UPCL-Kasaragod: 400 ಕೆವಿ ಲೈನ್‌ ಯೋಜನೆಗೆ ವೇಗ; ಪರಿಹಾರದ ಮೊತ್ತ ಹೆಚ್ಚಳ: ಕಂಪೆನಿ


Team Udayavani, Aug 14, 2024, 1:12 AM IST

UPCL-Kasaragod: 400 ಕೆವಿ ಲೈನ್‌ ಯೋಜನೆಗೆ ವೇಗ; ಪರಿಹಾರದ ಮೊತ್ತ ಹೆಚ್ಚಳ: ಕಂಪೆನಿ

ಮಂಗಳೂರು: ಯುಪಿಸಿಎಲ್‌-ಕಾಸರಗೋಡು 400 ಕೆವಿ ವಿದ್ಯುತ್‌ ನಿರ್ಮಾಣ ಕಾಮಗಾರಿಗೆ ಚುರುಕು ನೀಡಲಾಗುತ್ತಿದೆ. ಭೂಸಂತ್ರಸ್ತರನ್ನು ಭೇಟಿಯಾಗಿ ಸಮರ್ಪಕ ದಾಖಲೆ ಸಂಗ್ರಹಿಸಿ, ಪರಿಹಾರ ಮೊತ್ತವನ್ನೂ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಯೋಜನೆಯ ಅನುಷ್ಠಾನಕ್ಕಿರುವ ಉಡುಪಿ ಕಾಸರಗೋಡು ಟ್ರಾನ್ಸ್‌ಮಿಷನ್‌ ಲಿ.(ಯುಕೆಟಿಎಲ್‌) ಅಧಿಕಾರಿಗಳು ತಿಳಿಸಿದ್ದಾರೆ.

2019 ರಲ್ಲಿ ಯುಕೆಟಿಎಲ್‌ ಗುತ್ತಿಗೆಪಡೆದಿದ್ದು, 2022ರ ನವೆಂಬರ್‌ಗೆವಿದ್ಯುತ್‌ ಮಾರ್ಗ ಪೂರ್ಣವಾಗ ಬೇಕಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಆರು ತಿಂಗಳು ವಿಸ್ತರಿಸಲಾಗಿತ್ತು. ಕಾಸರಗೋಡು ಭಾಗದಲ್ಲಿ ಬಹುತೇಕ ಭೂಸ್ವಾಧೀನವಾಗಿದೆ ಎಂದು ಯುಕೆಟಿಎಲ್‌ ತಿಳಿಸಿದೆ.

ಟವರ್‌ ಹಾಕುವ ಹಾಗೂ ವಿದ್ಯುತ್‌ ಸಾಗಣೆಯ ಮಾರ್ಗವನ್ನು ರೈಟಾಫ್ ವೇ ಎಂದು ಗುರುತಿಸಲಾಗಿದೆ. ಪ್ರಸ್ತುತ ಭೂ ಸ್ವಾಧೀನ ದರವನ್ನು ಪರಿಷ್ಕರಿಸಿದ್ದು, ಟವರ್‌ ಹಾಕುವ ಜಾಗದ 2022-23ರ ಸಾಲಿನ ಮಾರ್ಗದರ್ಶಿ ದರದ ಶೇ.85 ರಷ್ಟು ಮೌಲ್ಯದ 4 ಪಟ್ಟು ಗ್ರಾಮೀಣ ಭಾಗ ಹಾಗೂ 3 ಪಟ್ಟು ನಗರ ಭಾಗದಲ್ಲಿ ಪರಿಹಾರ ಅಥವಾ 3 ವರ್ಷದ ವಹಿವಾಟು ದರ ಸರಾಸರಿ (ಯಾವುದು ಹೆಚ್ಚೋ ಅದನ್ನು) ನೀಡಲಾಗುತ್ತದೆ. ರೈಟಾಫ್‌ ವೇ ಕಾರಿಡಾರ್‌ನಲ್ಲಿ ಭೂಸ್ವಾಧೀನ ಮಾಡುವುದಿಲ್ಲ, ಆದರೆ ಮಾರ್ಗದರ್ಶಿ ದರದ ಶೇ.15 ರಷ್ಟು ಮೌಲ್ಯದ 2 ಪಟ್ಟು ದರವನ್ನು ಅಥವಾ ವಹಿವಾಟು ದರ (3 ವರ್ಷದ ಸರಾಸರಿ) ಯಾವುದು ಹೆಚ್ಚೋ ಅದನ್ನು ಕಂಪೆನಿ ನೀಡಲಿದೆ. ಈ ಭೂಮಿಯ ಮಾಲೀಕರು ತೆಂಗು, ಅಡಕೆ ಬೆಳೆಯುವಂತಿಲ್ಲ. ಬೇರೆ ಸಣ್ಣ ಗಿಡ ನೆಡಲು, ತೋಟ ಮಾಡಲು ಅಡ್ಡಿಯಿಲ್ಲ. ಮೂಡುಬಿದಿರೆ ಪ್ರದೇಶದಲ್ಲಿ ಡ್ರ್ಯಾಗನ್‌ ಫ್ರೂಟ್‌ ಬೆಳೆಸಲು ಯೋಜಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

