ಅಮೆರಿಕದ ಅರ್ಥ ವ್ಯವಸ್ಥೆ ರೇಟಿಂಗ್‌ ಇಳಿಕೆ: ರೇಟಿಂಗ್ಸ್‌ ತಗ್ಗಿಸಿದ್ದಕ್ಕೇನು ಕಾರಣ?


Team Udayavani, Aug 4, 2023, 12:22 AM IST

fitch rating

ಜಗತ್ತಿನ ಪ್ರಬಲ ರಾಷ್ಟ್ರ ಅಮೆರಿಕದ ಅರ್ಥ ವ್ಯವಸ್ಥೆಗೆ ರೇಟಿಂಗ್‌ ಸಂಸ್ಥೆ, ಫಿಚ್‌ ನೀಡಿದ ಟ್ರಿಪಲ್‌ಎ (AA)ಯಿಂದ ಎಎ ಪ್ಲಸ್‌ (AA+)ಗೆ ಇಳಿಕೆ ಮಾಡಲಾಗಿದೆ. ನಿರ್ಧಾರದ ಹಿಂದಿನ ಕಾರಣಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನೇತೃತ್ವದ ಸರಕಾರದ ಕ್ಲಿಷ್ಟಕರವಾದ ಬಜೆಟ್‌ ಪ್ರಕ್ರಿಯೆ ಮತ್ತು ಹಣಕಾಸು ನೀತಿಗಳಿಂದಾಗಿ ಜಗತ್ತಿನ ಪ್ರಮುಖ ರೇಟಿಂಗ್ಸ್‌ ಸಂಸ್ಥೆ ಫಿಚ್‌ ಆ ದೇಶದ ಅರ್ಥ ವ್ಯವಸ್ಥೆಗೆ ನೀಡಿದ್ದ ಟ್ರಿಪಲ್‌ ಎ (AAA) ರೇಟಿಂಗ್ಸ್‌­ನಿಂದ ಎಎ ಪ್ಲಸ್‌ (AA+)ಗೆ ಇಳಿಕೆ ಮಾಡಿದೆ. ಸರಕಾರದಲ್ಲಿ ಹೆಚ್ಚುತ್ತಿರುವ ಸಾಲದ ಹೊರೆ ಮುಂದಿನ 3 ವರ್ಷಗಳಲ್ಲಿ ಬಿಗಡಾ­ಯಿಸಲಿರುವ ಅರ್ಥ ವ್ಯವಸ್ಥೆ­ಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದೆ.

ಹಿಂದೆಯೂ ಆಗಿತ್ತು
ಅಂದ ಹಾಗೆ ಅಮೆರಿಕದ ಅರ್ಥ ವ್ಯವ ಸ್ಥೆಯ ರೇಟಿಂಗ್ಸ್‌ ತಗ್ಗಿಸಿದ್ದು ಮೊದಲಲ್ಲ. 2011ರಲ್ಲಿ ಸ್ಟಾಂಡರ್ಡ್‌ ಆ್ಯಂಡ್‌ ಪೂರ್‌ ಟ್ರಿಪಲ್‌ ಎ ರೇಟಿಂಗ್ಸ್‌ ಅನ್ನು ತಗ್ಗಿಸಿತ್ತು. ಆಗ ನಿರುದ್ಯೋಗ ಪ್ರಮಾಣ ಶೇ.9 ಆಗಿತ್ತು. ಪ್ರಸಕ್ತ ಸನ್ನಿವೇಶದಲ್ಲಿ ಶೇ.3.6 ಇದೆ. ಹೀಗಾಗಿ ಪರಿಸ್ಥಿತಿ ಉತ್ತಮವೇ ಎಂಬ ವಾದಗಳನ್ನು ಮುಂದಿಡಲಾಗುತ್ತಿದೆ.

22 ವರ್ಷಗಳಲ್ಲಿ ಅಧಿಕ
ಅಮೆರಿಕ ಹೊಂದುತ್ತಿರುವ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಏರಿಕೆಯಾಗುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ಫೆಡರಲ್‌ ರಿಸರ್ವ್‌ 22 ವರ್ಷಗಳಿಗೆ ಹೋಲಿಕೆ ಮಾಡಿದರೆ ಅಧಿಕವೆಂಬಂತೆ ಬಡ್ಡಿದರ ಏರಿಕೆ ಮಾಡಿತ್ತು. 2025ರ ವೇಳೆಗೆ ಅಮೆರಿಕದ ಸಾಲ ಪ್ರಮಾಣ ಅಲ್ಲಿನ ಜಿಡಿಪಿಯ ಶೇ.118ರ ವರೆಗೆ ಜಿಗಿಯಬಹುದು ಎಂದಿದೆ ಫಿಚ್‌.

ಅದರ ಪ್ರಭಾವ ಏನು?
ಅಂದಾಜು ಮಾಡಿದಂತೆ ಅತ್ಯಂತ ಕಳವಳಕಾರಿ ಎನ್ನಬಹುದಾದ ಪ್ರಭಾವ ಅಮೆರಿಕ ಮತ್ತು ಜಗತ್ತಿನ ಅರ್ಥ ವ್ಯವಸ್ಥೆಯ ಮೇಲೆ ಸದ್ಯಕ್ಕೆ ಬೀರಲಾರದು ಎಂಬ ವಾದಗಳು ಕೇಳಿ ಬಂದಿವೆ. ಆದರೆ ಅಮೆರಿಕ, ಯು.ಕೆ. ಸಹಿತ ಪ್ರಬಲ ಅರ್ಥ ವ್ಯವಸ್ಥೆಗಳ ಮೇಲೆ ಇರುವ ಆತಂಕದ ಛಾಯೆ ಇನ್ನೂ ಸರಿದಿಲ್ಲ ಎನ್ನುವುದು ಮತ್ತಷ್ಟು ಸ್ಪಷ್ಟವಾಗಿದೆ. ಹೀಗಾಗಿಯೇ ಭಾರತ ಸಹಿತ ಜಗತ್ತಿನ ಹಲವು ರಾಷ್ಟ್ರಗಳ ಷೇರು ಮಾರುಕಟ್ಟೆಗಳಲ್ಲಿ ಪದೇ ಪದೆ ಏರಿಳಿತಗಳು ಉಂಟಾಗುತ್ತಿವೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.