Udupi ಗೀತಾರ್ಥ ಚಿಂತನೆ -28; ಧರ್ಮದ ಭಾವ religionನಲ್ಲಿಲ್ಲ
Team Udayavani, Sep 6, 2024, 12:53 AM IST
ಅಮೃತಮಥನ ಕಾಲದಲ್ಲಿ ಸುರಾಸುರರು ಜತೆಗೂಡಿ ಕಡೆದರೂ ಅಮೃತವನ್ನು ದೇವತೆಗಳಿಗೆ ಮಾತ್ರ ಕೊಟ್ಟದ್ದು ಎಷ್ಟು ಸರಿ ಎಂದು ಪ್ರಶ್ನಿಸುವವರಿದ್ದಾರೆ. ಅಮೃತ ಬಂದ ತತ್ಕ್ಷಣ ಅಮೃತಕಲಶವನ್ನು ಮೊದಲು ಎತ್ತಿಕೊಂಡು ಓಡಿಹೋದವರು ಅಸುರರು. ಅವರು ಮೊದಲೇ ಹಂಚಿಕೊಳ್ಳೋಣ ಎಂದು ಹೇಳಬಹುದಿತ್ತು.
ಹಾಗೆ ಯಾರಿಗೂ ಹೇಳದೆ ಕಳ್ಳತನ ಮಾಡಲು ಯತ್ನಿಸಿದರು. ಭಗವಂತ ಮೋಹಿನಿ ರೂಪದಲ್ಲಿ ಬಂದು ಏಕೆ ದೇವತೆಗಳಿಗೆ ಅಮೃತವನ್ನು ಕೊಡಿಸಬೇಕಿತ್ತು ಎಂದೂ ಪ್ರಶ್ನಿಸುತ್ತಾರೆ. ಮೇರು ಪರ್ವತವನ್ನು ಕಡೆಗೋಲಾಗಿ ಸುರಾಸುರರು ಕಡೆಯುತ್ತಿರುವಾಗ ಕೆಳಗೆ ಕೂರ್ಮರೂಪದಲ್ಲಿದ್ದು ರಕ್ಷಿಸಿದ್ದೇ ಭಗವಂತ. ಇಲ್ಲಿಯೂ ಅಮೃತಕಲಶದ ಮಾಲಕತ್ವ ಯಾರಿಗೆ ಸೇರಿದ್ದಾಯಿತು? ಭಗವಂತನಿಗೇ. ಆತನಿಗೆ ಸೇರಿದ ಅಮೃತವನ್ನು ಆತ ದೇವತೆಗಳಿಗೆ ಹಂಚಿದ, ತಪ್ಪೇನು? ಒಟ್ಟಾರೆ ಧರ್ಮದ ಅರ್ಥವೆಂದರೆ ಸಮಷ್ಟಿ ಹಿತ, ನನ್ನದಲ್ಲ ಎಂಬುದು.
ಆದ್ದರಿಂದಲೇ ಧರ್ಮ ಎನ್ನುವುದು religion ಗೆ ಸಮನಾಗದು, ಧಾರಕತ್ವ ಎಂಬ ಭಾವ ರಿಲಿಜಿಯನ್ ಶಬ್ದದಲ್ಲಿ ಬರುವುದಿಲ್ಲ. ಧರ್ಮಕ್ಕೆ ಅನೇಕ ವ್ಯಾಪ್ತಿ ಇದೆ. ಕರ್ಮವೂ ಇಷ್ಟೇ. ಧರ್ಮಕ್ಕೆ ಪುಣ್ಯ ಎಂಬರ್ಥವೂ ಇದೆ. “ಸರ್ವಧರ್ಮಾನ್ ಪರಿತ್ಯಜ್ಯ’ ಎನ್ನುವಾಗ “ಪುಣ್ಯ’, “ಫಲ’ ಎಂಬ ಅರ್ಥದಲ್ಲಿ ಬಳಸಲಾಗಿದೆ. ಭಿಕ್ಷುಕರು ಯಾಚಿಸುವಾಗ “ಧರ್ಮ ಮಾಡಿ’ ಎನ್ನುವುದು “ಧರ್ಮ ಮಾಡಿ ಪುಣ್ಯ ಕಟ್ಟಿಕೊಳ್ಳಿ’ ಎಂಬರ್ಥದಲ್ಲಿ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ
Holiday: ಮಲ್ಪೆ ಬೀಚ್ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು
Karkala: ಬಹುಭಾಷೆ, ಬಹುಶಿಸ್ತೀಯ ಶಿಕ್ಷಣ ಅತ್ಯಗತ್ಯ: ಪ್ರೊ.ಅನಿಲ್ ಸಹಸ್ರಬುದ್ಧೆ
Udupi: ಬೆಡ್ಶೀಟ್ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ
MUST WATCH
ಹೊಸ ಸೇರ್ಪಡೆ
Delhi Govt: ದೆಹಲಿ ಸಿಎಂ ರೇಸ್ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ
Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.