![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 19, 2020, 5:33 AM IST
ದೊಡ್ಡಣಗುಡ್ಡೆಯ ಜುಮಾದಿ ಕಟ್ಟೆ ಬಳಿ ಲಾರಿಯೊಂದು ಹೂತುಹೋಯಿತು.
ಉಡುಪಿ: ಕಳೆದೆರಡು ದಿನಗಳಿಂದ ವ್ಯಾಪಕ ಮಳೆಯಾಗಿದ್ದ ಜಿಲ್ಲೆಯಲ್ಲಿ ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದು, ನಗರದಲ್ಲಿ ದಿನವಿಡಿ ಮಳೆ -ಬಿಸಿಲಿನಾಟ ಕಂಡು ಬಂದಿತ್ತು.
ಬುಧವಾರ ರಾತ್ರಿ ಸುರಿದ ಮಳೆಗೆ ಬ್ರಹ್ಮಾವರ ತಾಲೂಕಿನಲ್ಲಿ ಹಲವು ಮನೆ ಗಳಿಗೆ ಹಾನಿಯಾಗಿದೆ. ಚೇರ್ಕಾಡಿ ಕಮಲಾ ಬಾಯಿ ಅವರ ಮನೆಗೆ ಸಿಡಿಲು ಬಡಿದು ಸುಮಾರು 70 ಸಾವಿರ ರೂ. ನಷ್ಟವಾದರೆ; ಚೇರ್ಕಳ ಶಕುಂತಳಾ ಅವರ ಮನೆಗೆ ಸಿಡಿಲು ಬಡಿದು 25 ಸಾವಿರ ರೂ.; ಬೈಕಾಡಿ ಗ್ರಾಮದ ಜಯಲಕ್ಷ್ಮೀ ಆಚಾರ್ ಅವರ ಮನೆಗೆ 15 ಸಾವಿರ ರೂ.; ಹಾರಾಡಿ ಗ್ರಾಮದ ಸಾಬಿರಾಲಿ ಅವರ ಮನೆಗೆ ಸಿಡಿಲು ಬಡಿದು 25 ಸಾವಿರ ರೂ.; ಕಚ್ಚಾರು ಗ್ರಾಮದ ಜ್ಯೋತಿ ಅವರ ಮನೆಗೆ ಹಾನಿಯಾಗಿ 5 ಸಾವಿರ ರೂ.; ಪಾಂಡೇಶ್ವರ ಗ್ರಾಮದ ರಾಜು ದೇವಾಡಿಗ ಅವರ ದನದ ಕೊಟ್ಟಿಗೆಗೆ ಹಾನಿಯಾಗಿ 25 ಸಾವಿರ ರೂ.; ಚಾಂತಾರು ಗ್ರಾಮದ ಅಣ್ಣಪ್ಪ ನಾಯ್ಕ ಅವರ ಮನೆಯ ದನದ ಕೊಟ್ಟಿಗೆಗೆ ಸುಮಾರು 10 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ದೊಡ್ಡಣಗುಡ್ಡೆ : ಹೂತು ಹೋದ ಲಾರಿ
ಉಡುಪಿ ತಾಲೂಕಿನಲ್ಲಿ ಬುಧವಾರ ಹಗಲು-ರಾತ್ರಿ ಉತ್ತಮ ಮಳೆಯಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ದೊಡ್ಡಣಗುಡ್ಡೆ ಗುಂಡಿಬೈಲು- ಪೆರಂಪಳ್ಳಿ ರಸ್ತೆಯ ಜುಮಾದಿ ಕಟ್ಟೆ ಹತ್ತಿರ ಸರಕು ಸಾಮಾನು ಹೊತ್ತ ಲಾರಿಯೊಂದು ಬುಧವಾರ ರಸ್ತೆ ಬದಿಯಲ್ಲಿ ಹೂತು ಹೋಗಿತ್ತು. ಅನಂತರ ಸಂಚಾರಕ್ಕೆ ತೆರವು ಮಾಡಿಕೊಡಲಾಯಿತು.
ವಿವಿಧೆಡೆ ಮಳೆ
ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಕಾಪು ಭಾಗಗಳಲ್ಲಿ ಕೂಡ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಉಪ್ಪುಂದ ದಲ್ಲಿ ಕಡಲಬ್ಬರ ಜೋರಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.