರು ಪ್ರಾಣ ತೆತ್ತಿದ್ದಾರೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.