Udupi ಗೀತಾರ್ಥ ಚಿಂತನೆ-45: ನಮ್ಮ ದಾಖಲೆ ಶುದ್ಧವಾಗಿರುವುದು ಮುಖ್ಯ
Team Udayavani, Sep 25, 2024, 1:53 AM IST
ತಣ್ತೀಜ್ಞಾನದ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಂಡಾಗ ಅತಿ ಸೂಕ್ಷ್ಮ ವಿಷಯಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಉದಾಹರಣೆಗೆ ತಂದೆ ದುಷ್ಟನಿದ್ದ ಎಂದಿಟ್ಟುಕೊಳ್ಳಿ. ಮಗ ಅಂತಿಮ ಸಂಸ್ಕಾರ ಮಾಡಬೇಕೆ ? ಬೇಡವೆ ಎಂಬ ಪ್ರಶ್ನೆ ಬರುತ್ತದೆ. ಪ್ರಹ್ಲಾದನಿಗೇ ಈ ಪ್ರಶ್ನೆ ಬಂತು. ದುಷ್ಟನಾದ ಹಿರಣ್ಯಕಶಿಪುವನ್ನು ಸ್ವತಃ ನರಸಿಂಹ ವಧಿಸಿದ್ದ.
ಇಂತಹ ಸ್ಥಿತಿಯಲ್ಲಿ ಪ್ರಹ್ಲಾದ ಶ್ರಾದ್ಧಾದಿ ಕರ್ಮಗಳನ್ನು ಮಾಡಿದ. ದುರ್ಯೋಧನಾದಿಗಳನ್ನು ಕೊಂದ ಬಳಿಕ ಪಾಂಡವರು ಶ್ರಾದ್ಧಾದಿಗಳನ್ನು ಮಾಡಿದರು. ರಾವಣನನ್ನು ಕೊಂದ ಬಳಿಕ ಶ್ರೀರಾಮನೇ ಹೇಳಿ ವಿಭೀಷಣನಿಂದ ಅಂತಿಮ ಸಂಸ್ಕಾರಗಳನ್ನು ಮಾಡಿಸಿದ. ಬ್ಯಾಂಕ್ ಒಂದು ನಷ್ಟಕ್ಕೊಳಗಾಗಿ ಮುಳುಗಿ ಹೋಯಿತೆಂದು ಇಟ್ಟುಕೊಳ್ಳಿ. ಅಲ್ಲಿ ಮಾಡಿದ ಸಾಲವನ್ನು ತೀರಿಸಬೇಕೋ? ಬೇಡವೋ? ಉತ್ತರವೆಂದರೆ ತೀರಿಸಲೇಬೇಕು. ಒಬ್ಬ ದುಷ್ಟನಿದ್ದಾನೆ. ಆತ ನಮಗೆ ಉಪಕಾರ ಮಾಡಿದ ಎಂದಿಟ್ಟುಕೊಳ್ಳಿ. ಆತನಿಗೆ ಕೃತಜ್ಞತೆ ಸಲ್ಲಿಸಬೇಕೇ? ಬೇಡವೆ? ಸಲ್ಲಿಸಬೇಕು. ಒಬ್ಬ ಕೆಟ್ಟ ವ್ಯಕ್ತಿ ಮರಣ ದಂಡನೆ ಆಯಿತೆಂದು ಇಟ್ಟುಕೊಳ್ಳಿ. ಆತನಿಂದ ನಾವು ಸಾಲ ಪಡೆದಿದ್ದರೆ ಅದನ್ನು ಹಿಂದಿರುಗಿಸಬೇಕೋ? ಬೇಡವೋ? ಉತ್ತರ – ಹಿಂದಿರುಗಿಸಲೇಬೇಕು. ಈ ಎಲ್ಲ ವಿಷಯಗಳಲ್ಲಿ ಮುಖ್ಯ ವಿಷಯವೆಂದರೆ ನಮ್ಮ ಮುಂದಿನ ದಾಖಲೆ ಕ್ಲೀನ್ ಆಗಿರಬೇಕೆಂಬುದು. ಅವರು ಕೆಟ್ಟವರೋ? ಸುಭಗರೋ? ಬ್ಯಾಂಕ್ ನಷ್ಟದಲ್ಲಿದೆಯೋ? ಲಾಭದಲ್ಲಿದೆಯೋ ಮುಖ್ಯವಲ್ಲ.
-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.