Karnataka: ಕೃಷಿ ಸಾಲ ಮಿತಿ ವಿಸ್ತರಣೆ ಯಾವಾಗ?
ಕೃಷಿಕರಿಗೆ ಅತ್ಯುಪಯುಕ್ತ ಅಲ್ಪಾವಧಿ, ಮಧ್ಯಮಾವಧಿ ಸಾಲ
Team Udayavani, Sep 10, 2023, 12:30 AM IST
ಮಂಗಳೂರು: ಸಣ್ಣ, ಮಧ್ಯಮ ಕೃಷಿಕರಿಗೆ ಬಹಳ ಪ್ರಯೋಜನಕಾರಿಯಾಗುವ ಅಲ್ಪಾವಧಿ ಶೂನ್ಯ ಬಡ್ಡಿದರದ ಸಾಲದ ಮಿತಿಯನ್ನು 3ರಿಂದ 5 ಲಕ್ಷ ರೂ.ಗಳಿಗೆ ಏರಿಸುವ ರಾಜ್ಯ ಸರಕಾರದ ಭರವಸೆ ಇನ್ನೂ ಕಾರ್ಯಗತಗೊಂಡಿಲ್ಲ.
ಅಷ್ಟೇ ಅಲ್ಲ ಶೇ. 3ರ ಸುಲಭ ಬಡ್ಡಿದರದಲ್ಲಿ ಕೃಷಿ ಅಗತ್ಯಗಳಿಗಾಗಿ ಪಡೆಯುವ ಸಾಲದ ಮಿತಿಯನ್ನು 10ರಿಂದ 15 ಲಕ್ಷ ರೂ.ಗಳಿಗೆ ವಿಸ್ತರಿಸುವ ಘೋಷಣೆಯೂ ಹಾಗೆಯೇ ಉಳಿದುಕೊಂಡಿದೆ.
ಈ ಕೃಷಿ ಹಂಗಾಮಿನಿಂದಲೇ ಆಶ್ವಾಸನೆ ಜಾರಿಗೊಳಿಸ ಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿ 2 ತಿಂಗಳುಗಳಾಗಿವೆ. ಲಭ್ಯಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರ ಬಜೆಟ್ನಲ್ಲಿ ಈ ಘೋಷಣೆಗಳಾ ಗಿದ್ದು, ಹಣಕಾಸು ಇಲಾಖೆಯ ಪರಿಶೀಲನೆಯಲ್ಲೇ ಇದೆ.
ಕೃಷಿಕರಿಗೆ ಅಲ್ಪಾವಧಿಯ ಕೃಷಿ ಉಪಯೋಗಕ್ಕೆ ಸಾಲವನ್ನು 3ರಿಂದ 5 ಲಕ್ಷ ರೂ.ವರೆಗೆ ವಿಸ್ತರಣೆ ಮಾಡಿದರೆ ಉತ್ತಮ. ಹಲವು ವರ್ಷಗಳಿಂದ ಈ ಮೊತ್ತ 3 ಲಕ್ಷ ರೂ.ಗಳಲ್ಲೇ ಇದೆ, ಬೆಲೆ ಏರಿಕೆಗೆ ಅನುಗುಣವಾಗಿ ಮೊತ್ತವನ್ನೂ ಪರಿಷ್ಕರಿಸಿ ನೀಡಿದರೆ ಉತ್ತಮ ಎಂದು ಕೃಷಿಕರೊಬ್ಬರು ಹೇಳುತ್ತಾರೆ. ಕೃಷಿ ಅಭಿವೃದ್ಧಿ ಮಾಡುವುದಕ್ಕೆ ಈ ಅಲ್ಪಾವಧಿ ಸಾಲದ ವಿಸ್ತರಣೆ ಹಾಗೂ 10ರಿಂದ 15 ಲಕ್ಷ ರೂ.ಗೆ ಮಧ್ಯಮಾವಧಿ ಸಾಲ ವಿಸ್ತರಣೆ ಮಾಡುವುದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ.
ಇನ್ನೂ ಕೃಷಿ ಸಾಲ ಮಿತಿ ವಿಸ್ತರಣೆ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದಿಲ್ಲ, ಶೀಘ್ರ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿದ್ದೇವೆ.
-ಆಶಾ ಕೆ.ಎಂ., ಸಹಕಾರಿ ಇಲಾಖೆಯ
ಹೆಚ್ಚುವರಿ ರಿಜಿಸ್ಟ್ರಾರ್, ಸಾಲ ವಿಭಾಗ
ಶೇ. 3 ಹಾಗೂ ಶೂನ್ಯ ಬಡ್ಡಿದರದ ಸಾಲದ ಮಿತಿ ವಿಸ್ತರಣೆ ಕುರಿತು ಸರಕಾರದ ಆದೇಶ ಶೀಘ್ರ ಆಗಲಿದೆ. ಈಗಾಗಲೇ ಇದು ಅಂತಿಮ ಗೊಂಡಿದೆ, ಆದೇಶದ ಪ್ರತಿಯೂ ಲಭ್ಯವಾಗಲಿದೆ.
-ಕ್ಯಾ| ರಾಜೇಂದ್ರ ಕೆ., ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು
~ ವೇಣುವಿನೋದ್ ಕೆ.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.