700 ಕೋ.ರೂ. ಯೋಜನೆ
700 ಕೋಟಿ ರೂ. ನ ಯೋಜನೆಯಲ್ಲಿ 500 ಕೋಟಿ ರೂ. ವ್ಯಯಿಸಿರುವ ಸ್ಟಲೈಟ್‌ ಪವರ್‌ನವರು ನಂದಿಕೂರಿನಲ್ಲಿ ಬೇಸ್‌ ಹಾಗೂ ಕಾಸರಗೋಡಿನಲ್ಲಿ ಸಬ್‌ಸ್ಟೇಷನ್‌ ಅನ್ನು ಪೂರ್ಣಗೊಳಿಸಿದ್ದಾರೆ. ಕರ್ನಾಟಕದಲ್ಲಿ 68 ಮತ್ತು ಕೇರಳದಲ್ಲಿ 40 ಕಿಮೀ ಮಾರ್ಗ ಆಗಬೇಕಿದ್ದು, ಕೇರಳ ಭಾಗದಲ್ಲಿ ಸಾಗಣೆ ಗೋಪುರದ ಬೇಸ್‌ ನಿರ್ಮಿಸಲಾಗಿದೆ. ಉಡುಪಿಯ 16 ಕಡೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಮಂಗಳೂರು, ಮೂಡುಬಿದಿರೆ, ಮೂಲ್ಕಿ ತಾಲೂಕಿನಲ್ಲಿ 161 ಕಡೆ ಬೇಸ್‌ ನಿರ್ಮಿಸಬೇಕಿದೆ.

ರಾಷ್ಟ್ರದಲ್ಲಿ ವಿದ್ಯುತ್‌ ಗ್ರಿಡ್‌ ಬಲಪಡಿಸುವ ಯೋಜನೆ ಇದು. ಕರ್ನಾಟಕಕ್ಕೂ ಶೇ.40 ರಷ್ಟು ಪ್ರಯೋಜನ ಸಿಗಲಿದೆ. ವಿದ್ಯುತ್‌ ಸಾಗಣೆಯಿಂದ ಯಾರಿಗೂ ಸಮಸ್ಯೆಯಿಲ್ಲ. ಯೋಜನೆಯ ಮಾರ್ಗನಕ್ಷೆ ಎಲ್ಲವನ್ನೂ ಆರ್‌ಇಸಿ ಕಂಪೆನಿ ಅಂತಿಮಗೊಳಿಸಿದ್ದು, ನಾವು ಮಾರ್ಗವನ್ನು ನಿರ್ಮಿಸುತ್ತಿದ್ದೇವೆ ಎಂದು ಕಂಪೆನಿಯ ಯೋಜನಾ ನಿರ್ದೇಶಕ ಕಮಲೇಶ್‌ ಗರ್ಗ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.